ಜಾರಿ ನಿರ್ದೇಶನಾಲಯದಿಂದ ನಳಿನಿ ಚಿದಂಬರಂಗೆ ಸಮನ್ಸ್
ನವದೆಹಲಿ, ಆಗಸ್ಟ್ 24: ಬಹುಕೋಟಿ ಶಾರದಾ ಚಿಟ್ ಫಂಡ್ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದಿಂದ ನಳಿನಿ ಚಿದಂಬರಂ ಅವರಿಗೆ ಸಮನ್ಸ್ ಜಾರಿ ಮಾಡಲಾಗಿದೆ. ಕೇಂದ್ರದ ಮಾಜಿ ವಿತ್ತ ಸಚಿವ ಪಿ ಚಿದಂಬರಂ ಅವರ ಪತ್ನಿ ನಳಿನಿ ಅವರನ್ನು ವಿಚಾರಣೆಗೊಳಪಡಿಸುವ ಸಾಧ್ಯತೆಯಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಳಿನಿ ಅವರ ವಿಚಾರಣೆ ನಡೆಸಲು ಸಮನ್ಸ್ ನೀಡಲಾಗಿದೆ. ಇದಕ್ಕೂ ಮುನ್ನ ಸಿಬಿಐ ತಂಡ ನಳಿನಿ ಅವರ ವಿರುದ್ಧ ಚಾರ್ಜ್ ಶೀಟ್ ಹಾಕಿದ್ದಾರೆ. [ಕೊಚ್ಚಿ ಸೆಕ್ಸ್ ಹಗರಣ ಕೊಚ್ಚೆಯಲ್ಲಿ ಚಿದಂಬರಂ?]

ಆದರೆ, ಹಗರಣದಲ್ಲಿ ನಳಿನಿ ಅವರ ಪಾತ್ರದ ಬಗ್ಗೆ ಯಾವುದೇ ಸ್ಪಷ್ಟನೆ ಇಲ್ಲ. ಆರೋಪಿ ಅಥವಾ ಸಾಕ್ಷಿಯಾಗಿ ಹೆಸರಿಸಿಲ್ಲ, ಮಾಹಿತಿದಾರರಾಗಿ ಬಳಕೆಯಾಗಿರುವ ಸಾಧ್ಯತೆಯಿದೆ.[ಚಿಟ್ ಫಂಡ್ ಹಗರಣ : ನಟ ಮಿಥುನ್ ಹಣ ವಾಪಸ್ ಮಾಡಿದ್ದೇಕೆ?]
2013ರ ಶಾರದಾ ಚಿಟ್ ಫಂಡ್ ಹಗರಣ ಪಶ್ಚಿಮ ಬಂಗಾಲ ರಾಜ್ಯದಿಂದ ದೇಶದ ವಿವಿಧೆಡೆ ಹಬ್ಬಿದ್ದು, ಅನೇಕ ಗಣ್ಯರಿಗೆ ಹಣ ಸಂದಾಯವಾಗಿದೆ.

ಸುಮಾರು 20,000 ಕೋಟಿ ರು ಮೌಲ್ಯ ಹಗರಣದ ರುವಾರಿಗಳಾದ ಪಶ್ಚಿಮ ಬಂಗಾಳದ ಬ್ಲೇಡ್ ಕಂಪನಿ ಸ್ಥಾಪಕರು ಸದ್ಯ ಜೈಲಿನಲ್ಲಿದ್ದಾರೆ. ತನಿಖೆ ಮುಂದುವರೆದಿದೆ.












Click it and Unblock the Notifications