ಸಿನಿಮಾ ನೋಡಿ ಹೆಸರನ್ನೇ ಬದಲಿಸಿಕೊಂಡ ದೆಹಲಿಯ 'ಜೇಮ್ಸ್ ಬಾಂಡ್'!
ನವದೆಹಲಿ, ಜುಲೈ.14: ಸಿನಿಮಾ ಅಂದರೆ ಒಂದು ಕ್ರೇಜ್. ಹೀರೋಗಳ ಬಗ್ಗೆ ಅಭಿಮಾನ ಇಟ್ಟುಕೊಳ್ಳುವುದು ಸರ್ವೇ ಸಾಮಾನ್ಯ. ಹಾರರ್ ಮೂವೀಗಳನ್ನು ನೋಡುವ ಸಂದರ್ಭದಲ್ಲಿ ಪ್ರೇಕ್ಷಕರು ಅದರಲ್ಲೇ ಮುಳುಗಿ ಹೋಗುವುದೂ ಹೊಸತಲ್ಲ. ಆದರೆ ನವದೆಹಲಿಯಲ್ಲಿ ನಡೆದ ಘಟನೆಯು ಇದೆಲ್ಲಕ್ಕಿಂತಲೂ ಭಿನ್ನ ಮತ್ತು ಅಚ್ಚರಿ ಮೂಡಿಸುವಂತಿದೆ.
ನವದೆಹಲಿಯಲ್ಲಿ ಜೇಮ್ಸ್ ಬಾಂಡ್ ಸಿನಿಮಾವನ್ನು ನೋಡಿದ 33 ವರ್ಷದ ವಿಕಾಸ್ ಕರ್ದಮ್ ಗೂಢಚಾರಿ ಪಾತ್ರದಲ್ಲಿ ಅಮೋಘವಾಗಿ ನಟಿಸಿದ ನಟನಿಗೆ ಫುಲ್ ಫಿದಾ ಆಗಿದ್ದಾರೆ. ಇಷ್ಟಕ್ಕೆ ಸುಮ್ಮನಾಗಿದ್ದರೆ ಇದೊಂದು ಸುದ್ದಿಯೇ ಆಗುತ್ತಿರಲಿಲ್ಲ.
ಜೇಮ್ಸ್ ಬಾಂಡ್ ಸಿನಿಮಾಗೆ ಮನಸೋತ ವಿಕಾಸ್ ಕರ್ದಮ್ ತಮ್ಮ ಹೆಸರನ್ನು ಅಧಿಕೃತವಾಗಿ ಜೇಮ್ಸ್ ಬಾಂಡ್ ಎಂದು ಮರುನಾಮಕರಣ ಮಾಡಿಕೊಂಡಿರುವುದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಪತಿಯ ಈ ನಡೆಯಿಂದ ಸ್ವತಃ ಪತ್ನಿಗೆ ಕಿರಿಕಿರಿ ಅನುಭವಿಸುವಂತಾಗಿದೆ.

ಸ್ನೇಹಿತರು ಮತ್ತು ಸಹೋದ್ಯೋಗಿಗಳ ವಿರೋಧ:
ಸ್ನೇಹಿತರು ಮತ್ತು ಸಹೋದ್ಯೋಗಿಗಳ ವಿರೋಧದ ಹೊರತಾಗಿಯೂ, ವಿಕಾಸ್ ಕರ್ದಮ್ ತಮ್ಮ ಹೆಸರನ್ನು 'ಜೇಮ್ಸ್ ಬಾಂಡ್' ಎಂದು ಬದಲಾಯಿಸಲು ಕೆಲವು ತಿಂಗಳುಗಳಿಂದ ಯೋಚಿಸುತ್ತಿದ್ದರು. ಅಲ್ಲದೇ ತಮ್ಮ ನೆಚ್ಚಿನ ನಟನ ಹೆಸರು ತಮ್ಮ ವ್ಯಕ್ತಿತ್ವದ ಜೊತೆಗೆ ಹೊಂದಾಣಿಕೆ ಆಗುತ್ತದೆ ಎಂದು ಕರ್ದಮ್ ಭಾವಿಸಿದ್ದಾರೆ.
ಪಶ್ಚಿಮ ದೆಹಲಿಯ ನಿವಾಸಿ ವಿಕಾಸ್ ಕರ್ದಮ್:
ಪಶ್ಚಿಮ ದೆಹಲಿಯ ನವಾಡ ಹೌಸಿಂಗ್ ಕಾಂಪ್ಲೆಕ್ಸ್ ನ 2 ಬಿಎಚ್ ಕೆ ಮನೆಯಲ್ಲಿ ಬಾಡಿಗೆ ಇರುವ ವಿಕಾಸ್ ಕರ್ದಮ್ ಅವರಿಗೆ ಪತ್ನಿ ಹಾಗೂ 3 ವರ್ಷದ ಮಗುವಿದೆ. ಟ್ರೋಲಿಂಗ್ ಮತ್ತು ಅಪಹಾಸ್ಯಕ್ಕೆ ಗುರಿಯಾಗುವ ಭೀತಿಯಲ್ಲಿ ಪತಿಯ ತೀರ್ಮಾನದ ವಿರುದ್ಧ ಪತ್ನಿ ಅಸಮಾಧಾನಗೊಂಡಿದ್ದಾರೆ. ಈ ವಿಚಾರವನ್ನು ಮೊದಲು ತಿಳಿಸಿದಾಗ ಆಕೆ ನನ್ನನ್ನು ದುರುಗುಟ್ಟಿಕೊಂಡು ನೋಡಿದಳು. ಕೋಪದಲ್ಲಿ ರೂಮಿಗೆ ಸೇರಿಕೊಂಡ ಪತ್ನಿ ನಂತರ ಎರಡು ದಿನ ತಮ್ಮೊಂದಿಗೆ ಮಾತನಾಡಲೇ ಇಲ್ಲ ಎಂದು ವಿಕಾಸ್ ಕರ್ದಮ್ ಅಲಿಯಾಸ್ ಜೇಮ್ಸ್ ಬಾಂಡ್ ಟೈಮ್ಸ್ ಆಫ್ ಇಂಡಿಯಾಗೆ ತಿಳಿಸಿದ್ದಾರೆ.
ಇನ್ನು, ತಾವು ಹೆಸರು ಬದಲಿಸಿಕೊಂಡಿರುವ ವಿಚಾರ ಇಷ್ಟೊಂದು ವೇಗವಾಗಿ ಸುದ್ದಿ ಆಗುತ್ತದೆ ಎಂದು ತಾವೇ ಭಾವಿಸಿರಲಿಲ್ಲ. ನನ್ನ ಸಂಬಂಧಿಕರಿಗೆ ಇನ್ನೂ ನಾನು ಈ ವಿಚಾರವನ್ನೇ ಹೇಳಿರಲಿಲ್ಲ. ಸದ್ಯ ಆಧಾರ್ ಕಾರ್ಡ್, ಪಾನ್ ಕಾರ್ಡ್ ಸೇರಿದಂತೆ ಹಲವು ದಾಖಲೆಗಳಲ್ಲಿ ಹೆಸರು ಪರಿಷ್ಕರಿಸಿಕೊಳ್ಳುವುದರಲ್ಲಿ ಹೆಚ್ಚು ಗಮನ ಹರಿಸಿರುವುದಾಗಿ ಜೇಮ್ಸ್ ಬಾಂಡ್ ಹೇಳಿದ್ದಾರೆ.
-
ಲವ್ ಮಾಕ್ಟೇಲ್ 3 ವಿವಾದ: ನನ್ನ ಕಥೆಯ ದ್ವಿತೀಯಾರ್ಧ ನಕಲು: ಸಿನಿಮಾ ಬರಹಗಾರರೇ ಎಚ್ಚರ ಎಂದ ನಿರ್ದೇಶಕ ರಾಘವೇಂದ್ರ -
Aditya Dhar: ರಣವೀರ್ ಸಿಂಗ್ ಹಿಂದಿಕ್ಕಿ IMDb ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ 'ಧುರಂಧರ್ 2' ನಿರ್ದೇಶಕ ಆದಿತ್ಯ ಧರ್ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ












Click it and Unblock the Notifications