ವೀರೇಂದ್ರ ಹೆಗ್ಗಡೆ, ಬಚ್ಚನ್, ಅಡ್ವಾಣಿಗೆ ಪದ್ಮ ವಿಭೂಷಣ
ನವದೆಹಲಿ, ಜ. 25 : ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ, ಹಿಂದಿ ಚಿತ್ರನಟ ಅಮಿತಾಬ್ ಬಚ್ಚನ್, ಹಿರಿಯ ರಾಜಕಾರಣಿ ಲಾಲ್ ಕೃಷ್ಣ ಅಡ್ವಾಣಿ ಸೇರಿದಂತೆ, ಭಾರತೀಯರು ಮತ್ತು ವಿದೇಶಿಯರು ಒಳಗೊಂಡು, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 104 ಜನರನ್ನು 2015ನೇ ಸಾಲಿನ 'ಪದ್ಮ' ಪ್ರಶಸ್ತಿಗಾಗಿ ಭಾರತ ಸರಕಾರ ಆಯ್ಕೆ ಮಾಡಿದೆ.
ಒಟ್ಟು 9 ಜನರು ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ 'ಪದ್ಮ ವಿಭೂಷಣ'ಕ್ಕೆ ಆಯ್ಕೆಯಾಗಿದ್ದರೆ, 20 'ಪದ್ಮ ಭೂಷಣ' ಪ್ರಶಸ್ತಿ ಮತ್ತು 75 ಸಾಧಕರನ್ನು ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಈ ಪಟ್ಟಿಯಲ್ಲಿ 17 ಮಹಿಳಾಮಣಿಗಳಿಗೆ ಮಣೆ ಹಾಕಲಾಗಿದ್ದರೆ, 17 ವಿದೇಶಿ ಸಾಧಕರಿಗೂ ಮನ್ನಣೆ ನೀಡಲಾಗಿದೆ. ವಿದೇಶಿಯರಲ್ಲಿ ಬಿಲ್ ಗೇಟ್ಸ್ ಕೂಡ ಸೇರಿದ್ದಾರೆ.

ಕಲೆ, ಸಮಾಜ ಸೇವೆ, ರಾಜಕೀಯ, ವಿಜ್ಞಾನ, ಇಂಜಿನಿಯರಿಂಗ್, ಉದ್ಯಮ, ವೈದ್ಯಕೀಯ, ಸಾಹಿತ್ಯ, ಶಿಕ್ಷಣ, ಕ್ರೀಡೆ, ನಾಗರಿಕ ಸೇವೆ ಮುಂತಾದ ಕ್ಷೇತ್ರಗಳಲ್ಲಿ ಅಹರ್ನಿಶಿ ದುಡಿದ ಮಹನೀಯರನ್ನು ಗುರುತಿಸಿ ಈ ಪ್ರಶಸ್ತಿಯನ್ನು ಗಣರಾಜ್ಯೋತ್ಸವದ ಸಂದರ್ಭದಲ್ಲಿ ಘೋಷಿಸುವ ಪರಿಪಾಠವನ್ನು ಭಾರತ ಸರಕಾರ ಪಾಲಿಸಿಕೊಂಡು ಬರುತ್ತಿದೆ.
ಮಾರ್ಚ್ ಅಥವಾ ಏಪ್ರಿಲ್ ತಿಂಗಳಲ್ಲಿ ರಾಷ್ಟ್ರಪತಿ ಭವನದಲ್ಲಿ ಆಯೋಜಿಸಲಾಗುವ ಸಮಾರಂಭದಲ್ಲಿ ಈ ಪ್ರಶಸ್ತಿಗಳನ್ನು ವಿತರಿಸಲಾಗುವುದು. ಬೆಂಗಳೂರಿನ ಆರ್ಟ್ ಆಫ್ ಲಿವಿಂಗ್ನ ಶ್ರೀ ಶ್ರೀ ರವಿಶಂಕರ್ ಮತ್ತು ಯೋಗಗುರು ಬಾಬಾ ರಾಮದೇವ್ ಅವರು ಪದ್ಮ ಪ್ರಶಸ್ತಿಗಳನ್ನು ತಿರಸ್ಕರಿಸಿದ್ದಾರೆ. ಎಲ್ಲ ಪ್ರಶಸ್ತಿ ವಿಜೇತರಿಗೆ ಅಭಿನಂದನೆಗಳು.
ಪದ್ಮ ವಿಭೂಣ ಪ್ರಶಸ್ತಿ ಪಡೆದವರ ಪಟ್ಟಿ ಕೆಳಗಿನಂತಿದೆ
| ಕ್ರ.ಸಂ. | ಸಾಧಕರ ಹೆಸರು | ಕ್ಷೇತ್ರ | ರಾಜ್ಯ |
| 1 | ಲಾಲ್ ಕೃಷ್ಣ ಅಡ್ವಾಣಿ | ಸಾರ್ವಜನಿಕ ವಲಯ | ಗುಜರಾತ್ |
| 2 | ಅಮಿತಾಬ್ ಬಚ್ಚನ್ | ಕಲೆ | ಮಹಾರಾಷ್ಟ್ರ |
| 3 | ಪ್ರಕಾಶ್ ಸಿಂಗ್ ಬಾದಲ್ | ಸಾರ್ವಜನಿಕ ವಲಯ | ಪಂಜಾಬ್ |
| 4 | ಡಾ. ವೀರೇಂದ್ರ ಹೆಗ್ಗಡೆ | ಸಮಾಜ ಸೇವೆ | ಕರ್ನಾಟಕ |
| 5 | ಮೊಹಮ್ಮದ್ ಯುಸೂಫ್ ಖಾನ್ (ದಿಲೀಪ್ ಕುಮಾರ್) | ಕಲೆ | ಮಹಾರಾಷ್ಟ್ರ |
| 6 | ಜಗದ್ಗುರು ರಮಾನಂದಾಚಾರ್ಯ ಸ್ವಾಮಿ ರಾಮಭದ್ರಾಚಾರ್ಯ | ಇತರೆ | ಉತ್ತರಪ್ರದೇಶ |
| 7 | ಮಾಲೂರ ರಾಮಸ್ವಾಮಿ ಶ್ರೀನಿವಾಸನ್ | ವಿಜ್ಞಾನ ಮತ್ತು ಇಂಜಿನಿಯರಿಂಗ್ | ತಮಿಳುನಾಡು |
| 8 | ಕೊಟ್ಟಾಯನ್ ಕೆ. ವೇಣುಗೋಪಾಲ್ | ಸಾರ್ವಜನಿಕ ವಲಯ | ದೆಹಲಿ |
| 9 | ಕರೀಂ ಅಲ್ ಹುಸೈನಿ ಆಗಾ ಖಾನ್ (ವಿದೇಶ) | ಉದ್ಯಮ | ಫ್ರಾನ್ಸ್/ಯುಕೆ |
ಪದ್ಮ ಪ್ರಶಸ್ತಿಗೆ ಭಾಜನರಾದ ಇತರ ಕರ್ನಾಟಕದ ಮಹನೀಯರು
* ಶಿವಕುಮಾರ ಸ್ವಾಮಿ - ಪದ್ಮ ಭೂಷಣ - ಇತರೆ
* ಡಾ. ಖರಗ್ ಸಿಂಗ್ ವಾಲ್ಡಿಯಾ - ಪದ್ಮ ಭೂಷಣ - ವಿಜ್ಞಾನ ಮತ್ತು ಇಂಜಿನಿಯರಿಂಗ್
* ಎಸ್ ಅರುಣನ್ - ಪದ್ಮಶ್ರೀ - ವಿಜ್ಞಾನ ಮತ್ತು ಇಂಜಿನಿಯರಿಂಗ್
* ಟಿ.ವಿ. ಮೋಹನದಾಸ್ ಪೈ - ಪದ್ಮಶ್ರೀ - ಉದ್ಯಮ
* ವಸಂತ ಶಾಸ್ತ್ರೀ - ಪದ್ಮಶ್ರೀ - ವಿಜ್ಞಾನ ಮತ್ತು ಇಂಜಿನಿಯರಿಂಗ್
* ಎಸ್.ಕೆ. ಶಿವಕುಮಾರ್ - ಪದ್ಮಶ್ರೀ - ವಿಜ್ಞಾನ ಮತ್ತು ಇಂಜಿನಿಯರಿಂಗ್
-
Hotel Gas Bill: ಊಟದ ನಂತರ ಹೋಟೆಲ್ ಬಿಲ್ ನೋಡಿ ದಂಗಾದ ಗ್ರಾಹಕ: ₹1,110 ಬಿಲ್ ಜೊತೆ ₹100 'ಗ್ಯಾಸ್ ಚಾರ್ಜ್'!: ಭಾರೀ ವೈರಲ್ -
Ugadi Wishes 2026: ಯುಗಾದಿ ಹಬ್ಬದ ಶುಭಾಶಯಗಳು, 35+ ಮೆಸೇಜ್, ಶುಭಾಶಯ ಮತ್ತು ಸ್ಟೇಟಸ್ ಸಾಲುಗಳು ಇಲ್ಲಿವೆ -
Teachers Recruiment: ಪ್ರಾಥಮಿಕ, ಪ್ರೌಢ ಶಾಲೆಗಳ ದೈಹಿಕ ಶಿಕ್ಷಕರ ನೇರ ನೇಮಕಾತಿ: ಮಧು ಬಂಗಾರಪ್ಪ -
Byadgi Red Chilli: ಬ್ಯಾಡಗಿ ಮಾರುಕಟ್ಟೆಗೆ 2.43 ಲಕ್ಷ ಮೆಣಸಿನಕಾಯಿ ಚೀಲ ಆವಕ, ಕ್ವಿಂಟಾಲ್ ದರವೆಷ್ಟಿದೆ? -
Karnataka Weather: ಧಾರವಾಡದಲ್ಲಿ 101 ಮಿಮೀ ಮಳೆ ದಾಖಲು, ಒಳನಾಡಿಗೆ ಅಲಿಕಲ್ಲು ಸಹಿತ ಮಳೆ ಮುನ್ಸೂಚನೆ -
"ನಾನು ಭಾರತವನ್ನು ಪ್ರೀತಿಸುತ್ತೇನೆ... ಆದರೆ ನನ್ನನ್ನು ಬೆಳೆಸಿದ್ದು UAE": ಭಾರತ ಮೂಲದ ಮಹಿಳಾ ಉದ್ಯಮಿ ರೂಪಾ ಝಾ ಪೋಸ್ಟ್ Viral -
CBSE 10ನೇ ತರಗತಿ ಬೋರ್ಡ್ ಪರೀಕ್ಷೆ 2026: ಫಲಿತಾಂಶ ಯಾವಾಗ ಪ್ರಕಟ?, ಕಳೆದ ವರ್ಷಗಳ ಟ್ರೆಂಡ್ ಹೀಗಿದೆ -
ದೆಹಲಿ ಮೆಟ್ರೋ ಸಂಸ್ಕೃತಿ ಬೆಂಗಳೂರಿಗೂ ಬಂತಾ? ಮೆಟ್ರೋದಲ್ಲಿ ಯುವತಿಯರಿಂದ ನಿಯಮ ಉಲ್ಲಂಘನೆ Video Viral -
Rain Alert: ಕರ್ನಾಟಕದ ಈ 9 ಜಿಲ್ಲೆಗಳಿಗೆ ಮುಂದಿನ 2 ದಿನ ವ್ಯಾಪಕ ಆಲಿಕಲ್ಲು ಮಳೆ ಎಚ್ಚರಿಕೆ -
ಬೆಂಗಳೂರು 2ನೇ ವಿಮಾನ ನಿಲ್ದಾಣಕ್ಕೆ 3 ಜಾಗ ನಿಗದಿ: ಡಿಸಿಎಂ ಡಿ.ಕೆ ಶಿವಕುಮಾರ್ ಅಪ್ಡೇಟ್ಸ್ -
ಚಿನ್ನದ ಬೆಲೆ 55,000 ರೂಪಾಯಿ ದಿಢೀರ್ ಒಂದೇ ದಿನ ಭರ್ಜರಿ ಕುಸಿತ, ಇಂದಿನ ಬೆಲೆ ತಿಳಿಯಿರಿ... Gold Price -
Anganwadi Workers: ಅಂಗನವಾಡಿ ಕಾರ್ಯಕರ್ತೆಯರ ವೇತನ ಪರಿಷ್ಕರಣೆ: ಲಕ್ಷ್ಮಿ ಹೆಬ್ಬಾಳ್ಕರ್ ಅಪ್ಡೇಟ್ಸ್












Click it and Unblock the Notifications