ಮೈಸೂರು ದಸರಾ ವೇಳೆ ಭಾರೀ ಸದ್ದು ಮಾಡಿದ ಅಪರೂಪದ ಚಿತ್ರವಿದು...
Recommended Video

ಮೈಸೂರು, ಅಕ್ಟೋಬರ್.22: ಈ ವರ್ಷದ ಐತಿಹಾಸಿಕ ಮೈಸೂರು ದಸರಾಕ್ಕೆ ಜಂಬೂ ಸವಾರಿಯೊಂದಿಗೆ ವಿದಾಯ ಹೇಳಲಾಗುತ್ತಿದೆ. ಹತ್ತು ದಿನಗಳ ಕಾಲ ಇಡೀ ನಗರ ವಿದ್ಯುದ್ದೀಪದ ಬೆಳಕಿನಲ್ಲಿ ಮಿಂದೆದ್ದಿದೆ.
ಇದರ ನಡುವೆ ಅರಮನೆಯ ಕಣ್ಣು ಕೊರೈಸುವ ಬೆಳಕು ಅದರಾಚೆಗೆ ಅದನ್ನೇ ತದೇಕ ಚಿತ್ತದಿಂದ ನೋಡುತ್ತಿರುವ ತಾಯಿಮಗನ ಅಪರೂಪದ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಹಾಗೆ ನೋಡಿದರೆ ರಾತ್ರಿಯಾಗುತ್ತಿದ್ದಂತೆಯೇ ಇಡೀ ಪಟ್ಟಣ ವಿವಿಧ ನಮೂನೆಯ ವಿದ್ಯುತ್ ದೀಪಗಳಿಂದ ಜಗಮಗಿಸುತ್ತಿದ್ದರೆ ಇಂದ್ರನ ಅಮರಾವತಿಯೇ ಧರೆಗಿಳಿಯಿತೇ ಎಂಬ ಭಾವ ಪ್ರತಿಯೊಬ್ಬರನ್ನು ಆವರಿಸಿದ್ದಂತು ಸತ್ಯ.
ಇಡೀ ನಗರ ಸುಂದರಮಯವಾಗಿ ಕಂಗೊಳಿಸುತ್ತಿದ್ದರೆ ಅದನ್ನು ನೋಡಿ ಕಣ್ತುಂಬಿಕೊಂಡವರೆಷ್ಟೋ? ಬಡವರು, ಶ್ರೀಮಂತರು ಎಂಬ ಬೇಧಭಾವವಿಲ್ಲದೆ ಎಲ್ಲರೂ ದಸರಾವನ್ನು ಅವರವರ ಅನುಕೂಲಕ್ಕೆ ತಕ್ಕಂತೆ ಎಂಜಾಯ್ ಮಾಡಿದ್ದಾರೆ.
ದಸರಾ ಸಂದರ್ಭ ವಿದ್ಯುದ್ದೀಪದಿಂದ ಕಂಗೊಳಿಸುವ ಮೈಸೂರು ಅರಮನೆಯನ್ನೊಮ್ಮೆ ನೋಡಬೇಕೆಂಬ ಕುತೂಹಲ ಕಾತರ ಎಲ್ಲರಲ್ಲೂ ಮನೆ ಮಾಡಿರುತ್ತದೆ. ಹೀಗಾಗಿ ಹೆಚ್ಚಿನವರು ಅರಮನೆಯತ್ತ ಹೆಜ್ಜೆಹಾಕುತ್ತಾರೆ. ಸುಂದರ ಬೆಳಕಲ್ಲಿ ಬೆಳಗುವ ಅರಮನೆಯನ್ನೊಮ್ಮೆ ನೋಡಿ ಧನ್ಯರಾಗುತ್ತಾರೆ. ಮುಂದೆ ಓದಿ...

ಎರಡು ಕಣ್ಣುಗಳು ಸಾಲದು
ದಸರಾ ಸಂದರ್ಭದಲ್ಲಂತೂ ಅರಮನೆಯನ್ನು ನೋಡಲು ಎರಡು ಕಣ್ಣುಗಳೇ ಸಾಲದಾಗುತ್ತದೆ. ಆದರೆ ಅರಮನೆಯನ್ನು ನೋಡುವ ಕಣ್ಣುಗಳು ಎರಡೇ ಆದರೂ ಅದರಾಚೆಗಿನ ನೋಟ ನೂರಾರು ಆಗಿರುತ್ತದೆ. ಅದರಲ್ಲೂ ದಸರಾ ಸಂದರ್ಭ ಅರಮನೆಯ ಸುಂದರ ಚಿತ್ರವನ್ನು ಸೆರೆಹಿಡಿಯುವ ತವಕ ಎಲ್ಲ ಛಾಯಾಗ್ರಾಹಕರಲ್ಲಿ ಇದ್ದೇ ಇರುತ್ತದೆ.

ಅರ್ಥಪೂರ್ಣ ಚಿತ್ರ
ಛಾಯಾಗ್ರಾಹಕರ ನೋಟಗಳು ಮತ್ತು ಅವರು ಸೆರೆ ಹಿಡಿಯುವ ಚಿತ್ರಗಳು ಕೆಲವೊಮ್ಮೆ ಎಷ್ಟೊಂದು ಅರ್ಥಪೂರ್ಣವಾಗಿರುತ್ತದೆ, ಮಾತ್ರವಲ್ಲ ಒಂದೇ ಒಂದು ಚಿತ್ರ ನೂರಾರು ಅರ್ಥಗಳನ್ನು ನಮ್ಮ ಮನಃಪಟಲದಲ್ಲಿ ಹರಡಿ ಹೋಗುತ್ತದೆ ಎಂಬುದಕ್ಕೆ ಈ ಬಾರಿಯ ದಸರಾದಲ್ಲಿ ಆದಿವಾಸಿ ಮಹಿಳೆ ತನ್ನ ಎಳೆಕಂದನೊಂದಿಗೆ ಜಗಮಗಿಸುವ ಅರಮನೆಯನ್ನು ನೋಡುತ್ತಿರುವ ನೋಟದ ಚಿತ್ರ ಸಾಕ್ಷಿಯಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು
ಆದಿವಾಸಿ ಮಹಿಳೆ ತನ್ನ ಎಳೆಕಂದನೊಂದಿಗೆ ಜಗಮಗಿಸುವ ಅರಮನೆಯನ್ನು ನೋಡುತ್ತಿರುವ ನೋಟದ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡಿದೆ. ಒಬ್ಬರಿಂದ ಮತ್ತೊಬ್ಬರಿಗೆ ಶೇರ್ ಆಗುತ್ತಲೇ ಇದೆ. ಅದಕ್ಕೆ ಸಾವಿರಾರು ಕಾಮೆಂಟ್ ಗಳು ಬರತೊಡಗಿದೆ. ಈ ಅಪರೂಪದ ಚಿತ್ರಕ್ಕೆ ಜನ ಅವರದ್ದೇ ಆದ ವ್ಯಾಖ್ಯಾನಗಳನ್ನು ನೀಡುತ್ತಲೇ ತಮ್ಮ ಗೋಡೆಗಳಲ್ಲಿ ಹಾಕಿಕೊಳ್ಳುತ್ತಿದ್ದಾರೆ.

ಹಿರಿಯ ಛಾಯಾಗ್ರಾಹಕ ನೇತ್ರರಾಜು
ಇಷ್ಟಕ್ಕೂ ಇಂತಹದೊಂದು ಚಿತ್ರವನ್ನು ಸೆರೆಹಿಡಿದವರು ಮೈಸೂರಿನ ಹಿರಿಯ ಛಾಯಾಗ್ರಾಹಕ ನೇತ್ರರಾಜುರವರು. ಅವರು ದೃಶ್ಯಗಳನ್ನು ಕೇವಲ ಕಣ್ಣಿಂದ ಮಾತ್ರ ನೋಡುವುದಿಲ್ಲ. ಹೃದಯದಿಂದ ನೋಡುತ್ತಾರೆ. ಹೀಗಾಗಿಯೇ ಅವರಿಗೆ ಇಂತಹದೊಂದು ಅಪರೂಪದ ಚಿತ್ರ ತೆಗೆಯಲು ಸಾಧ್ಯವಾಗಿದೆ ಎಂದರೆ ಅತಿಶಯೋಕ್ತಿಯಾಗಲಾರದು.
-
Weekly Horoscope March 9–15: ಮಾರ್ಚ್ ವಾರಭವಿಷ್ಯ – 12 ರಾಶಿಗಳ ಸುಖ-ದುಃಖ, ಹಣಕಾಸು ಮತ್ತು ಆರೋಗ್ಯ ಫಲ -
Ration card: ರಾಜ್ಯದಲ್ಲಿ ಪಡಿತರಚೀಟಿ ತಿದ್ದುಪಡಿಗೆ ಮತ್ತೆ ಅವಕಾಶ -
Vande Bharat Express: 20 ಬೋಗಿಗಳ 42ನೇ ವಂದೇ ಭಾರತ್ ರೈಲು ಸಂಚಾರ ಆರಂಭ, ಎಲ್ಲಿ? ವೇಳಾಪಟ್ಟಿ -
ಟಿ20 ವಿಶ್ವಕಪ್ 2026 ಫೈನಲ್ ಪಂದ್ಯ ಮಳೆಯಿಂದ ರದ್ದಾದ್ರೆ ಟ್ರೋಫಿ ಯಾರ ಮುಡಿಗೆ?; ಐಸಿಸಿ ನಿಯಮಗಳು ಹೀಗಿವೆ -
Gold Price: ಚಿನ್ನ ಬೆಲೆ ಭಾರಿ ಕುಸಿತ ಸಾಧ್ಯತೆ, ಆದರೆ ಇದೊಂದು ದೇಶದ ನಿರ್ಧಾರ ಮುಖ್ಯ -
Horoscope March 7: ಉದ್ಯೋಗದಲ್ಲಿ ಉತ್ತಮ ಬದಲಾವಣೆ, ದಾಂಪತ್ಯದಲ್ಲಿ ಸಿಹಿ ಅಲೆ, ದಿನ ಭವಿಷ್ಯ -
ಕನ್ನಡ ನಾಡಿನ ಪ್ರತಿಭೆಗಳ ಸಾಧನೆ, ಯುಪಿಎಸ್ಸಿ ಟಾಪರ್ಸ್ ಮಾಹಿತಿ ತಿಳಿಯಿರಿ | UPSC Toppers -
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Women's Day Wishes: ಹೆಣ್ಣು ಜಗದ ಕಣ್ಣು: ಮಹಿಳಾ ದಿನಕ್ಕೆ ನಿಮ್ಮ ಪ್ರೀತಿಪಾತ್ರರಿಗೆ ಶುಭ ಕೋರಲು ಇಲ್ಲಿವೆ ಸುಂದರ ಸಾಲುಗಳು -
MS Dhoni: ಕುಣಿದು ಕುಪ್ಪಳಿಸುತ್ತಿದ್ದ ಪತ್ನಿ ಸಾಕ್ಷಿ ಸಿಂಗ್ಗೆ ಸುಮ್ನೆ ಕೂತ್ಕೋ ಎಂದ ಎಂಎಸ್ ಧೋನಿ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Gold Rate Today: ಸತತ ಆರನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆ: ಬೆಂಗಳೂರಿನಲ್ಲಿ ಇಂದಿನ ದರಗಳು ಹೀಗಿವೆ












Click it and Unblock the Notifications