Get Updates
Get notified of breaking news, exclusive insights, and must-see stories!

ರಿಸರ್ವ್ ಬ್ಯಾಂಕ್ ಆಫ್ ಕೈಲಾಸ: ನಿತ್ಯಾನಂದನ ಹೊಸ ವರಸೆ

ನವದೆಹಲಿ, ಆಗಸ್ಟ್‌ 22: ಈಕ್ವೆಡಾರ್ ಕರಾವಳಿಯ ಒಂದು ಸಣ್ಣ ದ್ವೀಪದಲ್ಲಿ ತನ್ನ ಅನುಯಾಯಿಗಳೊಂದಿಗೆ ನೆಲಸಿರುವ ನಿತ್ಯಾನಂದ, ಗಣೇಶ ಚತುರ್ಥಿ ದಿನದಂದು ತಮ್ಮ ಸ್ವಂತ ಬ್ಯಾಂಕ್ ಅನ್ನು ಸಹ ಪ್ರಾರಂಭಿಸುವುದಾಗಿ ಘೋಷಿಸಿದರು. ಅದಕ್ಕೆ "ರಿಸರ್ವ್ ಬ್ಯಾಂಕ್ ಆಫ್ ಕೈಲಾಸ" ಎಂಬ ಹೆಸರನ್ನಿಟ್ಟು ಬ್ಯಾಂಕ್ ಅನ್ನು ಪ್ರಾರಂಭಿಸಿದ್ದಾರೆ.

ಮಹಿಳೆಯರನ್ನು ಒತ್ತೆಯಾಳು, ಅಪಹರಣ ಮತ್ತು ಅತ್ಯಾಚಾರದ ಆರೋಪವೂ ಹೊಂದಿರುವ, ಮೂಲತಃ ತಮಿಳುನಾಡಿನ ನಿತ್ಯಾನಂದ ಅಹಮದಾಬಾದ್ ಮತ್ತು ಬೆಂಗಳೂರು ಸೇರಿದಂತೆ ದೇಶದ ಹಲವಾರು ದೊಡ್ಡ ನಗರಗಳಲ್ಲಿ ಆಶ್ರಮಗಳನ್ನು ಹೊಂದಿದ್ದರು. ಈ ಆಶ್ರಮಗಳಿಗೆ ಅನುಯಾಯಿಗಳಿಂದ ದೇಣಿಗೆ ಪಡೆಯಲಾಯಿತು.

Reserve Bank Of Kailasa

ಇದಕ್ಕಿದ್ದಂತೆ ಭಾರತದಿಂದ ಕಣ್ಮರೆಯಾದ ನಿತ್ಯಾನಂದ ನವೆಂಬರ್ 2019 ರಲ್ಲಿ, ಕೆರಿಬಿಯನ್ ದೇಶ ಈಕ್ವೆಡಾರ್‌ನ ದ್ವೀಪವೊಂದರಲ್ಲಿ ತನ್ನ ದೇಶವಾಗಿ ನೆಲೆಸಿದ್ದಾಗಿ ಹೇಳಿಕೊಂಡಿದ್ದಾನೆ. ಅದಕ್ಕೆ ಅವರು "ಕೈಲಾಸ" ಎಂದು ಹೆಸರಿಟ್ಟರು. ಏಕೈಕ ಹಿಂದೂ ರಾಷ್ಟ್ರವನ್ನು ರಚಿಸುತ್ತೇವೆ, ಅದರಲ್ಲಿ ಯಾವುದೇ ನಿರ್ಬಂಧಗಳಿಲ್ಲ ಎಂದು ಆತ ಘೋಷಿಸಿದ್ದಾನೆ. ಇದು ವಿಶ್ವದ ಏಕೈಕ ಡಿಜಿಟಲ್ ಹಿಂದೂ ರಾಷ್ಟ್ರವಾಗಲಿದೆ ಎಂದು ಹೇಳಿರುವ ನಿತ್ಯಾನಂದ ಇದೀಗ ತನ್ನದೇ ಆದ ಬ್ಯಾಂಕ್ ಅನ್ನು , ಪ್ರತ್ಯೇಕ ಗುರುತನ್ನು ಹೊಂದಲು ಮುಂದಾಗಿದ್ದಾರೆ.

ಆಗಸ್ಟ್ 2020 ರಿಂದ ಅವರು ತಮ್ಮ "ರಿಸರ್ವ್ ಬ್ಯಾಂಕ್ ಆಫ್ ಕೈಲಾಸ" ವನ್ನು ಪ್ರಾರಂಭಿಸಲು ಸಿದ್ಧತೆಗಳನ್ನು ಪ್ರಾರಂಭಿಸಿದ್ದು, ರಿಸರ್ವ್ ಬ್ಯಾಂಕ್ ಆಫ್ ಕೈಲಾಸದ ಬಗ್ಗೆ ನಿತ್ಯಾನಂದ ಅವರ ಬೆಂಬಲಿಗರು ಫೇಸ್‌ಬುಕ್ ಪೇಜ್‌ನಲ್ಲಿ ವಿವರವಾದ ಪೋಸ್ಟ್ ಮಾಡಿದ್ದಾರೆ. ಇದರಲ್ಲಿ "ಕೈಲಾಸ" ದಲ್ಲಿ ಗಣೇಶ ಚತುರ್ಥಿಯ ಶುಭ ಸಂದರ್ಭದಲ್ಲಿ 100 ಕ್ಕೂ ಹೆಚ್ಚು ಪುಸ್ತಕಗಳು, 360 ಲೇಖನಗಳು ಮತ್ತು ಸಂಶೋಧನಾ ಪ್ರಬಂಧಗಳನ್ನು ನಿತ್ಯಾನಂದ ಅವರ ಛಾಯಾಚಿತ್ರಗಳೊಂದಿಗೆ ಬರೆಯಲಾಗಿದೆ.

ಇದರ ಜೊತೆಗೆ ಆಗಸ್ಟ್ 22 ರ ಸಂದರ್ಭದಲ್ಲಿ ಗಣೇಶ ಚತುರ್ಥಿ ತಮ್ಮ "ರಿಸರ್ವ್ ಬ್ಯಾಂಕ್" ಅನ್ನು ಪ್ರಾರಂಭಿಸುವುದಾಗಿ ಘೋಷಿಸುವ ವೀಡಿಯೊದ ದಿನಾಂಕವನ್ನು ಬಿಡುಗಡೆ ಮಾಡಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+