ರಫೇಲ್ ಒಪ್ಪಂದ: ಸುಪ್ರೀಂಕೋರ್ಟ್ನಲ್ಲಿ ಕಾವೇರಿದ ಚರ್ಚೆ
ನವದೆಹಲಿ, ನವೆಂಬರ್ 14: ರಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ನಲ್ಲಿ ಬುಧವಾರ ತೀವ್ರ ಚರ್ಚೆ ನಡೆದಿದೆ.
ರಫೇಲ್: ಬೆಲೆಯ ವಿವರ ಮುಚ್ಚಿದ ಲಕೋಟೆಯಲ್ಲಿ ಸುಪ್ರೀಂಗೆ ನೀಡಿದ ಕೇಂದ್ರ
ರಫೇಲ್ ಒಪ್ಪಂದದಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ಸಲ್ಲಿಸಲಾಗಿರುವ ಅರ್ಜಿದಾರರ ಪರವಾಗಿ ಹಾಜರಾಗಿರುವ ವಕೀಲ ಪ್ರಶಾಂತ್ ಭೂಷಣ್ ಮತ್ತು ಅಟಾರ್ನಿ ಜನರಲ್ ಕೆಕೆ ವೇಣುಗೋಪಾಲ್ ಅವರ ನಡುವೆ ಕುತೂಹಲಕಾರಿ ವಾದ-ವಿವಾದಗಳು ನಡೆದಿದೆ.
36 ಯುದ್ಧ ವಿಮಾನಗಳ ಖರೀದಿಗೆ ತಾವು ಯಾವ ರೀತಿ ನಿರ್ಣಯ ಕೈಗೊಳ್ಳುವಿಕೆಯ ಪ್ರಕ್ರಿಯೆಯನ್ನು ನಡೆಸಿದೆವು ಮತ್ತು ಬೆಲೆ ನಿಗದಿಯ ಕಾರ್ಯಗಳು ನಡೆದವು ಎಂಬ ಬಗ್ಗೆ ಕೇಂದ್ರ ಸರ್ಕಾರ ಸೋಮವಾರ ಸುಪ್ರೀಂಕೋರ್ಟ್ಗೆ ಮಾಹಿತಿ ನೀಡಿತ್ತು.
ಈ ಒಪ್ಪಂದದ ಕುರಿತು ತಜ್ಞರು ಮಾತ್ರವೇ ನಿರ್ಧರಿಸಲು ಸಾಧ್ಯವೇ ಹೊರತು ಕೋರ್ಟ್ಗಲ್ಲ ಎಂದು ವೇಣುಗೋಪಾಲ್, ಒಪ್ಪಂದವನ್ನಿ ಪುನರ್ ಪರಿಶೀಲಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಗಳಿಗೆ ಆಕ್ಷೇಪಣೆ ವ್ಯಕ್ತಪಡಿಸಿದದ್ದಾರೆ.
ಆಫ್ಸೆಟ್ ಉತ್ಪಾದನೆಯ ಪಾಲುದಾರಿಕೆ ಇಲ್ಲ: ಎಚ್ಎಎಲ್ ಸ್ಪಷ್ಟನೆ
* ರಫೇಲ್ ಒಪ್ಪಂದದ ಅನುಸಾರ ಯುದ್ಧ ವಿಮಾನಗಳಿಗೆ ಮಾಡಲಾದ ಬೆಲೆ ನಿರ್ಧಾರದ ಕುರಿತು ಸರ್ಕಾರ ಯಾವುದೇ ಮಾಹಿತಿ ನೀಡುತ್ತಿಲ್ಲ ಎಂದು ಪ್ರಶಾಂತ್ ಭೂಷಣ್ ಆರೋಪಿಸಿದರು.
* ಬಳಿಕ ಭೂಷಣ್ ಅವರು ಒಪ್ಪಂದದ ಗೋಪ್ಯತೆಯ ಮಾಹಿತಿಯನ್ನು ವಿವರಿಸಿದರು.
* ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕೆಕೆ ವೇಣುಗೋಪಾಲ್, ಇದು ಅವರಿಗೆ ಹೇಗೆ ಸಿಕ್ಕಿತು ಎಂದು ಪ್ರಶ್ನಿಸಿದರು. ಇದು ಗೋಪ್ಯವಾಗಿಯೇ ಇರಬೇಕಾಗಿರುವುದು. ಅವರು ತಮ್ಮ ಮೂಲವನ್ನು ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದರು.
'ರಫೇಲ್ ರಾದ್ಧಾಂತದ ತನಿಖೆಯಾದರೆ ಮೋದಿ ಕತೆ ಅಷ್ಟೇ ಎಂದ ರಾಹುಲ್!'
* ಇದನ್ನು 2008ರಲ್ಲಿ ಪ್ರಕರವಾದ ರಕ್ಷಣಾ ಇಲಾಖೆಯ ಪುಸ್ತಕವೊಂದರಲ್ಲಿ ಪಡೆದುಕೊಂಡಿದ್ದಾಗಿ ಭೂಷಣ್ ಹೇಳಿದರು.
* ದರ ರಾಜಿಯು ರಾಷ್ಟ್ರೀಯ ಭದ್ರತೆಯ ವಿಚಾರ ಹೇಗೆ ಆಗುತ್ತದೆ? ಈ ಬಗ್ಗೆ ಹಿಂದೆ ಸಂಸತ್ನಲ್ಲಿ ಎರಡು ಬಾರಿ ಬಹಿರಂಗಪಡಿಸಲಾಗಿತ್ತು.
* ಒಂದು ವೇಳೆ ಅದು ರಾಷ್ಟ್ರೀಯ ಭದ್ರತೆಯ ವಿಚಾರವಾದರೆ ಸಂಸತ್ನಲ್ಲಿ ಬೆಲೆ ಮಾಹಿತಿ ನೀಡುವ ಮೂಲಕ ಸರ್ಕಾರ ಎರಡು ಬಾರಿ ರಾಷ್ಟ್ರೀಯ ಭದ್ರತೆಯೊಂದಿಗೆ ರಾಜಿಯಾಗಿದೆ ಎಂದರು.
* ಬೆಲೆ ವಿಚಾರಕ್ಕ ಸಂಬಂಧಿಸಿದಂತೆ ಸರ್ಕಾರವು ಹಿಂದಿನ ದರಕ್ಕಿಂತಲೂ ಇದು ಹೆಚ್ಚು ಉತ್ತಮವಾಗಿದೆ ಎಂದಿತ್ತು. ಇದು ಹೇಗೆ? ಎಂದು ಪ್ರಶ್ನಿಸಿದರು.
ರಫೇಲ್ ಒಪ್ಪಂದ: ಬೆಲೆ ಮತ್ತು ತಾಂತ್ರಿಕ ವಿವರ ನೀಡಲು ಸುಪ್ರೀಂಕೋರ್ಟ್ ಸೂಚನೆ
* ಯಾವುದೇ ಪ್ರಕರಣದಲ್ಲಿ ಇದು ಆರ್ ಟಿಐ ವ್ಯಾಪ್ತಿಗೆ ಒಳಪಡುತ್ತದೆ. ಗೋಪ್ಯತೆ ಮತ್ತಿತರ ಕಾರಣಗಳಿಗಾಗಿ ದರವನ್ನು ಬಹಿರಂಗಪಡಿಸಲಾಗುವುದಿಲ್ಲ ಎನ್ನುವುದು ಸರ್ಕಾರದ ಪೊಳ್ಳು ವಾದವಾಗಿದೆ.
* ಈ ಒಪ್ಪಂದವನ್ನು ಡಸಾಲ್ಟ್ ಕಂಪೆನಿಗೆ ಅಧಿಕ ದರಕ್ಕೆ ಮತ್ತು ಅದರ ಆಫ್ಸೆಟ್ ಪಾಲುದಾರಿಕೆಯನ್ನು ರಿಲಯನ್ಸ್ಗೆ ನೀಡಿದ್ದರ ವಿರುದ್ಧ ಹಿರಿಯ ಅಧಿಕಾರಿಗಳು ತಮ್ಮ ಆಡಳಿತ ವರ್ಗವನ್ನು ಬೈದಾಡುತ್ತಿದ್ದಾರೆ.
* ಹೀಗಾಗಿ ಇದು ಭ್ರಷ್ಟಾಚಾರ ತಡೆ ಕಾಯ್ದೆಯ ಅಡಿಯಲ್ಲಿ ಕಮಿಷನ್ ಪಡೆಯುವ ಅಪರಾಧ ಪ್ರಕರಣವಾಗುವ ಗುಣ ಹೊಂದಿದೆ.
* ವಿಮಾನದ ದರದ ವಿಚಾರದಲ್ಲಿ ಗೋಪ್ಯತೆ ಇಲ್ಲ. ಆದರೆ, ಅದು ಇರುವುದು ವಿಮಾನದಲ್ಲಿನ ಶಸ್ತ್ರಾಸ್ತ್ರ ಹಾಗೂ ಇತರೆ ಸೌಲಭ್ಯಗಳ ಅಳವಡಿಕೆಯ ಮಾಹಿತಿ ಬಗ್ಗೆ. ಈ ವಿವರಗಳನ್ನು ಕೋರ್ಟ್ಗೆ ನೀಡಲಾಗಿದೆ. ಆದರೆ, ಅದನ್ನು ನ್ಯಾಯಾಂಗ ಪರಾಮರ್ಶೆಗೆ ಒಳಪಡಿಸುವಂತೆ ಇಲ್ಲ ಎಂದು ವೇಣುಗೋಪಾಲ್ ವಾದಿಸಿದರು.
* ದರದ ವಿವರಗಳನ್ನು ಸುಪ್ರೀಂಕೋರ್ಟ್ಗೆ ಮುಚ್ಚಿದ ಲಕೋಟೆಯಲ್ಲಿ ನೀಡಲಾಗಿದೆ. ಆದರೆ, ಬಹಿರಂಗಪಡಿಸಲು ಸಾಧ್ಯವಾಗದಂತಹ ಕೆಲವು ಅಂತರ್ ಸರ್ಕಾರಿ ಒಪ್ಪಂದದ ಮಾಹಿತಿಗಳಿವೆ ಎಂದು ಹೇಳಿದರು.