ಎವರೆಸ್ಟ್ ಮೇಲೆ ರಾಷ್ಟ್ರಗೀತೆ ಹಾಡಿದ ಐಎಎಫ್ ಅಧಿಕಾರಿ
ನವದೆಹಲಿ ಮೇ 31: ಅಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಭಾರತೀಯ ವಾಯು ಪಡೆಯ ವಿಂಗ್ ಕಮಾಂಡರ್ ವಿಕ್ರಾಂತ್ ಉನಿಯಾಲ್ ಅವರು ವಿಶ್ವದ ಅತ್ಯಂತ ಎತ್ತರದ ಶಿಖರ ಮೌಂಟ್ ಎವರೆಸ್ಟ್ ಏರಿ, ರಾಷ್ಟ್ರ ಧ್ವಜ ಹಾರಿಸಿ, ರಾಷ್ಟ್ರಗೀತೆ ಹಾಡುವ ಮೂಲಕ ದೇಶಭಕ್ತಿ ಮೆರೆದಿದ್ದಾರೆ.
"ಪ್ರಯಾಗ್ ರಾಜ್ನ ಸೆಂಟ್ರಲ್ ಏರ್ ಕಮಾಂಡ್ನಲ್ಲಿ ನಿಯೋಜನೆಗೊಂಡಿರುವ ಭಾರತೀಯ ವಾಯು ಪಡೆಯ ವಿಂಗ್ ಕಮಾಂಡರ್ ವಿಕ್ರಾಂತ್ ಉನಿಯಾಲ್ ಅವರು ಮೇ 21ರಂದು ಮೌಂಟ್ ಎವರೆಸ್ಟ್ನ ತುತ್ತ ತುದಿಗೆ ಏರಿ ಭಾರತದ ರಾಷ್ಟ್ರ ಧ್ವಜವನ್ನು ಹಾರಿಸಿದ್ದಾರೆ ಹಾಗೂ ರಾಷ್ಟ್ರಗೀತೆ ಹಾಡಿದ್ದಾರೆ,'' ಎಂದು ಪ್ರಯಾಗರಾಜ್ನ ಸೆಂಟ್ರಲ್ ಏರ್ ಕಮಾಂಡ್ನ ಸಾರ್ವಜನಿಕ ಸಂಪರ್ಕ ಅಧಿಕಾರಿ ಮಾಹಿತಿ ನೀಡಿದ್ದಾರೆ.
ಸ್ವಾತಂತ್ರ್ಯ ವೀರರಿಗೆ ಸಮರ್ಪಣೆ:
ವಿಕ್ರಾಂತ್ ಉನಿಯಾಲ್ ಅವರು ತಮ್ಮ ಈ ಸಾಧನೆಯನ್ನು ಭಾರತದ ಸ್ವಾತಂತ್ರ್ಯಕ್ಕೆ ಕೊಡುಗೆ ನೀಡಿದ ಸಾವಿರಾರು ವೀರರು ಹಾಗೂ ಚಳವಳಿಗೆ ಅರ್ಪಿಸಿದ್ದಾರೆ ಎಂದು ಭಾರತೀಯ ವಾಯು ಪಡೆಯ ಅಧಿಕಾರಿಗಳು ತಿಳಿಸಿದ್ದಾರೆ.

"ಮೌಂಟ್ ಎವರೆಸ್ಟ್ ಚಾರಣವೇ ಅತ್ಯಂತ ರೋಚಕ ಮತ್ತು ಐತಿಹಾಸಿಕ ಕ್ಷಣಗಳಾಗಿವೆ. ವಿಂಗ್ ಕಮಾಂಡರ್ ವಿಕ್ರಾಂತ್ ಉನಿಯಾಲ್ ಅವರು ಮೌಂಟ್ ಎವರೆಸ್ಟ್ ಮೇಲೆ ನಿಂತು ದೇಶಕ್ಕಾಗಿ ತ್ಯಾಗ ಮಾಡಿದ ವೀರರಿಗಾಗಿ ಗೌರವ ಸಲ್ಲಿಸಿದ್ದಾರೆ ಹಾಗೂ ರಾಷ್ಟ್ರಗೀತೆ ಹಾಡಿದ್ದಾರೆ,'' ಎಂದು ಪ್ರಯಾಗ್ ರಾಜ್ ನ ಸಾರ್ವಜನಿಕ ಸಂಪರ್ಕ ಅಧಿಕಾರಿ(ರಕ್ಷಣೆ) ಗ್ರೂಪ್ ಕ್ಯಾಪ್ಟನ್ ಸಮೀರ್ ಗಾಂಗ್ಖೇಡ್ಕರ್ ತಿಳಿಸಿದ್ದಾರೆ.

ಏಪ್ರಿಲ್ 15 ರಂದು ಚಾರಣ ಆರಂಭ:
"ವಿದೇಶದ ಹಲವು ಚಾರಣಿಗರು ಒಳಗೊಂಡ ತಂಡದ ಸದಸ್ಯರೊಂದಿಗೆ ಏಪ್ರಿಲ್ 15 ರಂದು ನೇಪಾಳ ರಾಜಧಾನಿ ಕಠ್ಮಂಡು ನಿಂದ ವಿಶ್ವದ ಅತಿ ಎತ್ತರದ ಮೌಂಟ್ ಎವರೆಸ್ಟ್ ಚಾರಣ ಪ್ರಾರಂಭವಾಯಿತು. ಉತ್ತರಕಾಶಿಯ ನೆಹರು ಇನ್ಸ್ಟಿಟೂಟ್ ಆಫ್ ಮೌಂಟೇನಿಯರಿಂಗ್, ಸಿಯಾಚಿನ್ ನ ಆರ್ಮಿ ಮೌಂಟೇನಿಯರಿಂಗ್ ಇನ್ಸ್ಟಿಟೂಟ್ ಮತ್ತು ಅರುಣಾಚಲ ಪ್ರದೇಶದ ನ್ಯಾಷನಲ್ ಇನ್ಸ್ಟಿಟೂಟ್ ಆಫ್ ಮೌಂಟೇನಿಯರಿಂಗ್ ಹಾಗೂ ಅಲೈಡ್ ಸ್ಫೋಟ್ಸ್ ನಿಂದ ತರಬೇತಿ ಪಡೆದ ವಿಂಗ್ ಕಮಾಂಡರ್ ವಿಕ್ರಾಂತ್ ಉನಿಯಾಲ್ ಅವರು ತರಬೇತಿ ಹೊಂದಿದ ಪರ್ವತಾರೋಹಿ ಆಗಿದ್ದಾರೆ,'' ಎಂದು ಗ್ರೂಪ್ ಕ್ಯಾಪ್ಟನ್ ಸಮೀರ್ ಗಾಂಗ್ಖೇಡ್ಕರ್ ಮಾಹಿತಿ ನೀಡಿದ್ದಾರೆ.
(ಒನ್ಇಂಡಿಯಾ ಸುದ್ದಿ)
-
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ -
Bengaluru property: ಬೆಂಗಳೂರು ಆಸ್ತಿ ತೆರಿಗೆ ಬಾಕಿದಾರರಿಗೆ ಇದೀಗ ಬಿಗ್ ಶಾಕ್: ಪಾಲಿಕೆಗಳೇ ಆಸ್ತಿ ಖರೀದಿ












Click it and Unblock the Notifications