ಮೈಸೂರು: ವಿಕಿಯಿಂದ ಪಾರಂಪರಿಕ ಕಟ್ಟಡ ಚಿತ್ರ ಸ್ಪರ್ಧೆ
ಮೈಸೂರು, ಸೆ.23: ವಿಕಿಪೀಡಿಯ ಸಮುದಾಯ ಬೆಂಗಳೂರಿನಲ್ಲಿ ಜನಪ್ರಿಯಗೊಂಡ ಫೋಟೋ ವಾಕ್ ಸರಣಿಯನ್ನು ಈಗ ಸಾಂಸ್ಕೃತಿಕ ನಗರ ಮೈಸೂರಿಗೂ ವಿಸ್ತರಿಸಿದೆ. Wiki Loves Monuments ಪಾರಂಪರಿಕ ಕಟ್ಟಡ ಚಿತ್ರ ಸ್ಪರ್ಧೆ ಈ ತಿಂಗಳ ಕೊನೆಯಲ್ಲಿ ನಡೆಯಲಿದೆ.
ಫೋಟೋ ವಾಕ್ ಸರಣಿ ಮೂಲಕ ಪ್ರಮುಖ ಐತಿಹಾಸಿಕ, ಪಾರಂಪರಿಕ ಕಟ್ಟಡಗಳ ಚಿತ್ರಗಳನ್ನು ಸಾರ್ವಜನಿಕರಿಗೆ ಮುಕ್ತವಾಗಿ ಸಿಗುವಂತೆ ಮಾಡುವುದು ವಿಕಿ ಕಾಮನ್ಸ್ ಫೋಟೋ ವಾಕ್ ನ ಉದ್ದೇಶವಾಗಿದೆ.
ಈ ಬಾರಿ ಮೈಸೂರಿಗೆ ಸಮೀಪವಿರುವ ಶ್ರೀರಂಗಪಟ್ಟಣದಲ್ಲಿ Wiki Loves Monuments ಹೆಸರಿನಡಿಯಲ್ಲಿ ಫೋಟೊ ವಾಕ್ ನಡೆಯಲಿದೆ. ಸುಮಾರು 10ಕ್ಕೂ ಅಧಿಕ ಪಾರಂಪರಿಕ ಕಟ್ಟಡಗಳನ್ನು ಕೆಮೆರಾದಲ್ಲಿ ಸೆರೆ ಹಿಡಿಯಲು ಯೋಜನೆ ಹಾಕಿಕೊಳ್ಳಲಾಗಿದೆ. ಸುಮಾರು 4-5 ಗಂಟೆಗಳ ಕಾಲ ನಡಿಗೆ ಇರಲಿದ್ದು ಶ್ರೀರಂಗಪಟ್ಟಣದ ರಂಗನಾಥಸ್ವಾಮಿ ದೇಗುಲದ ಬಳಿ ಸೆ.29ಕ್ಕೆ ಬೆಳಗ್ಗೆ 9.30ಕ್ಕೆ ಫೊಟೋ ವಾಕ್ ಆರಂಭಗೊಳ್ಳಲಿದೆ.

ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ : http://www.wikilovesmonuments.in/
ಸಂಪರ್ಕ: ಕಿರಣ್ ರವಿಕುಮಾರ್
ಇಮೇಲ್ : [email protected]
ದೂರವಾಣಿ: +91-98869 37627
ಏನಿದು ಫೋಟೋ ವಾಕ್ : ವಿಕಿಪೀಡಿಯದ ಮುಕ್ತ ಚಿತ್ರಕೋಶ ಸಂಗ್ರಹ ತಾಣ ವಿಕಿ ಕಾಮನ್ಸ್ ನಲ್ಲಿ ಚಿತ್ರಗಳನ್ನು ತುಂಬಿಸಿ ಮುಕ್ತವಾಗಿ ಬಳಕೆಗೆ ನೀಡುವುದು ಇದರ ಪ್ರಮುಖ ಉದ್ದೇಶವಾಗಿದೆ. ಬೇರೆ ದೇಶಗಳಲ್ಲಿ ವಿಕಿ ಕಾಮನ್ಸ್ ವಾಕ್ ನಲ್ಲಿ ಸಾವಿರಾರು ಜನ ಸೇರುವುದುಂಟು. ಇದರ ಮುಂದುವರೆದ ಭಾಗ ಅಥವಾ ಪೂರಕವಾಗಿ Wiki Loves Monuments ಆಯೋಜಿಸಲಾಗುತ್ತಿದ್ದು, ಭಾರತದ ವಿವಿಧೆಡೆ ಪಾರಂಪರಿಕ ಕಟ್ಟಡಗಳ ಚಿತ್ರಗಳನ್ನು ಸೆರೆ ಹಿಡಿದು ಸಂಗ್ರಹಿಸಲಾಗುತ್ತದೆ.ಇದರಲ್ಲಿ ಸ್ಪರ್ಧೆ ಕೂಡಾ ನಡೆಸಲಾಗುತ್ತಿದ್ದು ವಿಜೇತರ ಚಿತ್ರಗಳು ವಿಕಿ ಕಾಮನ್ಸ್ ಚಿತ್ರಕೋಶದಲ್ಲಿ ಪ್ರದರ್ಶಿತವಾಗುತ್ತದೆ.
Wiki Loves Monuments ಯೋಜನೆಗೆ ಇಂಡಿಯನ್ ನ್ಯಾಷನಲ್ ಟ್ರಸ್ಟ್ ಫಾರ್ ಆರ್ಟ್ ಕಲ್ಚರಲ್ ಹೆರಿಟೇಜ್ (INTACH) ಸಂಸ್ಥೆ ಬೆಂಬಲ ವ್ಯಕ್ತಪಡಿಸಿದೆ.
-
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
Karnataka Weather: ಕರ್ನಾಟಕದಲ್ಲಿ ಹೆಚ್ಚಿದ ಬಿಸಿಲ ಧಗೆ: ಬಳ್ಳಾರಿಯಲ್ಲಿ ಗರಿಷ್ಠ ತಾಪಮಾನ ದಾಖಲು, ಬೀದರ್ನಲ್ಲಿ ಚಳಿ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Expenses: ಬೆಂಗಳೂರು ಎಷ್ಟು ದುಬಾರಿ, ಅಮೆಜಾನ್ ಉದ್ಯೋಗಿ ಹಂಚಿಕೊಂಡ ವಾರಾಂತ್ಯದ ವೆಚ್ಚದ ವಿಡಿಯೋ ವೈರಲ್ -
Gold Rate: ಸತತ ಇಳಿಕೆಯ ನಂತರ ಚಿನ್ನದ ಬೆಲೆ ಮತ್ತೆ ಏರಿಕೆ: ಬೆಂಗಳೂರಿನಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ವಿವರ ಇಲ್ಲಿದೆ ನೋಡಿ -
Vijay Divorce: ನನ್ನ ಸಮಸ್ಯೆಗಳ ಬಗ್ಗೆ ನೀವು ತಲೆಕೆಡಿಸಿಕೊಳ್ಳಬೇಡಿ: ಡಿವೋರ್ಸ್ ಬಗ್ಗೆ ಕೊನೆಗೂ ಮೌನ ಮುರಿದ ನಟ ದಳಪತಿ ವಿಜಯ್ -
Horoscope March 8: ಈ ರಾಶಿಯವರಿಗೆ ಉದ್ಯೋಗದಲ್ಲಿ ಒಳಿತು, ಹೂಡಿಕೆಗಳಿಂದ ಲಾಭ, ದಿನ ಭವಿಷ್ಯ -
Kamal Haasan: ನಿಮ್ಮ ಕೆಲಸ ಎಷ್ಟಿದೆಯೋ ಅಷ್ಟು ನೋಡಿಕೊಳ್ಳಿ; ಭಾರತ ಸಾರ್ವಭೌಮ ರಾಷ್ಟ್ರ: ಟ್ರಂಪ್ಗೆ ಕಮಲ್ ಹಾಸನ್ ತಿರುಗೇಟು -
ಚಿಕ್ಕಬಳ್ಳಾಪುರದ ಜಿಲ್ಲೆಯ ಸತ್ಯಸಾಯಿ ಗ್ರಾಮಕ್ಕೆ ನಟ ರಿಷಬ್ ಶೆಟ್ಟಿ ಭೇಟಿ: ಮಾನವೀಯ ಕಾರ್ಯಗಳಿಗೆ ಶ್ಲಾಘನೆ -
Kiccha Sudeep: ಸುದೀಪ್ ನಂ 1 ಅಂತ ಗೂಗಲ್ನಲ್ಲಿ ಬರುತ್ತಾ, ನಟ ಆದ್ರೆ ತಲೆ ಮೇಲೆ ಕೊಂಬು ಇದ್ಯಾ: ಡಾಗ್ ಸತೀಶ್, ವೈರಲ್ ವಿಡಿಯೋ -
IMD Weather Forecast: ಭಾರತ vs ನ್ಯೂಜಿಲೆಂಡ್ ಟಿ20 ವಿಶ್ವಕಪ್ ಫೈನಲ್: ಅಹಮದಾಬಾದ್ನಲ್ಲಿ ಹವಾಮಾನ ಹೇಗಿದೆ, ಮಳೆ ಭೀತಿ ಇದೆಯೇ -
Jaggery: ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್, ಬಣ್ಣ, ಸಕ್ಕರೆ ಮಿಶ್ರಣ: ಪರಿಶೀಲನೆ ಮಾಡುವ ಸರಳ ವಿಧಾನಗಳು












Click it and Unblock the Notifications