ಪಟಿಯಾಲಾ ಹೌಸ್ ಕೋರ್ಟ್ ನಲ್ಲಿ ಇಂದು ಕಾರ್ತಿ ಚಿದಂಬರಂ ವಿಚಾರಣೆ
ನವದೆಹಲಿ, ಮಾರ್ಚ್ 01: ಐಎನ್ ಎಕ್ಸ್ ಮೀಡಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ವಿತ್ತ ಸಚಿವ ಪಿ.ಚಿದಂಬರಂ ಅವರ ಪುತ್ರ ಕಾರ್ತಿ ಚಿದಂಬರಂ ಅವರನ್ನು ಇಂದು(ಮಾ.1) ನವದೆಹಲಿಯ ಪಟಿಯಾಲಾ ಹೌಸ್ ಹೈಕೋರ್ಟ್ ಗೆ ಹಾಜರುಪಡಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಲಂಡನ್ನಿನಿಂದ ವಾಪಸ್ಸಾಗುತ್ತಿದ್ದ ಅವರನ್ನು ನಿನ್ನೆ(ಫೆ.28) ಬೆಳಿಗ್ಗೆ ವೆನ್ನೈ ಏರ್ ಪೋರ್ಟ್ ನಲ್ಲಿ ಸಿಬಿಐ ಪೊಲೀಸರು ಬಂಧಿಸಿದ್ದರು. ಐಎನ್ಎಕ್ಸ್ ಮೀಡಿಯಾದಿಂದ ಫೆಮಾ ನಿಯಮ ಉಲ್ಲಂಘಿಸಿ ಹಣ ಪಡೆದ ಆರೋಪದ ಮೇಲೆ ಕಾರ್ತಿಯನ್ನು ಬಂಧಿಸಲಾಗಿತ್ತು. ಈ ಸಂದರ್ಭದಲ್ಲಿ 10 ಲಕ್ಷ ರೂ. ಅಕ್ರಮ ಹಣದ ರಸೀದಿಯನ್ನೂ ವಶಪಡಿಸಿಕೊಳ್ಳಲಾಗಿದೆ ಎಂದು ಸಿಬಿಐ ತಿಳಿಸಿದೆ.

2017 ರಲ್ಲಿ ಜಾರಿ ನಿರ್ದೇಶನಾಲಯ ಇವರ ಮೇಲೆ ಹಣವಂಚನೆಯ ಕೇಸು ದಾಖಲಿಸಿತ್ತು. ಈ ಕುರಿತು ಇಂದು ವಿಚಾರಣೆ ನಡೆಯಲಿದ್ದು, ಕಾರ್ತಿ ಭವಿಷ್ಯ ತೂಗುಯ್ಯಾಲೆ ಮೇಲೆ ನಿಂತಂತಿದೆ.












Click it and Unblock the Notifications