Get Updates
Get notified of breaking news, exclusive insights, and must-see stories!

ಜಿಗ್ನೇಶ್ ಜಾಥಾ: ರಾಜಧಾನಿ ದೆಹಲಿಯಲ್ಲಿ ಬಿಗಿಭದ್ರತೆ

ನವದೆಹಲಿ, ಜನವರಿ 09: ನವದೆಹಲಿಯ ಪಾರ್ಲಿಮೆಂಟ್ ರಸ್ತೆಯಲ್ಲಿ ದಲಿತ ನಾಯಕ ಜಿಗ್ನೇಶ್ ಮೆವಾನಿ ನೇತೃತ್ವದಲ್ಲಿ 'ಯುವ ಹೂಂಕಾರ್ ಯಾತ್ರೆ' ನಡೆಯಲಿರುವ ಹಿನ್ನೆಲೆಯಲ್ಲಿ ಬಿಗಿಬಂದೋಬಸ್ತ್ ಏರ್ಪಡಿಸಲಾಗಿದೆ.

ಉದ್ಯೋಗಾವಕಾಶ ಸೃಷ್ಟಿಸುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಮತ್ತು ಬಲಪಂಥೀಯ ಹಿಂಸಾಚಾರಗಳು ಹೆಚ್ಚುತ್ತಿವೆ ಎಂದು ದೂರಿ ಜಿಗ್ನೇಶ್ 'ಸಾಮಾಜಿಕ ನ್ಯಾಯ' ಅಥವಾ 'ಯುವ ಹೂಂಕಾರ್ rally'
ಹೆಸರಿನಲ್ಲಿ ಸರ್ಕಾರದ ವಿರುದ್ಧ ಜಾಥಾ ನಡೆಸಲು ಸಜ್ಜಾಗಿದ್ದಾರೆ.

ಗುಜರಾತಿನ ವಡ್ಗಾಂ ಶಾಸಕ ಜಿಗ್ನೇಶ್ ಮೆವಾನಿ ಅವರು ಇತ್ತೀಚೆಗೆ ಪುಣೆಯಲ್ಲಿ ನೀಡಿದ್ದ ಭಾಷಣವನ್ನು ಹಲವು ಹಿಂದುಪರ ಸಂಘಟನೆಗಳು 'ಪ್ರಚೋದನಾಕಾರಿ ಭಾಷಣ' ಎಂದು ದೂರಿದ್ದವು. ಈ ಘಟನೆಯ ನಂತರ ಮಹಾರಾಷ್ಟ್ರದಲ್ಲಿ ಗಲಭೆ ಎದ್ದಿತ್ತು.

Heavy security deployed ahead of Mevani's 'Yuva Hunkar Rally'

ಇದೀಗ ದೆಹಲಿಯಲ್ಲೂ ಇಂಥದೇ ಘಟನೆ ನಡೆಯಬಾರದೆಂಬ ಕಾರಣಕ್ಕೆ, ಮುನ್ನೆಚ್ಚರಿಕೆ ವಹಿಸಿರುವ ಪೊಲೀಸರು ಜಿಗ್ನೇಶ್ ಜಾಥಾಕ್ಕೆ ಅನುಮತಿ ನಿರಾಕರಿಸಿದ್ದಾರೆ. ಆದರೆ ಪೊಲೀಸರ ನಿರಾಕರಣೆಯನ್ನೂ ಲೆಕ್ಕಿಸದೆ ಜಿಗ್ನೇಶ್ ಮತ್ತವರ ಬೆಂಬಲಿಗರು ಯಾತ್ರೆ ಕೈಗೊಳ್ಳುವುದಾಗ ಹೇಳಿದ್ದಾರೆ.

ಈ ಹಿನ್ನೆಲೆಯಲ್ಲಿ ಪಾರ್ಲಿಮೆಂಟ್ ರಸ್ತೆಯಾದ್ಯಂತ ಬಿಗಿಬಂದೋಬಸ್ತ್ ಏರ್ಪಡಿಸಲಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+