ದೆಹಲಿ ಮತದಾರರಿಗೆ ಸ್ಪೈಸ್ ಜೆಟ್ ಟಿಕೆಟ್ ದರದಲ್ಲಿ ರಿಯಾಯಿತಿ
ನವದೆಹಲಿ, ಫೆಬ್ರವರಿ 04: ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಮತ ಹಾಕಲು ಮುಂದಾಗುವ ಮತದಾರರಿಗೆ ಸ್ಪೈಸ್ ಜೆಟ್ ವಿಮಾನಯಾನ ಸಂಸ್ಥೆ ಉಚಿತ ಪ್ರಯಾಣದ ಕೊಡುಗೆ ನೀಡುತ್ತಿದೆ. ಮೂಲ ಟಿಕೆಟ್ ದರವನ್ನು ತೆಗೆದು ಹಾಕಲಾಗಿದ್ದು, ನೂರಾರು ಮಂದಿಗೆ ದೆಹಲಿಯಲ್ಲಿ ಮತದಾನ ಮಾಡುವ ಅವಕಾಶ ಸಿಗಲಿದೆ.
ದೇಶದ ವಿವಿಧೆಡೆಯಿಂದ ದೆಹಲಿಗೆ ಮತದಾನ ಮಾಡಲು ಫೆಬ್ರವರಿ 8ರಂದು ತೆರಳುವವರಿಗೆ ಮೂಲ ಟಿಕೆಟ್ ದರವನ್ನು ತೆಗೆದು ಹಾಕಲಾಗಿದ್ದು, ತೆರಿಗೆ, ಸರ್ ಚಾರ್ಜ್ ಪಾವತಿಸಿ ಪ್ರಯಾಣಿಸಬಹುದಾಗಿದೆ ಎಂದು ಬಜೆಟ್ ವಿಮಾನಯಾನ ಸಂಸ್ಥೆ ಹೇಳಿದೆ.
ಈ ಕೊಡುಗೆಯನ್ನು ಪಡೆಯಲು ಇಚ್ಛಿಸುವ ಪ್ರಯಾಣಿಕರು, ಆನ್ ಲೈನ್ ನಲ್ಲಿ ನೋಂದಣಿ ಮಾಡಿಕೊಳ್ಳಬೇಕಾಗುತ್ತದೆ. ಸ್ಪೈಸ್ ಜೆಟ್ ಆಂತರಿಕ ಸಮಿತಿ ಪ್ರಯಾಣಿಕರನ್ನು ಆಯ್ಕೆ ಮಾಡಿ ಪ್ರಕಟಿಸಲಿದೆ.

ಸ್ಪೈಸ್ ಡೆಮಾಕ್ರಾಸಿ ಹೆಸರಿನ ಈ ಅಭಿಯಾನದಲ್ಲಿ ದೆಹಲಿಗೆ ತೆರಳಿ ವಾಪಸ್ ಬರುವ ಟಿಕೆಟ್ ದರದ ಮೇಲೆ ರಿಯಾಯಿತಿ ಸಿಗಲಿದೆ. ಮೂಲ ಟಿಕೆಟ್ ದರ ರೀಫಂಡ್ ಆಗಲಿದೆ. ಉದಾಹರಣೆಗೆ ಬೆಂಗಳೂರಿನಿಂದ ಫೆಬ್ರವರಿ 7ರಂದು ಬಿಟ್ಟು ಫೆಬ್ರವರಿ 8ರಂದು ಮತದಾನ ಮಾಡಿ ರಿಟರ್ನ್ ಆಗಬಹುದು. ಅಥವಾ ಫೆ.8ರಂದು ಇಲ್ಲಿಂದ ತೆರಳಿ, ಫೆ. 9ರಂದು ಹಿಂತಿರುಗಬಹುದು.
ಮತದಾನದ ದಿನ(ಫೆ.8)ದಂದು ಮತ ಹಾಕಿ ರಿಟರ್ನ್ ಆಗುವವರಿಗೆ ಟೂವೇ ಟಿಕೆಟ್ ದರ ರೀಫಂಡ್ ಆಗಲಿದೆ. ಮಿಕ್ಕ ದಿನಕ್ಕೆ ಒನ್ ವೇ ಮಾತ್ರ ರೀಫಂಡ್ ಆಗಲಿದೆ. ಫೆಬ್ರವರಿ 5ರೊಳಗೆ ಈ ಕೊಡುಗೆ ಪಡೆಯಲು ಬಯಸುವವರು ನೋಂದಣಿ ಮಾಡಿಕೊಳ್ಳಬಹುದು. ಫೆ.6 ರಂದು ಆಯ್ಕೆಯಾದವರ ಹೆಸರು ಪ್ರಕಟಿಸಲಾಗುತ್ತದೆ.
ಮತದಾನ ಮಾಡಿದ ಬಳಿಕ ಸೆಲ್ಫಿ ತೆಗೆದುಕೊಂಡು ಫೇಸ್ ಬುಕ್, ಇನ್ಸ್ಟಾಗ್ರಾಮ್, ಟ್ವಿಟ್ಟರ್ ನಲ್ಲಿ ಹಾಕಿಕೊಂಡು ಸ್ಪೈಸ್ ಡೆಮಾಕ್ರಾಸಿ ಎಂದು ಬರೆದುಕೊಳ್ಳುವಂತೆ ಸೂಚಿಸಲಾಗಿದೆ ಎಂದು ಸ್ಪೈಸ್ ಜೆಟ್ ಚೇರ್ಮನ್ ಅಜಯ್ ಸಿಂಗ್ ಹೇಳಿದರು.
-
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ -
Bengaluru property: ಬೆಂಗಳೂರು ಆಸ್ತಿ ತೆರಿಗೆ ಬಾಕಿದಾರರಿಗೆ ಇದೀಗ ಬಿಗ್ ಶಾಕ್: ಪಾಲಿಕೆಗಳೇ ಆಸ್ತಿ ಖರೀದಿ












Click it and Unblock the Notifications