ದಸರಾ ತಾಲೀಮು ನಡೆಸಲು ಒಪ್ಪದ ಬಲರಾಮ
ಮೈಸೂರು, ಅ.10 : ವಿಶ್ವವಿಖ್ಯಾತ ಮೈಸೂರು ದಸರಾಕ್ಕೆ ದಿನಗಣನೆ ಆರಂಭವಾಗಿದೆ. ಆದರೆ, ದಸರಾ ತಾಲೀಮಿನ ವೇಳೆ ಬಲರಾಮ ಆನೆ ತನ್ನ ಅಸಹಕಾರ ತೋರಿದ್ದು, ದಸರಾ ಉತ್ಸವದಲ್ಲಿ ಪಾಲ್ಗೊಳ್ಳುವುದೇ ಎಂಬ ಅನುಮಾನ ಹುಟ್ಟುಹಾಕಿದೆ.
ಶುಕ್ರವಾರ ಬೆಳಗ್ಗೆ ಆನೆಗಳ ತಾಲೀಮು ಅರಮನೆ ಮೈದಾನದಿಂದ ಆರಂಭವಾಯಿತು. ಬನ್ನಿ ಮಂಟಪದವರೆಗೆ ಆನೆಗಳು ಸಾಗಿ ಮರಳಿ ಅರಮನೆ ತಲುಪಬೇಕಾಗಿತ್ತು. ಆದರೆ, ಆರ್ ಎಂಸಿ ಸರ್ಕಲ್ ಹತ್ತಿರ ಬರುತ್ತಿದ್ದಂತೆಯೇ ಬಲರಾಮ ಹಿಂದಿರುಗಿ ಅರಮನೆಯತ್ತ ತೆರಳಲು ಮುಂದಾಗಿದೆ.

ಇದರಿಂದಾಗಿ ಬಲರಾಮನನ್ನು ಹಿಂಬಾಲಿಸತ್ತಿದ್ದ ಇತರ ಆನೆಗಳೂ ಗೊಂದಲಕ್ಕೊಕ್ಕೆ ಒಳಗಾಗಿ ಹಿಂದಿರುಗಿ ನಿಂತಿವೆ. ಇದರಿಂದಾಗಿ ಜಂಬೂ ಸವಾರಿಯಲ್ಲಿ ಬಲರಾಮ ಭಾಗವಹಿಸುತ್ತದೆಯೇ ಎಂಬ ಅನುಮಾನ ಪ್ರಾರಂಭವಾಗಿದೆ.
ಬಲರಾಮ ಆನೆ ಆರೋಗ್ಯವಾಗಿದೆ. ಆದರೆ, ಅದರ ವರ್ತನೆಗೆ ಕಾರಣವೇನೆಂದು ತಿಳಿದು ಬಂದಿಲ್ಲ ಎಂದು ಅರಣ್ಯ ಸಂರಕ್ಷಣಾಧಿಕಾರಿ ದೇವರಾಜ್ ಹೇಳಿದ್ದಾರೆ. ಜಂಬೂ ಸವಾರಿಯಂದು ಇಂತಹ ಘಟನೆ ಮರುಕಳಿಸಬಾರದು ಎಂದು ಅವರು ಎಚ್ಚರ ವಹಿಸಿದ್ದಾರೆ.
ಆದ್ದರಿಂದ ಬಲರಾಮ ಜಂಬೂ ಸವಾರಿ ಮೆರವಣಿಗೆಯಲ್ಲಿ ಪಾಲ್ಗೊಳ್ಳುತ್ತಾನೆಯೇ ಎಂಬ ಅನುಮಾನ ಪ್ರಾರಂಭವಾಗಿದೆ. ಆಯುಧ ಪೂಜೆಯಂದು ಬಲರಾಮ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುವ ಬಗ್ಗೆ ತೀರ್ಮಾನಿಸಲಾಗುವುದು ಎಂದು ದೇವರಾಜ್ ಹೇಳಿದ್ದಾರೆ. (ಗಜಪಡೆಯ ನಾಯಕ ಜಂಬೂ ಸವಾರಿ ವೀರ ಬಲರಾಮ)
ಚಿಕ್ಕಂದಿನಿಂದಲೂ ಬಲಗಣ್ಣು ತೊಂದರೆ ಅನುಭವಿಸುತ್ತಿರುವ ಬಲರಾಮ, ಕಳದೆ ವರ್ಷದ ದಸರಾ ತಾಲೀಮಿನ ಸಂದರ್ಭದಲ್ಲೂ ನಿರಾಸಕ್ತನಾಗಿದ್ದ. ಅರಮನೆಯಿಂದ ಬನ್ನಿಮಂಟಪ ತಲುಪಲು ಎರಡೂವರೆ ಗಂಟೆ ತೆಗೆದುಕೊಳ್ಳುತ್ತಿದ್ದ ಎಂಬ ದೂರು ಇತ್ತು. ಆದರೂ, ದಸರಾ ಉತ್ಸವದಲ್ಲಿ ಪಾಲ್ಗೊಂಡಿತ್ತು. ಈ ಬಾರಿ ತಾಲೀಮಿನಲ್ಲಿ ಭಾಗವಹಿಸಿದ್ದ ಬಲರಾಮ ಶುಕ್ರವಾರ ಮಾತ್ರ ತನ್ನ ಅಸಹಕಾರ ತೋರಿಸಿದ್ದಾನೆ.
-
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger












Click it and Unblock the Notifications