ನೂರು ಸ್ಮಾರ್ಟ್ ಸಿಟಿಗಳ ನಿರ್ಮಾಣ ನಾಯ್ಡು ಗುರಿ
ನವದೆಹಲಿ, ಮೇ 29: ನೂರು ಸ್ಮಾರ್ಟ್ ಸಿಟಿಗಳ ನಿರ್ಮಾಣ ಮತ್ತು 2020ರೊಳಗೆ ಎಲ್ಲರಿಗೂ ವಸತಿ ಸೌಲಭ್ಯ ಒದಗಿಸುವ ಉದ್ದೇಶ, ಗೃಹ ಸಾಲಗಳ ಮೇಲಿನ ಬಡ್ಡಿ ದರಗಳ ಇಳಿಕೆ ಹೀಗೆ ಅನೇಕ ಯೋಜನೆಗಳ ಪ್ಯಾಕೇಜ್ ಹೊತ್ತುಕೊಂಡು ನಗರಾಭಿವೃದ್ಧಿ, ವಸತಿ ಮತ್ತು ಬಡತನ ನಿರ್ಮೂಲನಾ ಸಚಿವಾಲಯದಲ್ಲಿ ಕೇಂದ್ರ ಸಚಿವ ಎಂ.ವೆಂಕಯ್ಯ ನಾಯ್ಡು ಅಧಿಕಾರ ವಹಿಸಿಕೊಂಡಿದ್ದಾರೆ.
ಅವಳಿ ನಗರಗಳ ಸಂಪರ್ಕಕ್ಕೆ ಆದ್ಯತೆ ನೀಡುತ್ತೇವೆ. ಸೆಟಲೈಟ್ ಟೌನ್ಗಳಲ್ಲಿ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಮತ್ತು ದೇಶಾದ್ಯಂತ ಧಾರ್ಮಿಕ ನಗರಗಳಲ್ಲಿ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗುವುದು, ಎನ್ ಸಿಆರ್ ರಾಜ್ಯ ವಿಸ್ತರಣೆ ಮಾಡಿ ರಾಜಸ್ಥಾನ, ಹರ್ಯಾಣ ಹಾಗೂ ಉತ್ತರಪ್ರದೇಶಕ್ಕೆ ಸೌಲಭ್ಯ ಒದಗಿಸಲಾಗುತ್ತದೆ ಎಂದು ವೆಂಕಯ್ಯ ನಾಯ್ಡು ಹೇಳಿದ್ದಾರೆ.
'ವಸತಿ
ಎಂಬುದು
ನನ್ನ
ಆದ್ಯತೆಯ
ಕ್ಷೇತ್ರ
ಮತ್ತು
ಇದರಲ್ಲಿ
ನನಗೆ
ಬಹಳ
ಆಸಕ್ತಿ
ಇದೆ.
2020ರ
ಹೊತ್ತಿಗೆ
ಎಲ್ಲರಿಗೂ
ವಸತಿ
ಒದಗಿಸುವುದು
ನನ್ನ
ಆದ್ಯತೆಯಾಗಿದೆ.
ಇದಕ್ಕಾಗಿ
ಗೃಹ
ಸಾಲಗಳ
ಬಡ್ಡಿ
ದರಗಳನ್ನು
ಕಡಿತಗೊಳಿಸಲಾಗುವುದು'
ಎಂದು
ನಗರಾಭಿವೃದ್ಧಿ
ಖಾತೆ
ಸಚಿವರಾಗಿ
ಅಧಿಕಾರ
ವಹಿಸಿಕೊಂಡ
ನಂತರ
ನಾಯ್ಡು
ಹೇಳಿದರು.
ಅಟಲ್ ಬಿಹಾರಿ ವಾಜಪೇಯಿ ಸರಕಾರದ ಅವಧಿಯಲ್ಲಿ ಗೃಹ ಸಾಲಗಳ ಮೇಲಿನ ಬಡ್ಡಿ ದರವನ್ನು ಶೇ.11 ರಿಂದ 7ಕ್ಕೆ ಇಳಿಸಲಾಗಿತ್ತು ಈಗ ಗೃಹ ಸಾಲಗಳ ಮೇಲಿನ ಬಡ್ಡಿ ದರ ಶೇ.10ಕ್ಕಿಂತ ಹೆಚ್ಚಿದೆ. 2020ರೊಳಗೆ ದೇಶದ ಎಲ್ಲಾ ನಾಗರಿಕರಿಗೆ ಕನಿಷ್ಠ ಪಕ್ಕಾ (pucca) ಮನೆಗಳನ್ನು ಒದಗಿಸುವುದು ನಮ್ಮ ಆದ್ಯ ಕರ್ತವ್ಯ. ಇದು ಅಷ್ಟು ಸುಲಭದ ಕೆಲಸವಲ್ಲ ಆದರೆ, ಬೃಹತ್ ಯೋಜನೆಯಾಗಿದೆ ಎಂದರು.
'ನಾನು ಪಿಪಿಪಿ ಮತ್ತು ಸಿಎಸ್ಆರ್ ಯೋಜನೆಗಳನ್ನು ಬೆಂಬಲಿಸುತ್ತೇನೆ. ಕಾರ್ಪೊರೇಟ್ ಸಂಸ್ಥೆಗಳು ತಮ್ಮ ಉದ್ಯೋಗಿಗಳ ವಸತಿ ಸೌಲಭ್ಯಗಳ ಬಗ್ಗೆ ಆಸಕ್ತಿ ತೋರಿಸಬೇಕು. ರಾಜ್ಯ ಸರಕಾರಗಳು ವಸತಿ ಯೋಜನೆಗಳಲ್ಲಿ ಪಾಲ್ಗೊಳ್ಳಬೇಕು' ಎಂದು ನಾಯ್ಡು ಹೇಳಿದರು.
ಯುಪಿಎ ಮಹತ್ವ ಯೋಜನೆ ಎನ್ಡಿಎಗೆ: ಯುಪಿಎಯ ಮಹತ್ವದ ಯೋಜನೆ JNNRUM ಈಗ ಎನ್ಡಿಎ ಪಾಲಾಗಿದ್ದು, ಜಿಐಎಸ್ ತಂತ್ರಜ್ಞಾನ ಆಧಾರಿತ ಯೋಜನೆಗಳನ್ನು ಬಳಸಿಕೊಂಡು ನಗರಾಭಿವೃದ್ಧಿಗೆ ಒತ್ತು ನೀಡಲಾಗುತ್ತದೆ. ಅನೇಕ ನಗರಗಳಲ್ಲಿರುವ ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆ ಸಮಸ್ಯೆ ಬಗೆಹರಿಸಲಾಗುತ್ತದೆ. ಮೆಟ್ರೋ ನಗರ, ಅವಳಿ ನಗರಗಳಾದ ಹೈದರಾಬಾದ್ ಸಿಕಂದರಾಬಾದ್, ವಿಜಯವಾಡ ಗುಂಟೂರು ಅಭಿವೃದ್ಧಿ ಮಾಡಲಾಗುತ್ತದೆ ಎಂದರು.