ದೇಶದಲ್ಲಿ ಹೊಸದಾಗಿ 100 ವಿಮಾನ ನಿಲ್ದಾಣ ಸ್ಥಾಪನೆ!
Recommended Video

ಬೆಂಗಳೂರು, ಸೆಪ್ಟೆಂಬರ್ 5: ದೇಶದಲ್ಲಿ ಮುಂದಿನ ಹದಿನೈದು ವರ್ಷಗಳಲ್ಲಿ 100 ವಿಮಾನ ನಿಲ್ದಾಣಗಳನ್ನು ನಿರ್ಮಿಸಲಾಗುತ್ತದೆ ಎಂದು ಕೇಂದ್ರ ವಿಮಾನಯಾನ ಸಚಿವ ಸುರೇಶ್ ಪ್ರಭು ತಿಳಿಸಿದ್ದಾರೆ.
ನವದೆಹಲಿಯಲ್ಲಿ ವಿಮಾನಯಾನ ಶೃಂಗ ಸಭೆಯಲ್ಲಿ ಮಾತನಾಡಿದ ಅವರು ಮುಂದಿನ 15 ವರ್ಷಗಳಲ್ಲಿ 100 ವಿಮಾನ ನಿಲ್ದಾಣಗಳನ್ನು ನಿರ್ಮಿಸಲಾಗುತ್ತಿದ್ದು ಒಟ್ಟು 4.2ಲಕ್ಷ ಕೋಟಿ ವೆಚ್ಚವಾಗಲಿದೆ. ಬೆಳವಣಿಗೆ ದೃಷ್ಟಿಯಲ್ಲಿ ನೋಡುವುದಾದರೆ ವಿಶ್ವದಲ್ಲಿಯೇ ಭಾರತ ವಿಮಾನಯಾನ ವಲಯ ತ್ವರಿತ ವೇಗವನ್ನು ಹೊಂದಿದೆ ಎಂದು ತಿಳಿಸಿದರು.
ಜಾಗತಿಕ ಏರ್ಲೈನ್ಸ್ ಸಂಸ್ಥೆ ಐಎಟಿಎ ಪ್ರಕಾರ ವಿಮಾನಯಾನ ಪ್ರಯಾಣಿಕರ ಮಾರುಕಟ್ಟೆಯಲ್ಲಿ ಭಾರತವು, ಜರ್ಮನಿ, ಜಪಾನ್, ಸ್ಪೇನ್ ಹತ್ತು ವರ್ಷದಲ್ಲಿ ಹಿಂದಿಕ್ಕಲಿದೆ. ಮುಂದಿನ ದಿನಗಳಲ್ಲಿ ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ವಿಮಾನ ನಿಲ್ದಾಣಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ವಿಮಾನಯಾನ ಸಂಸ್ಥೆಗಳು ಈ ವರ್ಷ 13 ಸಾವಿರ ಕೋಟಿ ನಷ್ಟ ಅನುಭವಿಸುವ ಸಾಧ್ಯತೆ ಇದೆ ಎಂದು ವಿಮಾನಯಾನ ಕನ್ಸೆಲ್ಟಿಂಗ್ ಸಂಸ್ಥೆಯೊಂದು ಹೇಳಿದೆ. ಪ್ರಯಾಣಿಕರನ್ನು ಆಕರ್ಷಿಸುವ ನಿಟ್ಟಿನಲ್ಲಿ ವಿಮಾನ ಯಾನ ಸಂಸ್ಥೆಗಳು ವಿವಿಧ ಕೊಡುಗೆಗಳನ್ನು ನೀಡಿತ್ತು.ಹಾಗಾಗಿ ಇದರಿಂದ ನಷ್ಟ ಅನುಭವಿಸಲಿದೆ ಎಂದು ತಿಳಿಸಿದೆ.

ವಿಮಾನಯಾನದ ದರ ಅಗ್ಗ
ವಿಮಾನಯಾನ ದರವೇ ಅಗ್ಗ ಯಾಕೆಂದರೆ ಇಬ್ಬರು ವ್ಯಕ್ತಿಗಳು ಆಟೋರಿಕ್ಷಾದಲ್ಲಿ ತೆರಳಲು 10ರೂ. ವ್ಯಯಿಸುತ್ತಾರೆ, ಅವರಿಗೆ ಪ್ರತಿ ಕಿ.ಮೀಗೆ ಐದು ರೂ ಶುಲ್ಕ ಬೀಳುತ್ತದೆ. ಆದರೆ ಕಿಲೋಮೀಟರ್ ಅಂದಾಜಿನಲ್ಲಿ ವಿಮಾನದಲ್ಲಾದರೆ ಪ್ರತಿ ಕಿ.ಮೀಗೆ 4ರೂ. ಮಾತ್ರ ಬೀಳುತ್ತದೆ ಹಾಗಾಗಿ ವಿಮಾನದ ಆಟೋರಿಕ್ಷಾಗಿಂತಲೂ ಅಗ್ಗ ಎನ್ನಬಹುದು ಎಂದರು.

ದೂರದ ಪ್ರಯಾಣಕ್ಕೆ ವಿಮಾನಯಾನ ಆಯ್ಕೆ ಒಳ್ಳೆಯದು
ಆಟೋರಿಕ್ಷಾಗಿಂತಲೇ ವಿಮಾನಯಾನ ಪ್ರಯಾಣ ಶುಲ್ಕ ಕಡಿಮೆ ಎನ್ನುವ ಸಚಿವರ ಮಾತಿಗೆ ಹಲವು ಆಕ್ಷೇಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಸ್ಪಷ್ಟನೆ ನೀಡಿರುವ ಅವರು ದೂರದ ಪ್ರಯಾಣಕ್ಕೆ ವಿಮಾನಯಾನ ಆಯ್ದುಕೊಂಡರೆ ಒಳ್ಳೆಯದು, ಬೇರೆ ಮಾದರಿಯ ಪ್ರಯಾಣಕ್ಕೆ ಹೋಲಿಸಿದರೆ ವಿಮಾನನಯಾನ ದರ ಕಡಿಮೆ ಇರುತ್ತದೆ.ಅದರಲ್ಲೂ ಅಲ್ಪ ದೂರದ ಪ್ರಯಾಣಕ್ಕೆ ವಿಮಾನವನ್ನೇ ಬಳಸಬಹುದು ಎಂದರು.

ಕೈಗೆಟುಕುವ ದರದಲ್ಲಿ ವಿಮಾನಯಾನಕ್ಕೆ ಕ್ರಮ
ವಿಮಾನಯಾನವು ಎಲ್ಲಾ ಜನತೆಯ ಕೈಗೆಟುಕುವಂತೆ ಮಾಡಲು ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದೆ. 2013ರಲ್ಲಿ 6 ಕೋಟಿ ಜನರು ವಿಮಾನದಲ್ಲಿ ಪ್ರಯಾಣ ಮಾಡುತ್ತಿದ್ದರು. ಇದೀಗ 12ಕೋಟಿಗೂ ಹೆಚ್ಚು ಜನರು ವಿಮಾನದಲ್ಲಿ ಪ್ರಯಾಣ ಮಾಡುತ್ತಿದ್ದಾರೆ. ಆದರೆ ಅಧ್ಯಕ್ಕೆ ದೇಶದಲ್ಲಿ 75 ವಿಮಾನ ನಿಲ್ದಾಣಗಳಿದ್ದು ಅವುಗಳನ್ನು 100ಕ್ಕೆ ಏರಿಸುವ ಚಿಂತನೆ ಇದೆ ಎಂದು ಅವರು ತಿಳಿಸಿದರು.

2018ರಲ್ಲಿ 13ಸಾವಿರ ಕೋಟಿ ನಷ್ಟ
ಈ ವರ್ಷದಲ್ಲಿ ವಿಮಾನಯಾನ ಸಂಸ್ಥೆಗಳು ಸಾಕಷ್ಟು ಯೋಜನೆಗಳನ್ನು ಹಾಕಿಕೊಂಡಿದ್ದವು. ಪ್ರಯಾಣಿಕರನ್ನು ಸೆಳೆಯಲು ವಿವಿಧ ಕೊಡುಗೆಗಳನ್ನು ನೀಡಿದರೂ ಪ್ರಯಾಣಿಕರ ಸಂಖ್ಯೆಯೇನು ಹೆಚ್ಚಾಗಿರಲಿಲ್ಲ. ಆದರೆ ಸಂಸ್ಥೆಗಳಿಗೆ ಸುಮಾರು 13 ಕೋಟಿ ನಷ್ಟಅನುಭವಿಸುವ ಸಾಧ್ಯತೆ ಇದೆ ಎಂದು ವಿಮಾನಯಾನ ವಲಯದ ಕನ್ಸೆಲ್ಟಿಂಗ್ ಸಂಸ್ಥೆ ಸಿಎಪಿಎ ಇಂಡಿಯಾ ತಿಳಿಸಿದೆ.
-
ವೈಭವ್ ಸೂರ್ಯವಂಶಿ ಆಕ್ರಮಣಕಾರಿ ಆಟಕ್ಕೆ ಇಂಗ್ಲೆಂಡ್ ಮೈಕೆಲ್ ವಾಘನ್ ಫಿದಾ; ಬಿಸಿಸಿಐಗೆ ವಿಶೇಷ ಮನವಿ -
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Summer Drinks: ಬಿಸಿಲಿನಲ್ಲಿ ದೇಹಕ್ಕೆ ಬೆಸ್ಟ್ ಡ್ರಿಂಕ್ ಯಾವುದು? ಎಳನೀರು ಅಥವಾ ಮಜ್ಜಿಗೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ












Click it and Unblock the Notifications