ಎಚ್.ಡಿ.ಕೋಟೆಯಲ್ಲಿನ್ನೂ ಪತ್ತೆಯಾಗದ ಹುಲಿ, ಗ್ರಾಮಸ್ಥರಿಗಿಲ್ಲ ನೆಮ್ಮದಿ!
ಎಚ್ ಡಿ ಕೋಟೆ ಬಳಿ ಕಾಣಿಸಿಕೊಂಡು, ಬಾಳೆತೋಟವೊಂದರಲ್ಲಿ ಅವಿತಿದ್ದ ಹುಲಿ ಇನ್ನೂ ಪತ್ತೆಯಾಗದಿರುವುದು ಸ್ಥಳೀಯರಲ್ಲಿ ಆತಂಕ ಹುಟ್ಟಿಸಿದೆ.
ಎಚ್.ಡಿ.ಕೋಟೆ: ಹೆಗ್ಗಡಾಪುರ ಮತ್ತು ನಾಗನಹಳ್ಳಿ ನಡುವೆ ಕಾಣಿಸಿಕೊಂಡು ಬಾಲರಾಜು ಎಂಬುವವರ ಬಾಳೆತೋಟದಲ್ಲಿ ಆಶ್ರಯ ಪಡೆದಿದೆ ಎನ್ನಲಾದ ಹುಲಿ ಇನ್ನೂ ಸೆರೆಸಿಕ್ಕಿಲ್ಲದಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
ಅರಣ್ಯ ಇಲಾಖೆ ನಡೆಸಿದ ಕಾರ್ಯಾಚರಣೆಯೂ ವಿಫಲವಾಗಿದೆ. ಹುಲಿಯ ಸುಳಿವು ಸಿಗದ ಕಾರಣ ಕಾರ್ಯಾಚರಣೆ ನಡೆಸಿದ ತಂಡ ನಿರಾಸೆಗೊಂಡಿದ್ದರೆ, ಜನ ಭಯಭೀತರಾಗಿದ್ದಾರೆ.[ಮೈಸೂರಿನ ಬಾಳೆತೋಟದಲ್ಲಿ ಅವಿತ ಹುಲಿರಾಯ!]

ಭಾನುವಾರದ ಕಾರ್ಯಾಚರಣೆ ವೇಳೆ ತಪ್ಪಿಸಿಕೊಂಡ ಹುಲಿ ಬಾಳೆತೋಟದಲ್ಲಿ ಆಶ್ರಯ ಪಡೆದಿತ್ತು, ಸೋಮವಾರ ಬೆಳಿಗ್ಗೆ 6 ಗಂಟೆಗೆ ಆ ತೋಟದಿಂದ ಅರಣ್ಯಾಧಿಕಾರಿಗಳ ಮಾರ್ಗದರ್ಶನದಲ್ಲಿ ಸಿಬ್ಬಂದಿಗಳು ನಾಲ್ಕಾರು ತಂಡಗಳಾಗಿ ಕಾರ್ಯಾಚರಣೆ ನಡೆಸಿದರು.
ಜಮೀನಿನ ಸುತ್ತ ಒಣ ಜಮೀನಿದ್ದು ಹುಲಿಯ ಹೆಜ್ಜೆ ಗುರುತು ಪತ್ತೆ ಮಾಡಲು ಸಾಧ್ಯವಾಗಲಿಲ್ಲ . ಸಿಬ್ಬಂದಿ ಹುಲಿಯಿದ್ದ ಸ್ಥಳದಿಂದ ಐದು ಕಿಲೋಮೀಟರ್ ಸುತ್ತಳತೆಯಲ್ಲಿ ಹುಡುಕಾಟ ನಡೆಸಿದರೂ ಹುಲಿಯ ಸುಳಿವು ಸಿಗಲಿಲ್ಲ.[ಮೈಸೂರಿನಲ್ಲಿ ಮಂಡ್ಯರಮೇಶ್ ರಿಂದ ಬೇಸಿಗೆ ಶಿಬಿರ]
ಕಾರ್ಯಾಚರಣೆಗಾಗಿ ಮೇಟಿಕುಪ್ಪೆ, ಅಂತರಸಂತೆ ಮತ್ತು ಎಚ್.ಡಿ.ಕೋಟೆ ಸಾಮಾಜಿಕ ಅರಣ್ಯ ಸಿಬ್ಬಂದಿ ಮತ್ತು ಕವಾಡಿಗಳಾಗಿ ನೇಮಕಗೊಂಡು ತರಬೇತಿ ಪಡೆಯುತ್ತಿದ್ದವರನ್ನು ಬಳಸಿಕೊಳ್ಳಲಾಯಿತು.
ಅರವಳಿಕೆ ನೀಡಲು ಮತ್ತು ಹುಲಿಯ ಪತ್ತೆಗಾಗಿ ಅಭಿಮನ್ಯು ಮತ್ತು ಕೃಷ್ಣ ಸಾಕು ಆನೆಗಳನ್ನು ಬಳಸಿದರೂ ಹುಲಿ ಮಾತ್ರ ಯಾರ ಕಣ್ಣಿಗೂ ಬೀಳದೆ ತಪ್ಪಿಸಿಕೊಂಡಿದೆ.[ಮೈಸೂರಿನಲ್ಲಿ ಐದು ಪೈಸೆಗೆ ಚೆಕ್ ಪಡೆದ ಬ್ಯಾಂಕ್!]

ಈ ಸಂದರ್ಭ ಮಾತನಾಡಿದ ಪಶುವೈದ್ಯ ಡಾ. ಉಮಾಶಂಕರ್ ರವರು ಇಲ್ಲಿ ಕಾಣಿಸಿಕೊಂಡ ಹುಲಿಯು ಒಂದರಿಂದ ಒಂದೂವರೆ ವರ್ಷದಾಗಿದ್ದು, ತಾಯಿ ಹುಲಿಯಿಂದ ಬೇರ್ಪಟ್ಟು ಸ್ವಲ್ಪ ನಿತ್ರಾಣವಾಗಿದೆ. ಇಲ್ಲಿಂದ ಕಾಡು ನಾಲ್ಕು ಕಿಲೋಮೀಟರ್ ಇದೆ.
ಸಿಬ್ಬಂದಿ ಹುಲಿಯ ಹುಡುಕಾಟ ಸಂದರ್ಭದಲ್ಲಿ ದಟ್ಟಹಳ್ಳ ಕಾಡಿಗೆ ಒಂದು ಕಿಲೋಮೀಟರ್ ಅಂತರದಲ್ಲಿ ಹೆಜ್ಜೆ ಗುರುತು ಪತ್ತೆಯಾಗಿದ್ದು, ಹುಲಿ ಕಾಡಿಗೆ ಸೇರಿರಬಹುದು ಎನ್ನಲಾಗುತ್ತಿದೆ.[ವಂಚನೆ ಪ್ರಕರಣ: ಇನ್ನಿಬ್ಬರು ಆರೋಪಿಗಳ ಬಂಧನ]
ಕಾರ್ಯಾಚರಣೆಯಲ್ಲಿ ಅರಣ್ಯ ಸಂರಕ್ಷಣಾಧಿಕಾರಿ ಮಣಿಕಂಠನ್, ಡಿಎಫ್ ಓ ಕರಿಕಾಳನ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಬೆಳ್ಳಿಯಪ್ಪ, ರಘು, ವಲಯಾರಣ್ಯಾಧಿಕಾರಿಗಳಾದ ಮಧು, ಮಹೇಶ್, ಶರಣಬಸಪ್ಪ, ಪಶುವೈದ್ಯರಾದ ನಾಗರಾಜು, ಡಾ.ಮದನ್ ಪಾಲ್ಗೊಂಡಿದ್ದರು.
-
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು












Click it and Unblock the Notifications