ಕೈ 2ನೇ ಪಟ್ಟಿಯಲ್ಲಿ ಮೊಯ್ಲಿ ಮತ್ತು ಸಚಿವರಿಗೆ ಟಿಕೆಟ್
ಮೈಸೂರು, ಮಾ.12 : ಕಾಂಗ್ರೆಸ್ ಎರಡನೇ ಪಟ್ಟಿಯಲ್ಲಿ ಕೇಂದ್ರ ಸಚಿವ ವೀರಪ್ಪ ಮೊಯ್ಲಿ ಅವರ ಹೆಸರನ್ನು ಘೋಷಿಸಲಾಗುತ್ತದೆ. ಅವರು ಚಿಕ್ಕಬಳ್ಳಾಪುರದಿಂದ ಸ್ಪರ್ಧಿಸುವ ಕುರಿತು ಯಾವುದೇ ಅನುಮಾನವಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ. ರಾಜ್ಯದ ಕೆಲವು ಸಚಿವರ ಹೆಸರು ಸಹ ಎರಡನೆ ಪಟ್ಟಿಯಲ್ಲಿ ಘೋಷಣೆಯಾಗಲಿದೆ ಎಂದು ತಿಳಿಸಿದ್ದಾರೆ.
ಮಂಗಳವಾರ
ಮೈಸೂರಿನಲ್ಲಿ
ಪತ್ರಿಕಾಗೋಷ್ಠಿ
ನಡೆಸಿದ
ಪರಮೇಶ್ವರ್,
ಎಲ್ಲ
ಸಂಸದರಿಗೂ
ಟಿಕೆಟ್
ನೀಡಲು
ಹೈಕಮಾಂಡ್
ತೀರ್ಮಾನ
ಕೈಗೊಂಡಿದೆ.
ಅದರಂತೆ
ಕೇಂದ್ರ
ಸಚಿವ
ವೀರಪ್ಪ
ಮೊಯ್ಲಿ
ಅವರಿಗೂ
ಟಿಕೆಟ್
ನೀಡಲು
ತೀರ್ಮಾನಿಸಲಾಗಿದ್ದು,
ಎರಡನೇ
ಪಟ್ಟಿಯಲ್ಲಿ
ಅವರ
ಹೆಸರು
ಘೋಷಣೆಯಾಗಲಿದೆ
ಎಂದು
ಹೇಳಿದರು.
[ಕಾಂಗ್ರೆಸ್
ಮೊದಲ
ಪಟ್ಟಿ]
ಬುಧವಾರ ಸಂಜೆ ಅಥವ ಗುರುವಾರ ಪಕ್ಷದ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಲಾಗುತ್ತದೆ. ಕರ್ನಾಟಕದ ಕೆಲವು ಸಚಿವರ ಹೆಸರು ಸಹ ಎರಡನೆ ಪಟ್ಟಿಯಲ್ಲಿ ಸೇರಿರುತ್ತದೆ. ರಾಜ್ಯದಲ್ಲಿ ಪಕ್ಷ ಹೆಚ್ಚಿನ ಸ್ಥಾನಗಳನ್ನು ಪಡೆಯಲು ಅನುಕೂಲವಾಗಲಿ ಎಂಬ ಕಾರಣಕ್ಕಾಗಿ ಸಚಿವರು ಸ್ಪರ್ಧಿಸುತ್ತಿದ್ದಾರೆ. ಪಕ್ಷದ ನಾಯಕರ ತೀರ್ಮಾನದಂತೆ ಸಚಿವರನ್ನು ಕಣಕ್ಕಿಳಿಸಲಾಗುತ್ತಿದೆ ಎಂದರು.[ಕೈ ಪಟ್ಟಿಯಲ್ಲಿ ಸಚಿವರು, ಶಾಸಕರೇಕೆ?]
ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ. ಕಾಂಗ್ರೆಸ್ ಪಕ್ಷದಲ್ಲಿ ಆಂತರಿಕ ಚುನಾವಣೆ ಸೇರಿದಂತೆ ವ್ಯವಸ್ಥೆಯಲ್ಲಿ ಹಲವಾರು ಬದಲಾವಣೆಗಳನ್ನು ಮಾಡಲಾಗುತ್ತಿದೆ. ಇದಕ್ಕೆ ಹಿರಿಯ ಮತ್ತು ಕಿರಿಯ ಮುಖಂಡರು ಬದ್ಧರಾಗಿರಬೇಕು ಎಂದು ಪರಮೇಶ್ವರ್ ಹೇಳಿದರು. [ಲೋಕಸಭೆ ಚುನಾವಣೆ ವೇಳಾಪಟ್ಟಿ]
ಬಂಡಾಯ ಶಮನಗೊಳಿಸುತ್ತೇವೆ : ಪಕ್ಷದಲ್ಲಿನ ಬಂಡಾಯವನ್ನು ಶಮನಗೊಳಿಸಲಾಗುವುದು ಎಂದು ತಿಳಿಸಿದ ಪರಮೇಶ್ವರ್, ಮಹಿಮಾ ಪಟೇಲ್ ಅವರಿಗೆ ಟಿಕೆಟ್ ಕೈ ತಪ್ಪಿರುವುದಕ್ಕೆ ಬೇಸರ ಉಂಟಾಗಿರಬಹುದು. ಮುಂದೆ ಅವರಿಗೆ ಪಕ್ಷ ಸರಿಯಾದ ಅವಕಾಶ ನೀಡಲಾಗುವುದು ಎಂದರು.