ಅತ್ಯಾಚಾರಿ ಪರ ಲಾಯರ್ ಹುಚ್ಚುಚ್ಚು ಹೇಳಿಕೆಗಳು!
ನವದೆಹಲಿ, ಸೆ. 14 : ಯುವತಿಯ ಮೇಲೆ ಪೈಶಾಚಿಕ ಕೃತ್ಯವೆಸಗಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ನಾಲ್ವರು ದೆಹಲಿ ಅತ್ಯಾಚಾರಿಗಳು ಅಷ್ಟೊಂದು ವಿಚಲಿತರಾಗಿದ್ದಾರೋ ಇಲ್ಲವೋ, ಅವರನ್ನು ಪ್ರತಿನಿಧಿಸಿದ್ದ ವಕೀಲ ಎಪಿ ಸಿಂಗ್ ಮಾತ್ರ ಆಕಾಶ ಕಳಚಿಬಿದ್ದವರ ಹಾಗೆ ಆಡುತ್ತಿದ್ದಾರೆ. ಮನಸ್ಸಿನ ಸ್ಥಿಮಿತ ಕಳೆದುಕೊಂಡವರಂತೆ ಹುಚ್ಚುಚ್ಚು ಹೇಳಿಕೆಗಳನ್ನು ನೀಡುತ್ತ ಎಲ್ಲ ಆಕ್ರೋಶಕ್ಕೆ ಗುರಿಯಾಗುತ್ತಿದ್ದಾರೆ.
ಅವರ ಮಾತಿನ ಕೆಲ ನಮೂನೆ ಹೀಗಿವೆ ನೋಡಿ, "ಸೆಷನ್ಸ್ ಕೋರ್ಟ್ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ಇರುವ 2-3 ತಿಂಗಳ ಅವಧಿಯಲ್ಲಿ ಭಾರತದಲ್ಲಿ ಯಾವುದೇ ಅತ್ಯಾಚಾರ ನಡೆಯದಿದ್ದರೆ, ಹೈಕೋರ್ಟಿಗೆ ಮೇಲ್ಮನವಿ ಸಲ್ಲಿಸುವುದಿಲ್ಲ. ಆದರೆ, ಒಂದು ವೇಳೆ ಎಲ್ಲಿಯಾದರೂ ಅತ್ಯಾಚಾರಗಳಾದರೆ ಮೇಲ್ಮನವಿ ಸಲ್ಲಿಸದೆ ಬಿಡುವುದಿಲ್ಲ" ಎಂದು ಶನಿವಾರ ಅಸಂಬದ್ಧ ಹೇಳಿಕೆ ನೀಡಿದ್ದಾರೆ.
"ಪಾಲಕರು ಮೊದಲು ತಮ್ಮ ಮಕ್ಕಳನ್ನೇಕೆ ಹದ್ದುಬಸ್ತಿನಲ್ಲಿ ಇಡುವುದಿಲ್ಲ? ನನ್ನ ಮಗಳೇನಾದರೂ ಯಾವುದೇ ಪುರುಷನೊಂದಿಗೆ ಮದುವೆಗೆ ಮೊದಲೇ ಲೈಂಗಿಕ ಕ್ರಿಯೆಯಲ್ಲಿ ತೊಡಗಿದರೆ ಅಥವಾ ರಾತ್ರಿ ಹೊತ್ತಿನಲ್ಲಿ ಬಾಯ್ ಫ್ರೆಂಡ್ ಜೊತೆ ಸುತ್ತಾಡುವುದು ತಿಳಿದರೆ ಆಕೆಯನ್ನು ಸುಟ್ಟು ಬಿಸಾಡುತ್ತೇನೆ" ಎಂದು ಶುಕ್ರವಾರ ಹೇಳಿಕೆ ನೀಡಿ ಮಾಧ್ಯಮದ ಮುಂದೆ ಕಣ್ಣೀರುಗರೆದ ನಾಟಕವಾಡಿದ್ದರು.
ಇದು ಇಲ್ಲಿಗೇ ನಿಲ್ಲುವುದಿಲ್ಲ. ಸರಕಾರ ಮತ್ತು ನ್ಯಾಯಾಲಯದ ವಿರುದ್ಧವೂ ಅವರು ಹರಿಹಾಯ್ದಿದ್ದಾರೆ. "ಡಿಸೆಂಬರ್ 16ರ ಸಾಮೂಹಿಕ ಅತ್ಯಾಚಾರ ಪ್ರಕರಣವನ್ನು ಕೇಂದ್ರ ಸರಕಾರವೇ ತನಗೆ ತಿಳಿದಂತೆ ತಿರುಚಿರುವುದು ದುರಾದೃಷ್ಟಕರ. ನ್ಯಾಯಾಧೀಶರು ಕೂಡ ರಾಜಕೀಯ ಒತ್ತಡಕ್ಕೆ ಮಣಿದು, ಸಾಕ್ಷಿಯನ್ನು ಸರಿಯಾಗಿ ಪರಿಗಣಿಸದೆ ಎಲ್ಲ ನಾಲ್ವರಿಗೂ ಮರಣದಂಡನೆ ಶಿಕ್ಷೆ ವಿಧಿಸಿದ್ದಾರೆ" ಎಂದು ಮಾಧ್ಯಮದ ಮುಂದೆ ಕಿರುಚಿದ್ದಾರೆ.

ಬಾರ್ ಕೌನ್ಸಿಲ್ ನಿಂದ ಸಿಂಗ್ ಹೇಳಿಕೆಗೆ ವಿರೋಧ
ದೇಶದಲ್ಲಿ ಅತ್ಯಾಚಾರ ನಡೆಯದಿದ್ದರೆ ಮೇಲ್ಮನವಿ ಸಲ್ಲಿಸುವುದಿಲ್ಲ ಎಂದು ಎಪಿ ಸಿಂಗ್ ನೀಡಿರುವ ಹೇಳಿಕೆಗೆ ದೆಹಲಿ ಬಾರ್ ಅಸೋಸಿಯೇಶನ್ ನಿಂದ ಪ್ರತಿರೋಧ ವ್ಯಕ್ತವಾಗಿದೆ. ಇನ್ನು ಟ್ವಿಟ್ಟರಿನಲ್ಲಿ ಎಪಿ ಸಿಂಗ್ ಬಾಯಿಗೆ ಬಂದಂತೆ ನೀಡುತ್ತಿರುವ ಹೇಳಿಕೆಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ. ಅವರಿಗೆ ಮಾತಿನಲ್ಲೇ ಮಂಗಳಾರತಿ ಮಾಡುತ್ತಿದ್ದಾರೆ. ಮುಂದೆ ಓದಿರಿ.
|
ಎಂಥಾ ನಾಚಿಕೆಗೇಡಿನ ಹೇಳಿಕೆ
'ದಾಮಿನಿ' ಮೇಲೆ ಅತ್ಯಾಚಾರವೆಸಗಿದ ದುರುಳರ ವಕೀಲನಿಂದ ಎಂಥಾ ನಾಚಿಕೆಗೇಡಿನ ಹೇಳಿಕೆ!
|
ಮೊದಲು ಲಾಯರನ್ನು ನೇಣಿಗೆ ಹಾಕಬೇಕು
"ಸಾಮೂಹಿಕ ಅತ್ಯಾಚಾರ ಎಸಗಿ ಮರಣದಂಡನೆ ಶಿಕ್ಷೆಗೊಳಗಾದವರ ಜೊತೆ ವಕೀಲವನ್ನೂ ನೇಣಿಗೇರಿಸಬೇಕು."
|
ಹರಿಹಾಯ್ದ ಹರಿಪ್ರಸಾದ್
ಅತ್ಯಾಚಾರಿಗಳ ಪರ ವಕೀಲ ಎಪಿ ಸಿಂಗ್ ವಿರುದ್ಧ ಹರಿಹಾಯ್ದ ಹರಿಪ್ರಸಾದ್.
|
ಸಿಂಗ್ ಚುನಾವಣೆಗೆ ನಿಲ್ತಿದ್ದಾನಾ?
ಎಪಿ ಸಿಂಗ್ ವಿರುದ್ಧ ಶಿವಕುಮಾರ್ ಕಿಡಿನುಡಿ.
|
ಈ ಯಪ್ಪನಿಗೆ ಮಗಳೇ ಇಲ್ಲದಿದ್ದರೆ ಚೆನ್ನಾಗಿತ್ತು
ಪಾಪ, ಈ ವಯ್ಯನ ಮಾತು ಕೇಳಿ ಮಗಳು ಯಾವ ರೀತಿ ಪರಿತಪಿಸಿರುತ್ತಾಳೋ?
|
ದೆಹಲಿ ಬಾರ್ ಕೌನ್ಸಿಲ್ ಗರಂ
ಎಪಿ ಸಿಂಗ್ ನೀಡಿದ ಹೇಳಿಕೆಗೆ ಪ್ರತಿಯಾಗಿ ದೆಹಲಿ ಬಾರ್ ಕೌನ್ಸಿಲ್ ಆತನಿಗೆ ನೋಟೀಸ್ ನೀಡುವ ಸಾಧ್ಯತೆಯಿದೆ.
|
ತಾಲಿಬಾನ್ ವಕ್ತಾರನಾಗಿ ಎಪಿ ಸಿಂಗ್!
ಯಪ್ಪೋ ಎಂಥಾ ಸ್ಟೇಟ್ಮೆಂಟು!
|
ಸಿಂಗ್ ಮಗಳು ಸಂತೋಷವಾಗಿರಲಿ
ಯಾವುದಾದರೂ ಉತ್ತಮ ವರನನ್ನು ನೋಡಿ ಎಪಿ ಸಿಂಗ್ ಮಗಳು ಮದುವೆಯಾಗಿ ಸುಖವಾಗಿರಲೆಂದು ಹಾರೈಕೆ.
|
ನಿನ್ನಂಥವ್ರು ಇರೋದ್ರಿಂದ್ಲೇ
ಇಂಥವ್ರು ಇರೋದ್ರಿಂದ್ಲೇ ಮಹಿಳೆಯರ ಪಾಲಿಗೆ ಭಾರತ ಸೇಫ್ ಆಗಿಲ್ಲ. ಟ್ರೂ!
-
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Shivam Dube: ಶಿವಂ ದುಬೆ ಸಾಧನೆಗೆ ಮನಸಾರೆ ಮೆಚ್ಚುಗೆ ಸೂಚಿಸಿದ ಪತ್ನಿ ಅಂಜುಮ್ ಖಾನ್: ಇನ್ಸ್ಟಾ ಪೋಸ್ಟರ್ ಭಾರೀ ವೈರಲ್ -
Fact Check: ಟಿ20 ವಿಶ್ವಕಪ್ ಫೈನಲ್ ಪಂದ್ಯಕ್ಕೂ ಮುನ್ನ ರಾಷ್ಟ್ರಗೀತೆ ವೇಳೆ ಕಣ್ಣೀರಿಟ್ಟ ಕಿವೀಸ್ ಆಟಗಾರ ಇಶ್ ಸೋಧಿ -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ












Click it and Unblock the Notifications