ಕಲಾಂ ಆಡಿದ ಕೊನೆ ಘಳಿಗೆಯ ಮಾತುಗಳೇನು?
ನವದೆಹಲಿ, ಜುಲೈ, 29: ಪ್ರತಿಯೊಬ್ಬ ವ್ಯಕ್ತಿಯ ಬದುಕಿನಲ್ಲಿ ತಮ್ಮ ಆಪ್ತರೊಂದಿಗೆ ಕಳೆದ ಕೊನೆ ಘಳಿಗೆ ಅಮೃತ ಘಳಿಗೆಯಾಗಿರುತ್ತದೆ. ನೆನಪಿನ ಹಂದರದಲ್ಲಿ ಮರುಕಳಿಸುವ ಸವಿ ಕ್ಷಣವಾಗಿರುತ್ತದೆ. ಇಲ್ಲವಾದಲ್ಲಿ ವಿಷಾದ, ನೋವು, ಬೇಸರದ ಸಾಗರವಾಗಿರುತ್ತದೆ. ಕಲಾಂ ಅವರೊಂದಿಗೆ ಕೊನೆ ಕ್ಷಣ ಕಳೆದ ಸಲಹೆಗಾರ ಸೃಜನ್ ಸಿಂಗ್ ಅವರ ಭಾವಯಾನ ಯಾವ ತರಹದ್ದು?
ಕಲಾಂ ಅವರ ಕೊನೆಘಳಿಗೆಯಲ್ಲಿ ಅವರೊಂದಿಗೆ ಇದ್ದವರು ಸೃಜನ್ ಪಾಲ್ ಸಿಂಗ್...ಇವರು ಕಲಾಂ ಅಗಲಿಕೆಯನ್ನು ಯಾವ ರೀತಿ ಸ್ವೀಕರಿಸಿದ್ದಾರೆ...ಅವರೊಂದಿಗೆ ಕಲಾಂ ಆಡಿದ ಅವರು ಆಡಿದ ಕೊನೆ ಮಾತುಗಳೇನು? ಇಲ್ಲಿದೆ ಓದಿ....ಸೃಜನ್ ಸಿಂಗ್ ಅವರೊಂದಿಗಿನ ಕಲಾಂ ಅವರ ಕೊನೆ ಘಳಿಗೆಯ ಮಾತುಗಳು...[ಪ್ರೀತಿಯ ಕಲಾಂ ತಾತಾನಿಗೆ ನಮನ ಸಲ್ಲಿಸಿದ ಮೊಮ್ಮಕ್ಕಳು]

ಗುವಾಹಟಿಯಿಂದ ಶಿಲ್ಆಂಗ್ ತಲುಪುವ ದಾರಿಯ ಮಧ್ಯೆ ಪಮಜಾಬಿನ ದಾಳಿ, ಐಐಎಂನಲ್ಲಿ ಮಾತನಾಡುವ 'ಜೀವನಕ್ಕೆ ಪೂರಕವಾದ ಭೂಗ್ರಹದ ನಿರ್ಮಾಣ'ದ ಬಗ್ಗೆ, ಹೀಗೆ ನಾನಾ ವಿಷಯಗಳನ್ನು ಮಾತನಾಡಿದೆವು.
ಶಿಲ್ಲಾಂಗ್ ತಲುಪಿದ ವೇಳೆ ಅಲ್ಲಿನ ಕಾರ್ಯಕ್ರಮ ರೂವಾರಿಗಳನ್ನು ಭೇಟಿ ಮಾಡಿ ವೇದಿಕೆ ಮುಂಭಾಗಕ್ಕೆ ತೆರಳಿದರು. ನಾನು ಆಗ ತಾನೇ ಮೈಕಿನ ಪಿನ್ ಸರಿ ಮಾಡಿ ಹಿಂತಿರುಗುತ್ತಿದೆ. ಆಗ ಕಲಾಂ ಅವರು ಯಾವಾಗಲೂ ವಿದ್ಯಾರ್ಥಿಗಳನ್ನು ಹೆಚ್ಚು ಹೊತ್ತು ಕಾಯಿಸಬಾರದು ಎನ್ನುತ್ತಾ ಅವಸರದಿಂದಲೇ ಶಿಲ್ಲಾಂಗ್ ನ ಐಐಎಂ ಸಭಾಂಗಣ ಏರಿದರು. ಆಗ ನನ್ನತ್ತ ನಗೆ ಬೀರಿದ ಕಲಾಂ "ಫನ್ನಿ ಮ್ಯಾನ್, ಆರ್ ಯು ಡೂಯಿಂಗ್ ವೆಲ್ ?" ಎಂದು ಕೇಳಿದ್ದರು.
ಬಳಿಕ ನಾನು ನಗುತ್ತಲೇ ಅವರ ಹಿಂದೆ ಇದ್ದ ಕುರ್ಚಿಯಲ್ಲಿ ಆಸೀನನಾದೆ. ಬಳಿಕ ಅವರು ಎರಡು ನಿಮಿಷ ಮಾತನಾಡಿರಬಹುದು. ಸುಮಾರು ಒಂದು ನಿಮಿಷ ಕಾಲ ಮಾತು ಸ್ತಬ್ಧವಾಯಿತು. ಏಕೆಂದು ನೋಡುತ್ತಿರುವಾಗಲೇ ಅವರು ನಿಂತಲ್ಲೇ ಕುಸಿದು ಬಿದ್ದರು ಎಂದು ಕಲಾಂ ಅವರ ಬದುಕಿನ ಕೊನೆ ಕ್ಷಣದ ಮುಕ್ತಾಯವನ್ನು ಹೇಳುತ್ತಲೇ ಬಹಳಷ್ಟು ದುಃಖತಪ್ತರಾದರು.
ಕುಸಿದ ಬಿದ್ದ ನಂತರ ವೇದಿಕೆಯಲ್ಲಿನ ಸೇನಾ ಸಿಬ್ಬಂದಿ, ವೈದ್ಯರು ಸೇರಿದಂತೆ ಎಲ್ಲರೂ ಒಟ್ಟುಗೂಡಿ ಆಸ್ಪತ್ರೆಗೆ ಸೇರಿಸಲಾಯಿತು. ಆದರೆ ಅವರು ಮುಕ್ಕಾಲು ಮುಚ್ಚಿದ ಕಣ್ಣುಗಳು ನನ್ನ ಅಕ್ಷಿಪಟಲದಲ್ಲಿ ಹಾಗೇ ಅಚ್ಚೊತ್ತಿದೆ. ಅವರ ಕೊನೆ ಮಾತುಗಳು, ಅವರೊಂದಿಗಿನ ಕೊನೆ ಕ್ಷಣಗಳು ಈಗ ಎಲ್ಲವೂ ನೆನಪು ಮಾತ್ರ.
-
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ -
Karnataka Rain: ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
ಕೇವಲ 2 ನಿಮಿಷದಲ್ಲಿ ಉದ್ಯೋಗ ಅರ್ಜಿ ರಿಜೆಕ್ಟ್: 'ಎಐ' ನೇಮಕಾತಿ ಬಗ್ಗೆ ಭಾರತೀಯ ಮೂಲದ ವಿದ್ಯಾರ್ಥಿನಿ ಬೇಸರ -
Gold Rate Today: ಬೆಂಗಳೂರಿನಲ್ಲಿ ಚಿನ್ನದ ದರ ಮತ್ತೆ ಏರಿಕೆ: 15,000 ರೂಪಾಯಿ ಗಡಿ ದಾಟಿದ 24 ಕ್ಯಾರೆಟ್ ಚಿನ್ನ -
Summer Camp: ಶೃಂಗೇರಿ ಶಾರದಾ ಪೀಠದಿಂದ ವಟುಗಳಿಗಾಗಿ 15 ದಿನಗಳ ಉಚಿತ 'ಸಂಸ್ಕಾರ' ಬೇಸಿಗೆ ಶಿಬಿರ -
Rishab Shetty: ಅಧ್ಯಾಯ ಎರಡು ಇಲ್ಲಿಂದ ಶುರು; ಸ್ಯಾಂಡಲ್ವುಡ್ನಲ್ಲಿ ಸಂಚಲನ ಮೂಡಿಸಿದ ರಿಷಬ್ ಶೆಟ್ಟಿ ಪೋಸ್ಟ್ -
ಹೊಸತೊಡಕು: ಮಧ್ಯರಾತ್ರಿಯಿಂದಲೇ ಮಾಂಸ ಖರೀದಿ ಭರಾಟೆ, ಎಷ್ಟಿದೆ ಇಂದಿನ ಚಿಕನ್-ಮಟನ್ ದರ? -
World Happiness Report 2026: ಫಿನ್ಲೆಂಡ್ ಜಗತ್ತಿನ ಅತ್ಯಂತ ಸಂತೋಷದಾಯಕ ದೇಶ: ನಮ್ಮ ಭಾರತಕ್ಕೆ ಸಿಕ್ಕ ಸ್ಥಾನವೆಷ್ಟು? -
ಈ ಸಂವತ್ಸರಕ್ಕೇಕೆ ಈ ಹೆಸರು? ‘ಪರಾಭವ’ ಅಂದ್ರೆ ‘ಸೋಲು’ ಎಂಬ ಅರ್ಥವಲ್ಲವೇ? -
Rashmika Mandanna: ಮನೆಮಗಳಾಗಿ ಇಲ್ಲಿಗೆ ಬಂದೆ, ಈಗ ಸೊಸೆಯಾಗಿ ನಿಂತಿದ್ದೇನೆ: ರಶ್ಮಿಕಾ ಮಂದಣ್ಣ ಭಾವುಕ -
ಕೇಂದ್ರೀಯ ವಿದ್ಯಾಲಯ 1ನೇ ತರಗತಿ ಪ್ರವೇಶಾತಿ 2026: ಇಂದಿನಿಂದಲೇ ಅರ್ಜಿ ಸಲ್ಲಿಕೆ ಶುರು, ಪೋಷಕರೇ ಈಗಲೇ ಗಮನಿಸಿ












Click it and Unblock the Notifications