ಸರ್ಪ್ರೈಸ್ ಕೊಡುತ್ತೇನೆಂದು ಯುವತಿ ತನ್ನ ಭಾವಿ ಗಂಡನಿಗೆ ಮಾಡಿದ್ದೇನು?
ಮೈಸೂರು, ಮಾರ್ಚ್ 05: ಯುವತಿಯೊಬ್ಬಳು ತನ್ನ ಭಾವಿ ಗಂಡನನ್ನು ಚಾಕುವಿನಿಂದ ಇರಿದಿರುವ ಘಟನೆ ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ಸುರಗಳ್ಳಿ ಗ್ರಾಮದಲ್ಲಿ ನಡೆದಿದೆ.
ಸುರಗಳ್ಳಿ ಗ್ರಾಮದ ಯುವಕ ರವಿಕುಮಾರ್ ಹಾಗೂ ಅರುಣಿ ಎಂಬ ಯುವತಿಗೂ ನಾಲ್ಕು ತಿಂಗಳ ಹಿಂದೆ ವಿವಾಹ ನಿಶ್ಚಯವಾಗಿತ್ತು. ಈ ವಿವಾಹಕ್ಕೆ ಎರಡೂ ಕುಟುಂಬಗಳ ಜತೆಗೆ ವಧು ವರರಿಗೂ ಸಂಪೂರ್ಣ ಒಪ್ಪಿಗೆ ಇತ್ತು.
ಮೈಸೂರಿನಲ್ಲಿ ಮಾರುವೇಷದಲ್ಲಿದ್ದ ಪೊಲೀಸರು ಆಟೋದವರಿಗೆ ಹಾಕಿದ ದಂಡ ಎಷ್ಟು?
ಇಬ್ಬರೂ ಕಳೆದ ಮೂರು ತಿಂಗಳಿನಿಂದ ಮೊಬೈಲ್ ಸಂಪರ್ಕದಲ್ಲಿದ್ದರು. ಸೋಮವಾರ ಸಂಜೆ ಯುವಕ ರವಿಕುಮಾರ್ ಯುವತಿ ಮನೆಗೆ ತೆರಳಿದ್ದಾನೆ. ಆಗ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ.
ಯುವಕ ಹಾಗೂ ಯುವತಿ ಇಬ್ಬರೇ ರೂಮಿನಲ್ಲಿ ಇದ್ದಾಗ ಅರುಣಿಯು, ""ನಿನಗೆ ಸರ್ಪ್ರೈಸ್ ತೋರಿಸುತ್ತೇನೆ'' ಎಂದು ರವಿಕುಮಾರ್ ಕಣ್ಣಿಗೆ ಬಟ್ಟೆ ಕಟ್ಟಿ ಚಾಕುವಿನಿಂದ ಏಕಾಏಕಿ ಇರಿದಿದ್ದಾಳೆ.
ವಿದ್ಯಾರ್ಥಿನಿಯೊಂದಿಗೆ ಅಕ್ರಮ ಸಂಬಂಧ ಕೇಸ್ : ಶಿಕ್ಷಕ ಅಮಾನತು, ಜೈಲು
ಇದೀಗ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿರುವ ಯುವತಿ, ತನಗೆ ಓದಲು ಇಷ್ಟ ಇತ್ತು. ಆದರೆ ಮನೆಯಲ್ಲಿ ಎಷ್ಟೇ ಹೇಳಿದರೂ ಕೇಳದೆ ಮದುವೆ ನಿಶ್ಚಯ ಮಾಡಿದರು. ಇದರಿಂದ ಬೇಸತ್ತು ತಾನೇ ಚಾಕು ಇರಿದಿರುವುದಾಗಿ ಪೊಲೀಸರಿಗೆ ಹೇಳಿಕೆ ನೀಡಿದ್ದಾಳೆ. ಈ ಸಂಬಂಧ ಬೆಟ್ಟದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.