ಯದುವೀರರಿಗೆ ಪಟ್ಟಾಭಿಷೇಕ ಹೀಗೆ ನಡೆಯುತ್ತದೆ
ಮೇ 27ರಂದು ಮುಂಜಾವಿನಿಂದಲೇ ಯದುವೀರ ಒಡೆಯರ್ ಅವರ ಪಟ್ಟಾಭಿಷೇಕ ಸಮಾರಂಭದ ಸಾಂಪ್ರದಾಯಿಕ ಆಚರಣೆಗಳು, ವಿಘ್ನೇಶ್ವರನ ಪೂಜೆ ಹಾಗೂ ಸ್ತಂಭ ಮುಹೂರ್ತದೊಂದಿಗೆ ಆರಂಭಗೊಳ್ಳಲಿದೆ. ನಂತರ ಗಂಗೆ ಪೂಜೆ ನೆರವೇರಿಸಿ ರಾಜವಂಶಸ್ಥ ಮಹಿಳೆಯರು ಪೂರ್ಣಕುಂಭದಲ್ಲಿ ಪಟ್ಟಾಭಿಷೇಕ ನಡೆಯಲಿರುವ ಕಲ್ಯಾಣ ಮಂಟಪಕ್ಕೆ ದೇವರನ್ನು ತರಲಿದ್ದಾರೆ.
ಹೀಗೆ ತಂದ ಪೂರ್ಣಕುಂಭಗಳನ್ನು ಯದುವಂಶದ ಮನೆ ದೇವರ ಸ್ಥಳದಲ್ಲಿರಿಸಿ, ಯದುವೀರ ಒಡೆಯರ್ ಅವರಿಗೆ ಅರಿಶಿನ ಹಚ್ಚಿ, ಅಭ್ಯಂಜನ ಸ್ನಾನ ಮಾಡಿಸಿದ ನಂತರ ಕಂಕಣ ಧಾರಣೆ ನಡೆಯುತ್ತದೆ. ಕಂಕಣಧಾರಿಯಾದ ಯದುವೀರ ಒಡೆಯರ್ ಅವರು ಅರಮನೆಯ ರಾಜಗುರುಗಳಾದ ಬ್ರಹ್ಮತಂತ್ರ ಪರಕಾಲ ಮಠದ ಸ್ವಾಮೀಜಿಗಳವರ ಗುರುಪಾದ ಪೂಜೆ ನೆರವೇರಿಸಲಿದ್ದು, ರಾಜ ಪರಂಪರೆಯಂತೆ ಬೆಳಗಿನಿಂದ ರಾತ್ರಿಯವರೆಗೆ ಹೋಮ ಹವನಾದಿಗಳು, ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.
ಮೇ 28ರಂದು ಪಟ್ಟಾಭಿಷೇಕ ನಡೆಯುವ ದಿನ ಸೂರ್ಯಾಸ್ತಕ್ಕೂ ಮುನ್ನವೇ ರಾಜವಂಶಸ್ಥರು ಯದುವೀರರೊಂದಿಗೆ ಅವರ ಖಾಸಗಿ ನಿವಾಸದಲ್ಲಿರುವ ವಿಘ್ನೇಶ್ವರನಿಗೆ ಪ್ರಥಮ ಪೂಜೆ ನಡೆಸಿ, ನಂತರ ಅರಮನೆ ಆವರಣದಲ್ಲಿರುವ ದೇವಸ್ಥಾನಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಲಿದ್ದಾರೆ. ಯದುವಂಶದ ಸಂಪ್ರದಾಯದಂತೆ ಶ್ರೀ ಲಕ್ಷ್ಮೀನಾರಾಯಣ, ಶ್ರೀ ಉಮಾಮಹೇಶ್ವರ, ಶ್ರೀ ವಾಣಿಬ್ರಹ್ಮ ಹಾಗೂ ಶ್ರೀ ರಾಮತಾರಕ ಹೋಮಗಳನ್ನು ನಡೆಸಲಾಗುತ್ತದೆ. [ಮೈಸೂರಿನಲ್ಲಿ ಮರುಕಳಿಸಲಿದೆ ಗತಕಾಲದ ರಾಜವೈಭವ]

ಇದೇ ಸಂದರ್ಭ ದೇವತಾ ಮೂರ್ತಿಗಳಿಗೂ ಅಭಿಷೇಕ ಪೂಜೆಗಳು ನಡೆಯಲಿದ್ದು, ಬೆಳಗ್ಗೆ 9.30ರಿಂದ 10.30ರ ಒಳಗೆ ಸಲ್ಲುವ ಶುಭ ಕರ್ಕಾಟಕ ಲಗ್ನದಲ್ಲಿ ರಾಜಗುರುಗಳು ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರನ್ನು ಬೆಳ್ಳಿಯ ಪೀಠದಲ್ಲಿ ಆಸೀನರನ್ನಾಗಿಸಿ, ರಾಜಪರಂಪರೆಯ ಮೈಸೂರು ಪೇಟ ಧರಿಸಿ ಪಟ್ಟಾಧಿಕಾರದ ಮಾಹಿತಿ ಹಾಗೂ ಮಂತ್ರಾಕ್ಷರಗಳನ್ನೊಳಗೊಂಡ ಸ್ವರ್ಣದ ತಗಡಿನ ಬಾಸಿಂಗ ಕಟ್ಟುವ ಮೂಲಕ ಪಟ್ಟಾಧಿಕಾರ ನೆರವೇರಿಸುತ್ತಾರೆ. [ಯದುವಂಶದ ಮಹಾರಾಜರ ಭವ್ಯ ಇತಿಹಾಸ]
ಯದುವಂಶದ ರಾಜಗುರುಗಳಿಂದ ಪಟ್ಟಾಧಿಕಾರ ಸ್ವೀಕರಿಸಿದ ನಂತರ ಮೈಸೂರು ಸಂಸ್ಥಾನದ ಅಧಿಕೃತ ಸಿಂಹಾಸನಾಧಿಪತಿಯಾದ ಯದುವೀರರು ಗುರು ಹಿರಿಯರು, ಮಾತಾಪಿತರು, ಬಂಧು-ಬಾಂಧವರ ಆಶೀರ್ವಾದ ಪಡೆದು ಯದು ಪರಂಪರೆಯಂತೆ ನಾಡಿನ ಹಾಗೂ ರಾಜಮನೆತನದ ಅದಿ ದೇವತೆ ಶ್ರೀ ಚಾಮುಂಡೇಶ್ವರಿ ಸೇರಿದಂತೆ ನಗರದಲ್ಲಿರುವ ಸುಮಾರು 16 ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸಲಿದ್ದಾರೆ.
ಧಾರ್ಮಿಕ ಕಾರ್ಯಕ್ರಮಗಳು ಮುಗಿದ ನಂತರ ರಾತ್ರಿ 7 ಗಂಟೆಯಿಂದ ಸಾರ್ವಜನಿಕರ ವೀಕ್ಷಣೆಗಾಗಿ ಸಾಂಕೇತಿಕವಾಗಿ ಆರತಕ್ಷತೆ ಕಾರ್ಯಕ್ರಮ ಜರುಗಲಿದ್ದು, ವಿಶೇಷ ದೀಪಾಲಂಕಾರದ ವ್ಯವಸ್ಥೆ ಮಾಡಲಾಗುತ್ತದೆ. ಪಟ್ಟಾಭಿಷೇಕದ ಸಂದರ್ಭ ಗಜರಾಜನಿಗೆ ತೀರ್ಥ ಪ್ರೋಕ್ಷಣೆ ಮಾಡಿ, ಪೂಜೆ ಸಲ್ಲಿಸುವ ಸಂಪ್ರದಾಯವಿರುವುದರಿಂದ ಪಟ್ಟದ ಆನೆಯ ಅವಶ್ಯಕತೆಯಿದ್ದು, ಪಟ್ಟಾಭಿಷೇಕಕ್ಕೆ ಗಂಡಾನೆ ಕೋರಿ ಅರಣ್ಯ ಇಲಾಖೆಗೆ ರಾಣಿ ಪ್ರಮೋದಾದೇವಿ ಅವರು ಮನವಿ ಸಲ್ಲಿಸಿದ್ದಾರೆ. [ಬೆಟ್ಟದ ಕೋಟೆ ಮನೆತನ ರಾಜ ಯದುವೀರ್ ಪರಿಚಯ]
-
Ram Gopal Varma: ದಾವೂದ್ ಇಬ್ರಾಹಿಂ ಇಲ್ಲದಿದ್ದರೆ ನಾನು ಬದುಕು ಕಟ್ಟಿಕೊಳ್ಳುತ್ತಿರಲಿಲ್ಲ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ -
Dhurandhar 2 Pakistan: ಅರಬ್ ರಾಷ್ಟ್ರದ ಸಾಲ ತೀರಿಸಲು ದುರಂಧರ್ 2 ಬಿಡುಗಡೆಗೆ ಮುಂದಾಯ್ತಾ ಪಾಕಿಸ್ತಾನ, ಟ್ವಿಸ್ಟ್ -
Karnataka Train: ಕಲಬುರಗಿ - ಕಲ್ಯಾಣ ಕರ್ನಾಟಕದಲ್ಲಿ ರೈಲು ಪ್ರಯಾಣಿಕರ ನಿತ್ಯ ಪರದಾಟ: ಸಿದ್ದು ಮಠಪತಿ ಬರಹ -
Lata Mangeshkar & Asha Bhosle: ಆ ಒಂದು ಕಾರಣಕ್ಕೆ ತಂಗಿ ಆಶಾ ಬೋಸ್ಲೆ ಜೊತೆ ಮಾತು ಬಿಟ್ಟಿದ್ದ ಲತಾ ಮಂಗೇಶ್ಕರ್ -
ಸೌದಿ ಅರೇಬಿಯಾದಲ್ಲಿ ಪಾಕಿಸ್ತಾನಿ ಸೇನಾಪಡೆ ನಿಯೋಜನೆ: ಮಿತ್ರ ರಾಷ್ಟ್ರಕ್ಕೆ 13,000 ಸೈನಿಕರು, ಯುದ್ಧ ವಿಮಾನಗಳ ರವಾನೆ -
Asha Bhosle Kannada Songs: ಆಶಾ ಭೋಸ್ಲೆ ಹಾಡಿದ ಕನ್ನಡದ ಹಾಡುಗಳು: ಕರ್ನಾಟಕದ ಜನರ ಮನ ಗೆದ್ದ ಖ್ಯಾತ ಗಾಯಕಿ -
Weekly Horoscope: ನಾಲ್ಕು ರಾಶಿಯವರಿಗೆ ಅದೃಷ್ಟ ಹೊತ್ತು ತರುವ ವಾರ ಇದು: ಹೇಗಿದೆ ನೋಡಿ ನಿಮ್ಮ ವಾರ ಭವಿಷ್ಯ -
Bhagyalakshmi Serial: ಕೊನೆಗೂ ಭಾಗ್ಯಲಕ್ಷ್ಮೀ - ಆದಿ ಮದುವೆ, ಮೂರು ಕುಟುಂಬಗಳನ್ನು ಒಂದು ಮಾಡುವ ಟಾಸ್ಕ್ -
Karntaka Weather: ಹವಾಮಾನ ವೈಪರೀತ್ಯ! ರಾಜ್ಯದ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ -
Banana Price: ತಮಿಳುನಾಡು ಬಿಸಿಗಾಳಿ ಎಫೆಕ್ಟ್ಗೆ ಕುಸಿದ ಬಾಳೆಹಣ್ಣು ಧಾರಣೆ: ಬೆಂಗಳೂರಿನಲ್ಲಿ ಕೆ.ಜಿಗೆ 7 ರೂಪಾಯಿ -
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ












Click it and Unblock the Notifications