ಇಂದು ಮೈಸೂರು ವಿವಿ ಶತಮಾನೋತ್ಸವ
ಮೈಸೂರು, ಜುಲೈ, 24 : ಮಾನಸ ಗಂಗೋತ್ರಿ ವಿಶ್ವವಿದ್ಯಾನಿಲಯ 100 ನೇ ವರ್ಷದ ಸಂಭ್ರಮಾಚರಣೆಗೆ ಭರದ ಸಿದ್ದತೆಯಲ್ಲಿದೆ. ಉಡುಗೊರೆಯಿಂದ ಹಿಡಿದು ಬರುವ ಅತಿಥಿಗಳಿಗೆ ಯಾವುದೇ ಕುಂದುಕೊರತೆಯಾಗದಂತೆ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುತ್ತಿದೆ.
ಶತಮಾನೋತ್ಸವ ಸಮಾರಂಭ ವಿವಿಯ ಬಯಲು ರಂಗ ಮಂದಿರದಲ್ಲಿ ಜುಲೈ 27ರ ಮಧ್ಯಾಹ್ನ 3ಕ್ಕೆ ನಡೆಯಲಿದೆ. ಈ ಸಮಾರಂಭಕ್ಕೆ ಉದ್ಘಾಟರಾಗಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಆಗಮಿಸಲಿದ್ದು, ಕುಲಾಧಿಪತಿ ಹಾಗೂ ರಾಜ್ಯಪಾಲ ವಾಜುಬಾಯಿ ರೂಢವಾಲಾ ಅಧ್ಯಕ್ಷತೆ ವಹಿಸಲಿದ್ದಾರೆ. [ಆಷಾಢ ಶುಕ್ರವಾರ, ಚಾಮುಂಡಿ ಬೆಟ್ಟಕ್ಕೆ ಹೋಗಲು]
ಉದ್ಘಾಟಕರಾದ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಗೆ ಪ್ರಸಿದ್ದ ಎಚ್ಎಂಟಿ ಸಂಸ್ಥೆಯಿಂದ ತಯಾರಾದ ರಿಸ್ಟ್ ವಾಚ್ ಉಡುಗೊರೆಯಾಗಿ ನೀಡಲು ಸಮಿತಿ ನಿರ್ಧರಿಸಿದ್ದು, ಈ ವಾಚ್ ನಲ್ಲಿ ನಾಲ್ವಡಿ ನರಸಿಂಹರಾಜ್ ಒಡೆಯರ್ ಅವರ ಶ್ರೀಗಂಧದ ಕೆತ್ತನೆ ಮತ್ತು ವಾಚಿನ ಬೆಲ್ಟ್ನಲ್ಲಿ ವಿಶ್ವವಿದ್ಯಾನಿಲಯದ logo ಇರುವುದು ಇದರ ವಿಶೇಷತೆಯಾಗಿದೆ. ಜೊತೆಗೆ 16 ಇಂಚು ಉದ್ದದ ಒಡೆಯರ್ ಅವರ ಪುತ್ಥಳಿ ಶ್ರೀಗಂಧದಿಂದ ಮಾಡಿದುದಾಗಿದೆ.[ಮೈಸೂರು ವಿಶ್ವವಿದ್ಯಾಲಯ ವಿದ್ಯಾರ್ಥಿಗಳೆಲ್ಲ ಒಂದಾಗಿ ಬನ್ನಿ]
1916ರಲ್ಲಿ ಸ್ಥಾಪನೆಯಾದ ವಿಶ್ವವಿದ್ಯಾನಿಲಯದ ಈ ಸಂತಸದ ಕ್ಷನಗಳಲ್ಲಿ ಪಾಲ್ಗೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಪ್ರಧಾನ ಮಂತ್ರಿ ದೇವೇಗೌಡ, ಉನ್ನತ ಶಿಕ್ಷಣ ಸಚಿವ ಆರ್.ವಿ ದೇಶಪಾಂಡೆ. ಕಂದಾಯ ಹಾಗೂ ಜಿಲ್ಲಾ ಉಸ್ತುವಾರಿ ವಿ. ಶ್ರೀನಿವಾಸ್ ಪ್ರಸಾದ್ ಮುಂತಾದ ಅತಿಥಿಗಳು ಆಗಮಿಸಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ಈಗಾಗಲೇ ಕಾರ್ಯನಿರ್ವಹಿಸಿದ ಹಲವಾರು ಕುಲಪತಿಗಳಿಗೆ ಸನ್ಮಾನ ನೆರವೇರಲಿದ್ದು, ಇತಿಹಾಸ ತಜ್ಞ ಹಾಗೂ ವಿಶ್ರಾಂತ ಕುಲಪತಿ ಪ್ರೊ.ಬಿ ಷೇಕ್ ಅಲಿ ರಚಿಸಿರುವ 'ಎರಾ ಆಫ್ ಎನ್ಲೈಟನ್ಮೆಂಟ್ (ಮೈಸೂರು ವಿವಿಯ ನೂರು ವರ್ಷಗಳ ಇತಿಹಾಸ) ಕೃತಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಡುಗಡೆಗೊಳಿಸಲಿದ್ದಾರೆ.