ಕೇಂದ್ರದ ವಿರುದ್ದ ದೆಹಲಿ ಕೋರ್ಟ್ ಮೆಟ್ಟಿಲೇರಿದ ನ್ಯೂಜಿಲೆಂಡ್ ಯೂಟ್ಯೂಬರ್ನ ಪತ್ನಿ
ನವದೆಹಲಿ, ಜು.10: ಯೂಟ್ಯೂಬ್ ವ್ಲಾಗ್ಗರ್ ಕಾರ್ಲ್ ಎಡ್ವರ್ಡ್ ರೈಸ್ನ ಪತ್ನಿ ತನ್ನ ಪತಿಯನ್ನು ಕಪ್ಪುಪಟ್ಟಿಗೆ ಸೇರಿಸಿರುವ ಹಾಗೂ ಭಾರತಕ್ಕೆ ಪ್ರವೇಶಿಸಲು ವೀಸಾ ನಿರಾಕರಿಸುವ ಕೇಂದ್ರ ಸರ್ಕಾರದ "ಅನಿಯಂತ್ರಿತ ಮತ್ತು ಅವಿವೇಕದ" ನಿರ್ಧಾರವನ್ನು ಪ್ರಶ್ನಿಸಿ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಅರ್ಜಿದಾರರು (ಕೇಂದ್ರ) "ಅನಿಯಂತ್ರಿತವಾಗಿ ಕಪ್ಪುಪಟ್ಟಿಗೆ ಸೇರಿಸಲ್ಪಟ್ಟ" ಪತಿಗೆ ವೀಸಾ ನಿರಾಕರಿಸುವ ಮೂಲಕ, ನನ್ನ ಪತಿಯೊಂದಿಗೆ ವಾಸಿಸಲು ಸಾಧ್ಯವಾಗದಂತಾಗಿದೆ. ಇದರಿಂದಾಗಿ ನಮ್ಮಿಬ್ಬರಿಗೆ ಸಂವಿಧಾನದ 21 ನೇ ವಿಧಿ ನೀಡುವ ಜೀವನ ಮತ್ತು ಘನತೆಯ ಮೂಲಭೂತ ಹಕ್ಕನ್ನು ಉಲ್ಲಂಘಿಸಲಾಗಿದೆ," ಎಂದು ಹೇಳಿದ್ದಾರೆ.
ಅರ್ಜಿಯು ಮುಂದಿನ ವಾರ ವಿಚಾರಣೆಗೆ ಬರಲಿದೆ ಎಂದು ಅರ್ಜಿದಾರರಾದ ಮನೀಷಾ ಮಲಿಕ್ ಮತ್ತು ಆಕೆಯ ಪತಿ ತಿಳಿಸಿದ್ದಾರೆ. ಕಾರ್ಲ್ ರಾಕ್ ಎಂದು ಜನಪ್ರಿಯರಾದ ಮನೀಷಾ ಪತಿ ಯೂಟ್ಯೂಬ್ ವ್ಲಾಗ್ಗರ್ ಆಗಿದ್ದು ಭಾರತದ ಬಹುಭಾಗಕ್ಕೆ ಭೇಟಿ ನೀಡಿ ಭಾರತದ ಸೌಂದರ್ಯವನ್ನು ಸೆರೆಹಿಡಿಯಲು ಹಾಗೂ ಪ್ರವಾಸೋದ್ಯಮದ ಉತ್ತೇಜನಕ್ಕೆ ಸಹಕರಿಸಿದ್ದಾರೆ.

ಹಲವಾರು ಪ್ರಾತಿನಿಧ್ಯಗಳನ್ನು ಮನೀಷಾ ಹಾಗೂ ಆಕೆಯ ನ್ಯೂಜಿಲೆಂಡ್ ಮೂಲದ ಪತಿ ಆದ್ಯತೆ ನೀಡಿದ್ದರೂ ಸಹ ಅಧಿಕಾರಿಗಳು ಆತನನ್ನು ಪ್ಪುಪಟ್ಟಿಗೆ ಸೇರಿಸುವ ಕಾರಣವನ್ನು ತಿಳಿಸಿಲ್ಲ ಎಂದು ಅರ್ಜಿ ಹೇಳಿದೆ. ಹಾಗೆಯೇ ಇದು ವಿವಾಹಿತ ದಂಪತಿಗಳ ಪ್ರತ್ಯೇಕತೆಗೆ ಕಾರಣವಾಗಿದೆ. ಯಾವುದೇ ವೀಸಾ ಷರತ್ತುಗಳ ಉಲ್ಲಂಘನೆಯ ಬಗ್ಗೆ ಸೂಚಿಸುವ ಯಾವುದೇ ಅವಕಾಶ ಅಥವಾ ಸೂಚನೆ ನೀಡಿಲ್ಲ ಎಂದು ಹೇಳಲಾಗಿದೆ.
ಕೇಂದ್ರದ ಈ ಕ್ರಮವನ್ನು ಅಧಿಕಾರದ ಅನಿಯಂತ್ರಿತ ದುರುಪಯೋಗ ಎಂದು ಹೇಳಿರುವ ಈ ಅರ್ಜಿಯು, ಇದು ಸಂವಿಧಾನದ ಆರ್ಟಿಕಲ್ 19 (ವಾಕ್ ಸ್ವಾತಂತ್ರ್ಯಕ್ಕೆ ಸಂಬಂಧಿಸಿದಂತೆ ಕೆಲವು ಹಕ್ಕುಗಳ ರಕ್ಷಣೆ) ಅಡಿಯಲ್ಲಿ ಅರ್ಜಿದಾರರ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಎಂದು ಹೇಳಿದೆ.
Dear @jacindaardern, the Govt. of India has blocked me from entering India separating me from my wife & family in Delhi. They blacklisted me without telling me, giving reasons, or letting me reply. Please watch my struggle https://t.co/dq0Z98SCFw @NZinIndia @MukteshPardeshi pic.twitter.com/sLM2nk9lR3
— Karl Rock (@iamkarlrock) July 9, 2021
ತನ್ನ ವೀಸಾದ ನಿಯಮಗಳು ಮತ್ತು ಷರತ್ತುಗಳನ್ನು ಉಲ್ಲಂಘಿಸಿದ್ದಕ್ಕಾಗಿ ನ್ಯೂಜಿಲೆಂಡ್ ಪ್ರಜೆಯನ್ನು ಮುಂದಿನ ವರ್ಷದವರೆಗೆ ಭಾರತಕ್ಕೆ ಪ್ರವೇಶಿಸುವುದನ್ನು ನಿರ್ಬಂಧಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯದ ಅಧಿಕಾರಿಗಳು ಶುಕ್ರವಾರ ಹೇಳಿದ್ದಾರೆ.
ವಿದೇಶಿ ಪ್ರಜೆ ಪ್ರವಾಸಿ ವೀಸಾದ ಮೂಲಕ ಬಂದು ವ್ಯಾಪಾರ ಚಟುವಟಿಕೆಗಳನ್ನು ಮಾಡುತ್ತಿದ್ದ ಮತ್ತು ಇತರ ವೀಸಾ ಷರತ್ತುಗಳನ್ನು ಉಲ್ಲಂಘಿಸುತ್ತಿರುವುದು ಕಂಡುಬಂದಿದೆ ಎಂದು ಹೇಳಿರುವ ಕೇಂದ್ರ ಸರ್ಕಾರ ಯಾವುದೇ ವಿಚಾರವನ್ನು ನಿರ್ದಿಷ್ಟಪಡಿಸಿಲ್ಲ.
2019 ರಲ್ಲಿ ಮದುವೆಯಾದಾಗಿನಿಂದ ದಂಪತಿಗಳು ದೆಹಲಿಯಲ್ಲಿ ನೆಲೆಸಿದ್ದಾರೆ. ಕಳೆದ ವರ್ಷ ಅಕ್ಟೋಬರ್ 10 ರಿಂದ ನ್ಯೂಜಿಲೆಂಡ್ನಿಂದ ಭಾರತಕ್ಕೆ ಮರಳಲು ರೈಸ್ಗೆ ಸಾಧ್ಯವಾಗಲಿಲ್ಲ ಎಂದು ಮನವಿಯಲ್ಲಿ ತಿಳಿಸಲಾಗಿದೆ.
"ಅರ್ಜಿದಾರರ ಪತಿ ಕಾರ್ಲ್ ಎಡ್ವರ್ಡ್ ರೈಸ್, ನ್ಯೂಜಿಲೆಂಡ್ ಮತ್ತು ನೆದರ್ಲ್ಯಾಂಡ್ನ ಉಭಯ ರಾಷ್ಟ್ರೀಯತೆಯನ್ನು ಹೊಂದಿದ್ದಾರೆ. 2013 ರಿಂದ ಭಾರತಕ್ಕೆ ಭೇಟಿ ನೀಡುತ್ತಿದ್ದಾರೆ. ದೇಶದ ಕಾನೂನುಗಳು ಮತ್ತು ವೀಸಾದ ಷರತ್ತುಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದಾರೆ. 2013 ರಿಂದ ಇಡೀ ಅವಧಿಯಲ್ಲಿ, ಅರ್ಜಿದಾರರ ಪತಿಗೆ ವಿವಿಧ ಸಂದರ್ಭಗಳಲ್ಲಿ ಭಾರತೀಯ ವೀಸಾ ನೀಡಲಾಗಿದ್ದರೂ, ಅರ್ಜಿದಾರರ ಪತಿಯ ವಿರುದ್ಧ ಒಂದೇ ಒಂದು ಆರೋಪವೂ ಸಹ ಬಂದಿಲ್ಲ," ಎಂದು ವಕೀಲ ಫುಝೈಲ್ ಅಹ್ಮದ್ ಅಯ್ಯುಬಿ ಮೂಲಕ ಸಲ್ಲಿಸಿದ ಮನವಿಯಲ್ಲಿ ತಿಳಿಸಲಾಗಿದೆ.
ವಿವಾಹದ ನಂತರ, ರೈಸ್ಗೆ ಎಕ್ಸ್ -2 ವೀಸಾವನ್ನು ನೀಡಲಾಗಿದೆ. (ಭಾರತೀಯ ನಾಗರಿಕರ ಸಂಗಾತಿ / ಮಕ್ಕಳಿಗಾಗಿ). ಇದು ಮೇ 2019 ರಿಂದ ಮೇ 2024 ರವರೆಗೆ ಮಾನ್ಯತೆಯ ಅವಧಿಯನ್ನು ಹೊಂದಿತ್ತು. ಈ ವೀಸಾದಾರರಿಗೆ ಭಾರತದಿಂದ 180 ದಿನಗಳಾಗುತ್ತಿದ್ದಂತೆ ನಿರ್ಗಮಿಸುವಂತೆ ಅಥವಾ ಸಂಬಂಧಪಟ್ಟ ವಿದೇಶಿ ಪ್ರಾದೇಶಿಕ ನೋಂದಣಿ ಕಚೇರಿಗೆ ಈ ಬಗ್ಗೆ ಮಾಹಿತಿ ನೀಡುವಂತೆ ತಿಳಿಸಲಾಗಿತ್ತು.
"ರಾಷ್ಟ್ರದಿಂದ ನಿರ್ಗಮಿಸುವ ಮೇಲಿನ ಷರತ್ತುಗೆ ಅನುಸಾರವಾಗಿ, 2020 ರ ಅಕ್ಟೋಬರ್ 10 ರಂದು ರೈಸ್ ಭಾರತವನ್ನು ತೊರೆದಿದ್ದಾರೆ. ಭಾರತೀಯ ವೀಸಾವನ್ನು ನೀಡುವ ಯಾವುದೇ ಅರ್ಜಿಯನ್ನು ಪ್ರತಿವಾದಿಗಳು ತಿರಸ್ಕರಿಸುತ್ತಿದ್ದ ಕಾರಣ ಬಳಿಕ ಭಾರತಕ್ಕೆ ಮರಳಲು ಸಾಧ್ಯವಾಗಲಿಲ್ಲ," ಎಂದು ಹೇಳಲಾಗಿದೆ. ರೈಸ್ನನ್ನು ಹಠಾತ್ ಕಪ್ಪುಪಟ್ಟಿಗೆ ಸೇರಿಸಿರುವ ಬಗ್ಗೆ ವಿಚಾರಣೆ ನಡೆಸಲು ದಂಪತಿ ಮನವಿ ಮಾಡಿದ್ದಾರೆ.
(ಒನ್ಇಂಡಿಯಾ ಸುದ್ದಿ)
-
ಬೆಂಗಳೂರಿನ ಪಾನಿಪುರಿ ವ್ಯಾಪಾರಿಯ ತಿಂಗಳ ಸಂಪಾದನೆ ಫುಲ್ Viral: ದಿನಕ್ಕೆ 3 ಸಾವಿರ ರೂ. ಗಳಿಕೆ -
Viral Video: 11 ವರ್ಷದ ಬಾಲಕನಿಂದ ಯಶಸ್ವಿ ವಿಮಾನ ಲ್ಯಾಂಡಿಂಗ್; ನೆಟ್ಟಿಗರ ಮನಗೆದ್ದ ಈ ಪುಟ್ಟ ಪೋರ -
ಪೆಟ್ರೋಲ್ ಬದಲು ಎಥೆನಾಲ್ ಬ್ಲೆಂಡಿಂಗ್ ಮ್ಯಾಜಿಕ್; ಸಂಕಷ್ಟದಲ್ಲಿ ಭಾರತಕ್ಕೆ ನೆರವಾದ ಮೋದಿ ಮಾಸ್ಟರ್ ಪ್ಲ್ಯಾನ್: ಕೃಷ್ಣ ಭಟ್ ಬರಹ -
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
Gold Rate: ಇಂದು ನಿಮ್ಮ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Jacob Bethell: ವಾಂಖೆಡೆಯಲ್ಲಿ ಕಿವಿಗೆ ಬಿದ್ದಿದ್ದು ಮಾತ್ರ ಆರ್ಸಿಬಿ.. ಆರ್ಸಿಬಿ ಘೋಷಣೆ: ಜೇಕಬ್ ಬೆಥೆಲ್ ವಿಡಿಯೋ ವೈರಲ್ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ












Click it and Unblock the Notifications