ದೆಹಲಿ ಹಿಂಸಾಚಾರ; ಹಿಂದುಗಳ ಪರ ನಿಧಿ ಸಂಗ್ರಹಕ್ಕಿಳಿದ ಬಿಜೆಪಿ ನಾಯಕ
ನವದೆಹಲಿ, ಮಾರ್ಚ್ 17; ದೆಹಲಿ ಹಿಂಸಾಚಾರ ತಣ್ಣಗಾಗಿದೆ. ಹಿಂಸಾಚಾರದಲ್ಲಿ ಸಾವು ನೋವಿಗೆ ತುತ್ತಾದವರಿಗೆ ದೆಹಲಿ ಬಿಜೆಪಿ ನಾಯಕ ಕಪಿಲ್ ಮಿಶ್ರಾ ನಿಧಿ ಸಂಗ್ರಹಕ್ಕೆ ಇಳಿದಿದ್ದಾರೆ.
ಕಳೆದ ಫೆಬ್ರವರಿಯಲ್ಲಿ ರಾಷ್ಟ್ರೀಯ ಪೌರತ್ವ ತಿದ್ದುಪಡಿ ಕಾಯ್ದೆ ಪರ ವಿರೋಧದ ವೇಳೆ ನಡೆದಿದ್ದ ಹಿಂಸಾಚಾರದಲ್ಲಿ 55 ಜನ ಮೃತಪಟ್ಟು, ಅನೇಕ ಜನ ಆಸ್ತಿಪಾಸ್ತಿ ಕಳೆದುಕೊಂಡಿದ್ದಾರೆ.
ಇದಕ್ಕಾಗಿ ನಿಧಿ ಸಂಗ್ರಹ ಮಾಡಲು Milaap.org ಎಂಬ ವೆಬ್ಸೈಟ್ ಆರಂಭಿಸಿದ್ದಾರೆ. ಟ್ವಿಟರ್ ನಲ್ಲೂ ಕೂಡ ಅಭಿಯಾನ ನಡೆಸಿದ್ದು, ದೇಣಿಗೆ ನೀಡಿದವರ ಹೆಸರು ಹಾಗೂ ಹಣವನ್ನು ಟ್ವಿಟರ್ ನಲ್ಲಿ ಬಹಿರಂಗಪಡಿಸುತ್ತಿದ್ದಾರೆ.

ಆಮ್ ಆದ್ಮಿ ಪಾರ್ಟಿಯ ಶಾಸಕರಾಗಿದ್ದ ಕಪಿಲ್ ಮಿಶ್ರಾ ಅಲ್ಲಿಂದ ಉಚ್ಚಾಟನೆಗೊಂಡ ಬಳಿಕ ಬಿಜೆಪಿ ಸೇರಿದ್ದರು. ದೆಹಲಿ ಹಿಂಸಾಚಾರಕ್ಕೆ ಕುಮ್ಮಕ್ಕು ನೀಡಿದ್ದಾರೆ ಎಂಬ ಆರೋಪ ಇವರ ಮೇಲೆ ಕೇಳಿಬಂದಿದೆ.












Click it and Unblock the Notifications