ಅರವಿಂದ್ ಕೇಜ್ರಿವಾಲ್ ಕಾರಿನ ಮೇಲೆ ದೊಣ್ಣೆಗಳಿಂದ ದಾಳಿ
ನವದೆಹಲಿ, ಫೆಬ್ರವರಿ 8: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ರ ಕಾರಿನ ಮೇಲೆ ಶುಕ್ರವಾರ ಗುಂಪೊಂದು ದೊಣ್ಣೆಗಳಿಂದ ದಾಳಿ ನಡೆಸಿದೆ. ಇಲ್ಲಿನ ನರೇಲಾದಲ್ಲಿ ಈ ಘಟನೆ ಸಂಭವಿಸಿದೆ ಎಂದು ಮುಖ್ಯಮಂತ್ರಿ ಕಚೇರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಘಟನೆಯಲ್ಲಿ ಯಾರಿಗೂ ಹಾನಿಯಾಗಿಲ್ಲ ಎಂದು ತಿಳಿಸಲಾಗಿದೆ.
ನೂರಕ್ಕೂ ಹೆಚ್ಚು ಮಂದಿ ಇದ್ದ ಗುಂಪು ಕೇಜ್ರಿವಾಲ್ ಇದ್ದ ಕಾರನ್ನು ತಡೆಯಲು ಯತ್ನಿಸಿದೆ. ಆ ನಂತರ ದೊಣ್ಣೆಗಳಿಂದ ದಾಳಿ ಮಾಡಿದೆ. ದೆಹಲಿ ಹೊರಭಾಗದಲ್ಲಿನ ಇಪ್ಪತ್ತೈದು ಅನಧಿಕೃತ ಕಾಲೋನಿಗಳಲ್ಲಿ ಅಭಿವೃದ್ಧಿ ಕೆಲಸಗಳನ್ನು ಉದ್ಘಾಟನೆ ಮಾಡುವ ಸಲುವಾಗಿ ಅರವಿಂದ್ ಕೇಜ್ರಿವಾಲ್ ತೆರಳಿದ್ದಾಗ ಈ ಘಟನೆ ನಡೆದಿದೆ.
ದೀದಿ ಬೆಂಬಲಕ್ಕೆ ಕೇಜ್ರಿವಾಲ್, ಛೀಮಾರಿ ಹಾಕಿದ ಬಿಜೆಪಿ
ಕಾರಿನ ಕನ್ನಡಿ ಒಡೆದಿದ್ದು, ಉಳಿದಂತೆ ಯಾರಿಗೂ ಯಾವುದೆ ಹಾನಿಯಾಗಿಲ್ಲ ಎಂದು ತಿಳಿದುಬಂದಿದೆ. ಇದೇ ವೇಳೆ, ಈ ದಾಳಿಯ ಹಿಂದೆ ಭಾರತೀಯ ಜನತಾ ಪಕ್ಷದ ಕೈವಾಡ ಇದೆ ಎಂದು ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಆರೋಪ ಮಾಡಿದ್ದಾರೆ. ಸದ್ಯಕ್ಕೆ ಘಟನೆ ಬಗ್ಗೆ ತನಿಖೆಯನ್ನು ಮುಂದುವರಿಸಲಾಗಿದೆ.