ಅಜಂ ಖಾನ್ ಹಾಗೂ ಮೇನಕಾ ಗಾಂಧಿಗೆ ಚುನಾವಣೆ ಪ್ರಚಾರಕ್ಕೆ ನಿಷೇಧ
ನವದೆಹಲಿ, ಏಪ್ರಿಲ್ 16: ಚುನಾವಣೆ ನೀತಿ ಸಂಹಿತೆ ಉಲ್ಲಂಘಿಸಿದ ಕಾರಣಕ್ಕೆ ಸಮಾಜವಾದಿ ಪಕ್ಷದ ಅಜಂ ಖಾನ್ ಹಾಗೂ ಕೇಂದ್ರ ಸಚಿವೆ ಮೇನಕಾ ಗಾಂಧಿ ಅವರಿಗೆ ಚುನಾವಣಾ ಪ್ರಚಾರದಿಂದ ಸೋಮವಾರ ಚುನಾವಣಾ ಆಯೋಗ ನಿಷೇಧ ಹೇರಿದೆ. ಇಂಥದ್ದೇ ಆರೋಪದ ಮೇಲೆ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹಾಗೂ ಮಾಯಾವತಿ ವಿರುದ್ಧ ಕೂಡ ನಿಷೇಧ ಹೇರಲಾಗಿತ್ತು.
ಅಜಂ ಖಾನ್ ಗೆ ಮೂರು ದಿನಗಳ ನಿಷೇಧ ಹೇರಿದ್ದರೆ, ಮೇನಕಾ ಗಾಂಧಿಗೆ ಎರಡು ದಿನಗಳ ಅವಧಿಗೆ ಈ ನಿಷೇಧ ಇದೆ. ಮಂಗಳವಾರ ಬೆಳಗ್ಗೆ ಹತ್ತು ಗಂಟೆಯಿಂದ ಇದು ಚಾಲ್ತಿಗೆ ಬರಲಿದೆ. ನಟಿ ಜಯಪ್ರದಾ ಬಗ್ಗೆ ಸೊಂಟದ ಕೆಳಗಿನ ಮಾತನಾಡಿದ ಅಜಂ ಖಾನ್ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿದೆ. ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ರಾಮ್ ಪುರ ಕ್ಷೇತ್ರದಲ್ಲಿ ಜಯಪ್ರದಾ ವಿರುದ್ಧ ಅಜಂ ಖಾನ್ ಸ್ಪರ್ಧಿಸುತ್ತಿದ್ದಾರೆ.
ನಾನು ಆಕೆಯನ್ನು (ಜಯಪ್ರದಾ) ರಾಮ್ ಪುರಕ್ಕೆ ಕರೆತಂದೆ. ಯಾರೂ ಆಕೆಯ ಮೈ ಮುಟ್ಟಕ್ಕೆ ನಾನು ಬಿಡಲಿಲ್ಲ, ಅದಕ್ಕೆ ನೀವು ಸಾಕ್ಷಿ ಇದ್ದೀರಿ. ಆಕೆಯ ನಿಜವಾದ ಮುಖ ತಿಳಿಯುವುದಕ್ಕೆ ಹದಿನೇಳು ವರ್ಷ ಬೇಕಾಯಿತು. ಆಕೆ ಖಾಕಿ ಒಳಚಡ್ಡಿ (ಬಿಜೆಪಿ ಸೇರಿದ್ದಕ್ಕೆ ಈ ರೀತಿಯ ಟೀಕೆ) ಧರಿಸುವುದು ಹದಿನೇಳು ದಿನದ ಹಿಂದಷ್ಟೇ ಗೊತ್ತಾಯಿತು ಎಂದು ಅಜಂ ಖಾನ್ ಹೇಳಿಕೆ ನೀಡಿದ್ದರು.

ಇನ್ನು ಮೇನಕಾ ಗಾಂಧಿ, ನನಗೆ ಮುಸ್ಲಿಮರು ಮತ ನೀಡದಿದ್ದರೆ ನನ್ನ ಹೃದಯ ಕಲ್ಲಾಗುತ್ತಾದೆ. ಅವರು ಕೆಲಸ ಮಾಡಿಕೊಡುವಂತೆ ನನ್ನಲ್ಲಿಗೆ ಬಂದಾಗ ಇರಲಿ ಎನ್ನಿಸುತ್ತದೆ. ಇದು ಕೊಟ್ಟು ತೆಗೆದುಕೊಳ್ಳುವುದಲ್ಲವಾ? ನಾವೆಲ್ಲರೂ ಮಹಾತ್ಮ ಗಾಂಧಿ ಮಕ್ಕಳಲ್ಲ, ಹೌದಲ್ಲವಾ? ಎಂದು ಹೇಳಿದ್ದರು. ಆ ವಿಡಿಯೋ ಕ್ಲಿಪ್ ವೈರಲ್ ಆಗಿತ್ತು.
-
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
Rain Alert: ಕರ್ನಾಟಕದಲ್ಲಿ ಮಾ.27ರವರೆಗೆ ಗುಡುಗು ಸಹಿತ ಮಳೆ, ಕರಾವಳಿಗೆ ಉಷ್ಣ ಅಲೆ ಎಚ್ಚರಿಕೆ -
ಯುವತಿಯರ ಜೊತೆ ಸೆಕ್ಯೂರಿಟಿ ಗಾರ್ಡ್ ಭರ್ಜರಿ ಸ್ಟೆಪ್ಸ್: 'ಬೇಬಿ ಡಾಲ್' ಡ್ಯಾನ್ಸ್ ವಿಡಿಯೋ ಸಖತ್ Viral -
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ -
India Rain Forecast: ಮುಂದಿನ 5 ದಿನ ಈ ಭಾಗಗಳಲ್ಲಿ ವ್ಯಾಪಕ ಮಳೆ, ಉಷ್ಣ ಅಲೆ ಎಚ್ಚರಿಕೆ -
ಶೃಂಗೇರಿ ಮಠದಿಂದ ಶಾಲಾ ಮಕ್ಕಳಿಗೆ ಸುವರ್ಣಾವಕಾಶ: 'ರಾಮಾಯಣ ಪರೀಕ್ಷೆ' ಬರೆದು 50 ಸಾವಿರ ರೂ. ನಗದು ಗೆಲ್ಲಿ -
Vande Bharat Express: ಬೆಂಗಳೂರು-ಕಲಬುರಗಿ ಸೇರಿದಂತೆ 4 ರೈಲುಗಳ ವೇಳಾಪಟ್ಟಿ ಪರಿಷ್ಕರಣೆ -
ಕರ್ನಾಟಕ PGCET 2026 ಅಧಿಸೂಚನೆ ಪ್ರಕಟ: ಎಂಬಿಎ ಸೇರಿ ವಿವಿಧ ಸ್ನಾತಕೋತ್ತರ ಪದವಿ ಪ್ರವೇಶಾತಿಗೆ ಮಾರ್ಚ್ 23 ರಿಂದ ಅರ್ಜಿ ಆಹ್ವಾನ -
ವಿಶ್ವಮಾತೆ ಎನ್ನುತ್ತಾ ಶ್ರೀಚಾಮುಂಡೇಶ್ವರಿಯ ಕನ್ನಡ ಹಾಡು ಹಂಚಿಕೊಂಡ ಪ್ರಧಾನಿ ಮೋದಿ -
ಮಾರ್ಚ್ 21ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ












Click it and Unblock the Notifications