ಮೈಸೂರು ದಸರಾ ವೇಳೆ ಭಾರೀ ಸದ್ದು ಮಾಡಿದ ಅಪರೂಪದ ಚಿತ್ರವಿದು...
Recommended Video

ಮೈಸೂರು, ಅಕ್ಟೋಬರ್.22: ಈ ವರ್ಷದ ಐತಿಹಾಸಿಕ ಮೈಸೂರು ದಸರಾಕ್ಕೆ ಜಂಬೂ ಸವಾರಿಯೊಂದಿಗೆ ವಿದಾಯ ಹೇಳಲಾಗುತ್ತಿದೆ. ಹತ್ತು ದಿನಗಳ ಕಾಲ ಇಡೀ ನಗರ ವಿದ್ಯುದ್ದೀಪದ ಬೆಳಕಿನಲ್ಲಿ ಮಿಂದೆದ್ದಿದೆ.
ಇದರ ನಡುವೆ ಅರಮನೆಯ ಕಣ್ಣು ಕೊರೈಸುವ ಬೆಳಕು ಅದರಾಚೆಗೆ ಅದನ್ನೇ ತದೇಕ ಚಿತ್ತದಿಂದ ನೋಡುತ್ತಿರುವ ತಾಯಿಮಗನ ಅಪರೂಪದ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಹಾಗೆ ನೋಡಿದರೆ ರಾತ್ರಿಯಾಗುತ್ತಿದ್ದಂತೆಯೇ ಇಡೀ ಪಟ್ಟಣ ವಿವಿಧ ನಮೂನೆಯ ವಿದ್ಯುತ್ ದೀಪಗಳಿಂದ ಜಗಮಗಿಸುತ್ತಿದ್ದರೆ ಇಂದ್ರನ ಅಮರಾವತಿಯೇ ಧರೆಗಿಳಿಯಿತೇ ಎಂಬ ಭಾವ ಪ್ರತಿಯೊಬ್ಬರನ್ನು ಆವರಿಸಿದ್ದಂತು ಸತ್ಯ.
ಇಡೀ ನಗರ ಸುಂದರಮಯವಾಗಿ ಕಂಗೊಳಿಸುತ್ತಿದ್ದರೆ ಅದನ್ನು ನೋಡಿ ಕಣ್ತುಂಬಿಕೊಂಡವರೆಷ್ಟೋ? ಬಡವರು, ಶ್ರೀಮಂತರು ಎಂಬ ಬೇಧಭಾವವಿಲ್ಲದೆ ಎಲ್ಲರೂ ದಸರಾವನ್ನು ಅವರವರ ಅನುಕೂಲಕ್ಕೆ ತಕ್ಕಂತೆ ಎಂಜಾಯ್ ಮಾಡಿದ್ದಾರೆ.
ದಸರಾ ಸಂದರ್ಭ ವಿದ್ಯುದ್ದೀಪದಿಂದ ಕಂಗೊಳಿಸುವ ಮೈಸೂರು ಅರಮನೆಯನ್ನೊಮ್ಮೆ ನೋಡಬೇಕೆಂಬ ಕುತೂಹಲ ಕಾತರ ಎಲ್ಲರಲ್ಲೂ ಮನೆ ಮಾಡಿರುತ್ತದೆ. ಹೀಗಾಗಿ ಹೆಚ್ಚಿನವರು ಅರಮನೆಯತ್ತ ಹೆಜ್ಜೆಹಾಕುತ್ತಾರೆ. ಸುಂದರ ಬೆಳಕಲ್ಲಿ ಬೆಳಗುವ ಅರಮನೆಯನ್ನೊಮ್ಮೆ ನೋಡಿ ಧನ್ಯರಾಗುತ್ತಾರೆ. ಮುಂದೆ ಓದಿ...

ಎರಡು ಕಣ್ಣುಗಳು ಸಾಲದು
ದಸರಾ ಸಂದರ್ಭದಲ್ಲಂತೂ ಅರಮನೆಯನ್ನು ನೋಡಲು ಎರಡು ಕಣ್ಣುಗಳೇ ಸಾಲದಾಗುತ್ತದೆ. ಆದರೆ ಅರಮನೆಯನ್ನು ನೋಡುವ ಕಣ್ಣುಗಳು ಎರಡೇ ಆದರೂ ಅದರಾಚೆಗಿನ ನೋಟ ನೂರಾರು ಆಗಿರುತ್ತದೆ. ಅದರಲ್ಲೂ ದಸರಾ ಸಂದರ್ಭ ಅರಮನೆಯ ಸುಂದರ ಚಿತ್ರವನ್ನು ಸೆರೆಹಿಡಿಯುವ ತವಕ ಎಲ್ಲ ಛಾಯಾಗ್ರಾಹಕರಲ್ಲಿ ಇದ್ದೇ ಇರುತ್ತದೆ.

ಅರ್ಥಪೂರ್ಣ ಚಿತ್ರ
ಛಾಯಾಗ್ರಾಹಕರ ನೋಟಗಳು ಮತ್ತು ಅವರು ಸೆರೆ ಹಿಡಿಯುವ ಚಿತ್ರಗಳು ಕೆಲವೊಮ್ಮೆ ಎಷ್ಟೊಂದು ಅರ್ಥಪೂರ್ಣವಾಗಿರುತ್ತದೆ, ಮಾತ್ರವಲ್ಲ ಒಂದೇ ಒಂದು ಚಿತ್ರ ನೂರಾರು ಅರ್ಥಗಳನ್ನು ನಮ್ಮ ಮನಃಪಟಲದಲ್ಲಿ ಹರಡಿ ಹೋಗುತ್ತದೆ ಎಂಬುದಕ್ಕೆ ಈ ಬಾರಿಯ ದಸರಾದಲ್ಲಿ ಆದಿವಾಸಿ ಮಹಿಳೆ ತನ್ನ ಎಳೆಕಂದನೊಂದಿಗೆ ಜಗಮಗಿಸುವ ಅರಮನೆಯನ್ನು ನೋಡುತ್ತಿರುವ ನೋಟದ ಚಿತ್ರ ಸಾಕ್ಷಿಯಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು
ಆದಿವಾಸಿ ಮಹಿಳೆ ತನ್ನ ಎಳೆಕಂದನೊಂದಿಗೆ ಜಗಮಗಿಸುವ ಅರಮನೆಯನ್ನು ನೋಡುತ್ತಿರುವ ನೋಟದ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡಿದೆ. ಒಬ್ಬರಿಂದ ಮತ್ತೊಬ್ಬರಿಗೆ ಶೇರ್ ಆಗುತ್ತಲೇ ಇದೆ. ಅದಕ್ಕೆ ಸಾವಿರಾರು ಕಾಮೆಂಟ್ ಗಳು ಬರತೊಡಗಿದೆ. ಈ ಅಪರೂಪದ ಚಿತ್ರಕ್ಕೆ ಜನ ಅವರದ್ದೇ ಆದ ವ್ಯಾಖ್ಯಾನಗಳನ್ನು ನೀಡುತ್ತಲೇ ತಮ್ಮ ಗೋಡೆಗಳಲ್ಲಿ ಹಾಕಿಕೊಳ್ಳುತ್ತಿದ್ದಾರೆ.

ಹಿರಿಯ ಛಾಯಾಗ್ರಾಹಕ ನೇತ್ರರಾಜು
ಇಷ್ಟಕ್ಕೂ ಇಂತಹದೊಂದು ಚಿತ್ರವನ್ನು ಸೆರೆಹಿಡಿದವರು ಮೈಸೂರಿನ ಹಿರಿಯ ಛಾಯಾಗ್ರಾಹಕ ನೇತ್ರರಾಜುರವರು. ಅವರು ದೃಶ್ಯಗಳನ್ನು ಕೇವಲ ಕಣ್ಣಿಂದ ಮಾತ್ರ ನೋಡುವುದಿಲ್ಲ. ಹೃದಯದಿಂದ ನೋಡುತ್ತಾರೆ. ಹೀಗಾಗಿಯೇ ಅವರಿಗೆ ಇಂತಹದೊಂದು ಅಪರೂಪದ ಚಿತ್ರ ತೆಗೆಯಲು ಸಾಧ್ಯವಾಗಿದೆ ಎಂದರೆ ಅತಿಶಯೋಕ್ತಿಯಾಗಲಾರದು.
-
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ -
"ಜೈಲಲ್ಲಿ ನಮಗೆ ಮೊಬೈಲ್ ಕೊಟ್ಟಿದ್ದು ಡಿಜಿಪಿ ಅಲೋಕ್ ಕುಮಾರ್" ಎಂದ ಕೈದಿಗಳು, ವಿಡಿಯೋ ವೈರಲ್ -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
ದುಬೈನ ಬುರ್ಜ್ ಖಲೀಫಾ ಎದುರು ತಾಯಿಯ ಸಂಭ್ರಮ: ಅಮ್ಮನ ಆಸೆ ಈಡೇರಿಸಿದ ಮಗಳ Video Viral -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್












Click it and Unblock the Notifications