ಪತನವಾದ ಇಂಡೋನೇಷ್ಯಾ ವಿಮಾನದ ಪೈಲೆಟ್ ದೆಹಲಿಯವರು!
ಜಕಾರ್ತಾ, ಅಕ್ಟೋಬರ್ 29: ಇಂಡೋನೇಷ್ಯಾದ ಜಕಾರ್ತಾದಿಂದ ಹೊರಟ ಲಯನ್ ಏರ್ ವಿಮಾನ ಪತನವಾಗಿದ್ದು, ವಿಮಾನದಲ್ಲಿದ್ದ 189 ಜನರೂ ಮೃತರಾಗಿದ್ದಾರೆಂದು ಮೂಲಗಳು ತಿಳಿಸಿವೆ.
ಅಚ್ಚರಿಯ ವಿಷಯವೆಂದರೆ ಈ ವಿಮಾನದ ಪೈಲೆಟ್ ಆಗಿದ್ದವರು ಕ್ಯಾ.ಭವ್ಯೆ ಸುನೆಜಾ ಎಂಬ ಭಾರತೀಯ! ದೆಹಲಿ ಮೂಲದ ಭವ್ಯೆ ಅವರು ಸಹ ಈ ದುರ್ಘಟನೆಯಲ್ಲಿ ಪ್ರಾಣ ಕಳೆದುಕೊಂಡಿದ್ದು, ಅವರ ಆತ್ಮಕ್ಕೆ ಶಾಂತಿ ಕೋರುತ್ತೇವೆ ಎಂದು ಇಂಡೋನೇಷ್ಯಾದಲ್ಲಿರುವ ಭಾರತೀಯ ರಾಯಭಾರ ಕಚೇರಿ ತಿಳಿಸಿದೆ.
31 ವರ್ಷ ಯವಸ್ಸಿನ ಸುನೆಜಾ ದೆಹಲಿಯ ಮಯೂರ್ ವಿಹಾರ್ ನವರು. ಇಲ್ಲಿನ ಅಹಾಲ್ಕಾನ್ ಪಬ್ಲಿಕ್ ಶಾಲೆಯಲ್ಲಿ ವಿದ್ಯಾಭ್ಯಾಸ ಮುಗಿಸಿದ ಸುನೆಜಾ ಅವರಿಗೆ ಪೈಲೆಟ್ ಆಗಬೇಕೆಂಬುದು ಎಂದಿನ ಕನಸು.

2009 ರಲ್ಲಿ ಬೆಲ್ ಏರ್ ಇಂಟರ್ನ್ಯಾಶ್ನಲ್ ನಿಂದ ಲೈಸೆನ್ಸ್ ಪಡೆದು ತಮ್ಮಕನಸನ್ನು ಸುನೆಜಾ ನನಸಾಗಿಸಿಕೊಂಡಿದ್ದರು.
ಮೃದುಭಾಷಿ, ಸರಳ ವ್ಯಕ್ತಿತ್ವದ ಸುನೆಜಾ ಎಮಿರೇಟ್ಸ್ ನಲ್ಲಿ ತರಬೇತಿ ಪಡೆದು, ನಂತರ ಲಯನ್ ಏರ್ ಗೆ ಮಾರ್ಚ್ 2011 ರಲ್ಲಿ ಸೇರಿದ್ದರು. ಇಂದು ಬೆಳಿಗ್ಗೆ ಕೋ ಪೈಲೆಟ್ ಹಾರ್ವಿನೋ ಮತ್ತಿತರ ಆರು ಸಿಬ್ಬಂದಿಯೊಡನೆ ಕ್ಯಾ.ಸುನೆಜಾ ವಿಮಾನ ಚಾಲನೆ ಮಾಡುತ್ತಿದ್ದರು. ಆದರೆ ವಿಮಾನ ಟೇಕಾಫ್ ಅದ 13 ನಿಮಿಷಗಳಲ್ಲಿ ರಾಡರ್ ಸಂಪರ್ಕ ಕಳೆದುಕೊಂಡು, ಪತನಗೊಂಡಿತ್ತು.
ಇಂಡೋನೇಷ್ಯಾ ರಾಜಧಾನಿ ಜಕಾರ್ತಾ ವಿಮಾನ ನಿಲ್ದಾಣದಿಂದ ಬೆಳಗ್ಗೆ 6:20 ಕ್ಕೆ ಟೇಕಾಫ್ ಆದ ವಿಮಾನ 6:33 ರ ಸಮಯಕ್ಕೆ ಸಂಪರ್ಕ ಕಳೆದುಕೊಂಡಿತ್ತು. ಟೇಕಾಫ್ ಆದ 13 ನಿಮಿಷದ ನಂತರ ಸಂಪರ್ಕ ಕಳೆದುಕೊಂಡ ವಿಮಾನ ಸಮುದ್ರವೊಂದರಲ್ಲಿ ಬಿದ್ದಿದ್ದು ನಂತರ ತಿಳಿಯಿತು. ವಿಮಾನದಲ್ಲಿದ್ದ 189 ಜನರೂ ಮೃತರಾಗಿದ್ದಾರೆಂದು ಮೂಲಗಳು ತಿಳಿಸಿವೆ.
-
ಪೆಟ್ರೋಲ್ ಬದಲು ಎಥೆನಾಲ್ ಬ್ಲೆಂಡಿಂಗ್ ಮ್ಯಾಜಿಕ್; ಸಂಕಷ್ಟದಲ್ಲಿ ಭಾರತಕ್ಕೆ ನೆರವಾದ ಮೋದಿ ಮಾಸ್ಟರ್ ಪ್ಲ್ಯಾನ್: ಕೃಷ್ಣ ಭಟ್ ಬರಹ -
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
Gold Rate: ಇಂದು ನಿಮ್ಮ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Jacob Bethell: ವಾಂಖೆಡೆಯಲ್ಲಿ ಕಿವಿಗೆ ಬಿದ್ದಿದ್ದು ಮಾತ್ರ ಆರ್ಸಿಬಿ.. ಆರ್ಸಿಬಿ ಘೋಷಣೆ: ಜೇಕಬ್ ಬೆಥೆಲ್ ವಿಡಿಯೋ ವೈರಲ್ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Bengaluru Startup: ಬೆಂಗಳೂರು ಸ್ಟಾರ್ಟ್ಅಪ್ ರಾಜಧಾನಿ ಅಲ್ಲ ಎಂದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ -
Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್












Click it and Unblock the Notifications