ಮೈಸೂರು: ಚಾಮುಂಡಿ ಬೆಟ್ಟ ಮೆಟ್ಟಿಲ ಮೇಲೆ ತೊರೆ; ಒಡೆದು ಹೋದ ತಾವರೆಕೆರೆ
ಮೈಸೂರು, ಸೆಪ್ಟೆಂಬರ್ 27: ಮೈಸೂರಿನಲ್ಲಿ ಸೆ. 26ರ ರಾತ್ರಿಯಿಂದ ಸುರಿದ ಧಾರಾಕಾರ ಮಳೆಯಿಂದಾಗಿ, ನಗರದ ಬಹುತೇಕ ತಗ್ಗು ಪ್ರದೇಶಗಳು ಜಲಾವೃತವಾಗಿವೆ. ತಾವರೆಕೆರೆ ಒಡೆದು ಹೋಗಿ ಪಕ್ಕದಲ್ಲಿರುವ ಜೆಸಿ ನಗರಕ್ಕೆ ನೀರು ನುಗ್ಗಿದೆ.
ಬೆಂಗಳೂರಲ್ಲಿ ಮಳೆ: ಎಲೆಲ್ಲಿ, ಎಷ್ಟೆಷ್ಟು ವರ್ಷಧಾರೆ?
ಮಳೆಯ ಪರಿಣಾಮವಾಗಿ, ಚಾಮುಂಡಿ ಬೆಟ್ಟದಲ್ಲಿ ಸಣ್ಣ ಪುಟ್ಟ ತೊರೆಗಳು ಹರಿಯುತ್ತಿದ್ದು ಚಾಮುಂಡೇಶ್ವರಿ ಸನ್ನಿಧಾನಕ್ಕೆ ಹೋಗುವ ಮೆಟ್ಟಿಲುಗಳ ಮೇಲೆ ನೀರು ಹರಿಯುತ್ತಿದೆ. ಸಣ್ಣ ಝರಿಯಂತೆ ನೀರು ಹರಿಯುತ್ತಿದ್ದು ಮೆಟ್ಟಿಲಗಳನ್ನು ಸರಾಗವಾಗಿ ಹತ್ತಿ ಹೋಗದ ಪರಿಸ್ಥಿತಿ ನಿರ್ಮಾಣವಾಗಿದೆ.
ಚಾಮುಂಡಿ ಬೆಟ್ಟದ ಮೇಲ್ಭಾಗದಿಂದ ಹರಿದುಬಂದ ಭಾರೀ ಪ್ರಮಾಣದ ನೀರು ಬೆಟ್ಟದ ತಪ್ಪಲಿನಲ್ಲಿರುವ ತಾವರೆಕೆರೆ ತಲುಪಿ ಭರ್ತಿಯಾದ ಪರಿಣಾಮ ಕೆರೆ ಕೋಡಿ ಬಿದ್ದ ನೀರು ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಜೆ.ಸಿ ನಗರ ಬಡಾವಣೆಗೆ ಹರಿದು ಬರುತ್ತಿರುವುದರಿಂದ ಈ ಪ್ರದೇಶ ಜಲಾವೃತವಾಗಿದೆ. ಇಲ್ಲಿನ ರಸ್ತೆಗಳಲ್ಲಿ ನೀರು ಉಕ್ಕಿ ಹರಿಯುತ್ತಿದೆ.
ಮೈಸೂರು, ತುಮಕೂರುಗಳಲ್ಲೂ ಮಳೆಯ ಅವಾಂತರ