ಶಶಿ ತರೂರ್‌ಗೆ ಪೊಲೀಸರು ಸಿದ್ಧಪಡಿಸಿರುವ 11 ಪ್ರಶ್ನೆಗಳು

ನವದೆಹಲಿ, ಜ. 16: ಸುನಂದಾ ಪುಷ್ಕರ್‌ ಅವರದ್ದು ಪಕ್ಕಾ ಕೊಲೆ ಎಂದು ಪೊಲೀಸ್ ಇಲಾಖೆ ಈಗಾಗಲೇ ಸ್ಪಷ್ಟಪಡಿಸಿದೆ. ಕೊಲೆ ಆರೋಪಿ ಬಂಧಿಸಲು ಎಲ್ಲ ನಿಟ್ಟಿನಿಂದಲೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಸುನಂದಾ ಪುಷ್ಕರ್ ಅವರು ಐಪಿಎಲ್ ಹಾಗೂ ಮೆಹರ್ ತರಾರ್ ವಿಷಯದಲ್ಲಿ ತೀವ್ರ ಅಸಮಾಧಾನಗೊಂಡಿದ್ದರು. ಈ ಕುರಿತು ಕುಟುಂಬದ ಇತರ ಸದಸ್ಯರಲ್ಲಿ ಆತಂಕ ತೋಡಿಕೊಂಡಿದ್ದರು. ಅಲ್ಲದೆ, ಹವಾಲಾ ಆಪರೇಟರ್ ಜೊತೆ ಸುನಂದಾ ಮಾತುಕತೆ ನಡೆಸಿದ್ದರು ಎನ್ನಲಾಗಿದೆ. [ಕೊಲೆ ದೃಢಪಡಿಸಿದ್ದು ಗಾಯ ಸಂ. 10]

sunanda

ಕೇಟಿ ಎನ್ನಲಾದ ಕ್ಯಾಥರೀನ್ ಅಬ್ರಹಾಂ ಹೆಸರೂ ತನಿಖೆ ಮಧ್ಯೆ ಕೇಳಿಬಂದಿದೆ. ಅವರು ತಿರುವನಂತಪುರಂನ ಓರ್ವ ಲೇಖಕಿ. ಅವರೊಂದಿಗೆ ಶಶಿ ತರೂರ್ ಸಲುಗೆ ಹೊಂದಿದ್ದು ಸುನಂದಾ ಅಸಮಾಧಾನಕ್ಕೆ ಕಾರಣವಾಗಿತ್ತು. ಆದ್ದರಿಂದ ಅವರನ್ನೂ ಪ್ರಶ್ನೆಗೊಳಪಡಿಸುವ ನಿರೀಕ್ಷೆಯಿದೆ. [ಕೊಲೆ ತನಿಖೆ ಕಬ್ಬಿಣದ ಕಡಲೆ]

ಮೋಯಿನ್ ಖುರೇಶಿ ಎಂಬ ಹವಾಲಾ ಏಜೆಂಟ್‌ಗೆ ಸುನಂದಾ ಕಳುಹಿಸಿದ್ದ ಸಂದೇಶಗಳನ್ನೂ ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದಾರೆ.

ಆದ್ದರಿಂದ ಶಶಿ ತರೂರ್ ವಿಚಾರಣೆಗೆ ಸಿದ್ಧತೆ ಆರಂಭಿಸಿರುವ ವಿಶೇಷ ತನಿಖಾ ದಳ 11 ಮುಖ್ಯ ಪ್ರಶ್ನೆಗಳನ್ನು ಸಿದ್ಧಪಡಿಸಿಕೊಂಡಿದೆ. ಪ್ರಶ್ನೆಗಳು ಈ ಕೆಳಗಿನಂತಿವೆ. [ತರಾರ್ ಜೊತೆ 3 ರಾತ್ರಿ ಕಳೆದರೇ ತರೂರ್?]

  • ಸುನಂದಾ ಅವರಿಗೆ ಇಂಜೆಕ್ಷನ್ ಅಗತ್ಯವಿತ್ತೇ?
  • ಪುಷ್ಕರ್ ಎಡಗೈಯಲ್ಲಿದ್ದ ಗಾಯದ ಕುರಿತು ತಿಳಿಸಿರಿ.
  • ಅವರಿಗೆ ವಿಷ ಸಿಕ್ಕಿದ್ದು ಹೇಗೆ? [ಇಂಜೆಕ್ಷನ್ ಚುಚ್ಚಿದ್ದು ಪರಿಚಿತರು]
  • ಸುನಂದಾ ಕೈ ಕಚ್ಚುವಂತಹ ಮಾರಾಮಾರಿ ಏನಾದರೂ ನಡೆದಿತ್ತೇ?
  • ನಿಮ್ಮ ಮತ್ತು ಅವರ ಮಧ್ಯೆ ಸಂಬಂಧ ಹೇಗಿತ್ತು?
  • ಐಪಿಎಲ್ ಮತ್ತು ಮೆಹರ್ ತರಾರ್ ವಿವಾದದ ನಂತರ ಸುನಂದಾ ಏಕೆ ನಿರುತ್ಸಾಹಗೊಂಡಿದ್ದರು?
  • ನೀವು ವೈದ್ಯಕೀಯ ವರದಿ ಮೇಲೆ ಪ್ರಭಾವ ಬೀರಲು ಯತ್ನಿಸಿದರೇ?
  • ಐಪಿಎಲ್‌ನಿಂದ ಸುನಂದಾ ಅವರು ಹಣ ಕಳೆದುಕೊಂಡಿದ್ದರೇ?
  • ಕೇಟಿ ಜೊತೆ ನೀವು ಹೊಂದಿದ್ದ ಸಂಬಂಧವೇನು?
  • ಮೆಹರ್ ತರಾರ್ ವಿವಾದವೇನು?
  • ಮೋಯಿನ್ ಕುರೇಶಿ ಜೊತೆ ಇದ್ದ ಸಂಪರ್ಕ ಎಂತಹದ್ದು?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+