ಪ್ರಧಾನಿ ಮೋದಿಗೆ 'ಮೋಸಗಾರ' ಎಂದ ಗಲ್ಲಾ ವಿರುದ್ಧ ಬಿಜೆಪಿ ಆಕ್ರೋಶ
ನವದೆಹಲಿ, ಜುಲೈ 20: 'ಪ್ರಧಾನಿ ನರೇಂದ್ರ ಮೋದಿ ಮೋಸಗಾರ' ಎಂದು ತಮ್ಮ ಮಾತಿನ ನಡುವೆ ಟಿಡಿಪಿ ಸಂಸದ ಜಯದೇವ ಗಲ್ಲಾ ಹೇಳಿದ್ದು, ಮುಂಗಾರು ಅಧಿವೇಶನದ ಸಂದರ್ಭದಲ್ಲಿ ಬಿಜೆಪಿಯ ಆಕ್ರೋಶಕ್ಕೆ ಕಾರಣವಾಯಿತು.
ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವುದಾಗಿ 2014 ರ ಚುನಾವಣೆಗೂ ಮುನ್ನ ಪ್ರಧಾನಿ ಅಭ್ಯರ್ಥಿಯಾಗಿದ್ದ ನರೇಂದ್ರ ಮೋದಿ ಹೇಳಿದ್ದರು. ಆದರೆ ಅವರು ತಮ್ಮ ಮಾತನ್ನು ಉಳಿಸಿಕೊಳ್ಳಲಿಲ್ಲ. ಅವರೊಬ್ಬ ಮೋಸಗಾರ(ಮೋಸಗಾಡು) ಎಂದು ಗಲ್ಲಾ ಹೇಳಿದರು.
ಅವಿಶ್ವಾಸ ನಿರ್ಣಯ LIVE : ದೊಡ್ಡ ಉದ್ಯಮಿಗಳ ಮಿತ್ರ ಮೋದಿ ಎಂದ ರಾಹುಲ್
ಅವರ ಮಾತನ್ನು ವಿರೋಧಿಸಿದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್, ದೇಶದ ಗೌರವಾನ್ವಿತ ಪ್ರಧಾನಿಗಳ ವಿರುದ್ಧ ಇಂಥ ಪದ ಬಳಕೆ ಸರಿಯೇ? ದಯವಿಟ್ಟು ಕಲಾಪದ ಕಡತದಿಂದ ಈ ಪದವನ್ನು ತೆಗೆದು ಹಾಕುವಂತೆ ಸ್ಪೀಕರ್ ಸುಮಿತ್ರಾ ಮಹಾಜನ್ ಅವರಲ್ಲಿ ಮನವಿ ಮಾಡಿಕೊಂಡರು.
ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರದ ವಿರುದ್ಧ ಕಾಂಗ್ರೆಸ್ ನೇತೃತ್ವದ ವಿಪಕ್ಷಗಳು ಇಂದು ಮುಂಗಾರು ಅಧಿವೇಶನದಲ್ಲಿ ಅವಿಶ್ವಾಸ ನಿರ್ಣಯ ಮಂಡಿಸುತ್ತಿದ್ದು, ಅಧಿವೇಶನದಲ್ಲಿ ಸಾಕಷ್ಟು ಪರವಿರೋಧ ಚರ್ಚೆಯಾಗುತ್ತಿದೆ.