ಪದ್ಮಾವತಿ ಸಿನೆಮಾ ವಿವಾದ : ಶಶಿ ತರೂರ್ ಕಾಲೆಳೆದ ಸ್ಮೃತಿ ಇರಾನಿ
ನವದೆಹಲಿ, ನವೆಂಬರ್ 18 : ಸ್ಮೃತಿ ಇರಾನಿ ಅದ್ಬುತ ಮಾತುಗಾರ್ತಿ, ತಮ್ಮ ತಂಟೆಗೆ ಬಂದವರನ್ನು ಸುಮ್ಮನೆ ಬಿಟ್ಟವರಲ್ಲ, ತಮ್ಮ ಪ್ರಕರ ವಾಗ್ಝರಿಯಿಂದ ಬಿಸಿ ತಟ್ಟಿಸದೆ ಬಿಡರು.
ಈ ಬಾರಿ ಸ್ಮೃತಿ ಇರಾನಿ ವಾಗ್ಬಾಣ ಹರಿದಿರುವುದು ಕಾಂಗ್ರೆಸ್ ಹಿರಿಯ ಮುಖಂಡ, ಸ್ವತಃ ಅತ್ಯುತ್ತಮ ವಾಗ್ಮಿಯಾಗಿರುವ ಶಶಿ ತರೂರ್ ಅವರ ಮೇಲೆ. ಶಶಿ ತರೂರ್ ಅವರೇನು ಸ್ಮೃತಿ ಅವರ ಬಗ್ಗೆ ಮಾತನಾಡಿಲ್ಲ ಆದರೆ 'ಪದ್ಮಾವತಿ' ಚಿತ್ರಕ್ಕೆ ಬೆಂಬಲ ಸೂಚಿಸಿ ರಾಜರುಗಳ ಬಗ್ಗೆ ಅವರು ಆಡಿದ್ದ ಮಾತು ಸ್ಮೃತಿ ಇರಾನಿ ಅವರನ್ನು ಕೆರಳಿಸಿದೆ.

ಶಶಿ ತರೂರ್ ಅವರು ಮೊನ್ನೆ 'ಈಗ ಯಾರು ತಾವು ಪರಾಕ್ರಮಿ ಮಹಾರಾಜರೆಂದು ಹೇಳಿಕೊಳ್ಳುತ್ತಿದ್ದಾರೊ ಅದೇ ರಾಜರು ಅಂದು ತಮ್ಮ ಅನುಕೂಲಕ್ಕಾಗಿ ಬ್ರಿಟೀಷರ ಮುಂದೆ ಮಂಡಿಯೂರಿ ಕೂತಿದ್ದರು. ಈಗ ಅವರು ತಮ್ಮ ಮರ್ಯಾದೆ, ಗೌರವ ಎಂದೆನ್ನುತ್ತಾ ಸಿನಿಮಾ ತಯಾರಿಕರ ಮೇಲೆ ಪೌರುಷ ತೋರುತ್ತಿದ್ದಾರೆ' ಎಂದಿದ್ದರು.
क्या सभी महाराजाओं ने ब्रिटिश के सामने घुटने टेके थे??? शशि थरूर की इस टिप्पणी पर क्या कहेंगे ज्योतिरादित्य सिंधिया, दिग्गी राजा और अमरिंदर सिंह? https://t.co/1GY9RiPut4
— Smriti Z Irani (@smritiirani) November 17, 2017
ಇದಕ್ಕೆ ಪ್ರತಿ ಟ್ವೀಟ್ ಮಾಡಿರುವ ಸ್ಮೃತಿ ಇರಾನಿ ಅವರು ಕಾಂಗ್ರೆಸ್ ನಲ್ಲಿನ ರಾಜಮನೆತನದಿಂದ ಬಂದಂತಹಾ ಮುಖಂಡರನ್ನು ಉಲ್ಲೇಖಿಸಿ ಇವರೆಲ್ಲಾ ಬ್ರಿಟೀಷರ ವಿರುದ್ಧ ಮಂಡಿಯೂರಿದ್ದರಾ, ಶಶಿ ತರೂರ್ ಅವರ ಮಾತಿನ ಬಗ್ಗೆ ಕಾಂಗ್ರೆಸ್ ನ ಮಹಾರಾಜ ಸಂತಿತಯವರು ಏನು ಹೇಳುತ್ತಾರೆ? ಎಂದು ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ಶಿಂಧಿಯಾ, ದಿಗ್ವಿಜಯ್ ಸಿಂಗ್, ಅಮರಿಂದರ್ ಸಿಂಗ್, ಮುಂತಾದವರು ರಾಜಮನೆತನದ ಇತಿಹಾಸ ಉಳ್ಳ ಕುಟುಂಬದವರು. ಇವರ ಹೆಸರುಗಳನ್ನು ಸ್ಮೃತಿ ಇರಾನಿ ತಮ್ಮ ಟ್ವೀಟ್ ನಲ್ಲಿ ಉಲ್ಲೇಖಿಸಿದ್ದಾರೆ.
1/2 कुछ भाजपाई अंधभक्तों द्वारा साज़िशन झूठा प्रचार किया जा रहा है कि मैंने राजपूत समाज के सम्मान के ख़िलाफ़ टिप्पणी की हैI मैंने राष्ट्र हित में अंग्रेज़ हकूमत के कार्यकाल का विरोध करते हुए ऊन राजाओं की चर्चा की थी जो स्वतंत्रता संग्राम में अंग्रेज़ के साथ थे।
— Shashi Tharoor (@ShashiTharoor) November 16, 2017
ನಂತರ ತಮ್ಮ ಮಾತಿಗೆ ಸ್ಪಷ್ಟೀಕರಣ ನೀಡಿದ ಶಶಿ ತರೂರ್ , "ಕೆಲವು ಬಿ.ಜೆ.ಪಿ ಬೆಂಬಲಿಗರು ನಾನು ರಜಪೂತರಿಗೆ ಅವಮಾನ ಮಾಡಿದ್ದೇನೆ ಎಂದು ಮಾತನಾಡುತ್ತಿದ್ದಾರೆ. ಆದರೆ ನಾನು ಹೇಳಿರುವುದು ಬ್ರಿಟೀಷರೊಂದಿಗೆ ತಮ್ಮ ಅನುಕೂಲಕ್ಕಾಗಿ ರಾಜಿ ಮಾಡಿಕೊಂಡವರ ಬಗ್ಗೆ ಮಾತ್ರ, ನಾನು ಯಾವುದೇ ಸಮುದಾಯ ಕುರಿತು ಹೇಳಿಲ್ಲ' ಎಂದಿದ್ದಾರೆ.
-
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ












Click it and Unblock the Notifications