ದಸರಾ ಹೊತ್ತಲ್ಲಿ ನೆನೆಯೋಣ ಬಾಯಲ್ಲಿ ನೀರೂರಿಸುವ ಮೈಸೂರು ತಿನಿಸುಗಳ...
Recommended Video

ಮೈಸೂರು, ಸೆಪ್ಟೆಂಬರ್ 13: ಮೈಸೂರು ಆಹಾರ ಪ್ರಿಯರ ಹಾಟ್ ಸ್ಪಾಟ್ ಎಂದರೇ ತಪ್ಪಾಗಲಾರದು. ಇಲ್ಲಿನ ಅಡುಗೆ ರುಚಿ ಸವಿಯದವರೇ ಇಲ್ಲ. ಸಾಂಸ್ಕೃತಿಕ ನಗರಿಯ ಜೊತೆ -ಜೊತೆಗೆ ಮೈಸೂರಿಗೆ ಆಹಾರದ ರಾಜಧಾನಿ ಎಂದರೇ ತಪ್ಪಾಗಲಾರದು. ಅದಕ್ಕೆ ಉತ್ತಮ ಉದಾಹರಣೆಗಳ ಪಟ್ಟಿಯೇ ಇದೆ. ಮೈಸೂರು ಮಸಾಲೆ ದೋಸೆ, ಮೈಸೂರು ಕಾಫಿ, ಮೈಸೂರು ರಸಂ, ಮೈಸೂರು ಬೋಂಡಾ, ಮೈಸೂರು ಚಿಕನ್ ಬಿರಿಯಾನಿ ಹೀಗೆ ಪಟ್ಟಿಯ ಸಾಲು ನಿಲ್ಲುವುದಿಲ್ಲ.
ಮೈಸೂರು ಮಸಾಲೆ ದೋಸೆ
ಮೈಸೂರು ದೋಸೆ ದೋಸೆ ಪ್ರಿಯರಿಗೆ ನವ ಚೈತನ್ಯ ತಂದಿದೆ. ದೋಸೆಯಲ್ಲೇ ತೀರಾ ಸ್ಪೆಷೆಲ್ ಮತ್ತು ಆಕರ್ಷಕ ರುಚಿ ಹೊಂದಿರುವ ಮಸಾಲೆ ದೋಸೆಯ ಹುಟ್ಟೂರು ನಮ್ಮ ಮೈಸೂರು.
ಆದರೆ, ಈ ದೋಸೆ ಹುಟ್ಟಿದ ಕಾಲಾವಧಿ ಯಾರಿಗೂ ಗೊತ್ತಿಲ್ಲ. ಎಂಟೊಂಬತ್ತು ಶತಮಾನಗಳ ಹಿಂದಿದ್ದ ಮಂಗರಸ ಎಂಬಾತ ಹಿಟ್ಟಿಗೆ ಜೋಳ ಮತ್ತು ತರಕಾರಿಗಳನ್ನು ಹಾಕಿ ಬೇಯಿಸಿ ಕೊಡುತ್ತಿದ್ದನಂತೆ. ಹೀಗೆ ದೋಸೆ ರೀತಿಯ ತಿನಿಸನ್ನು ರಾಗಿ, ಗೋಧಿದಲೂ ತಯಾರಿಸುತ್ತಿದ್ದನಂತೆ. ಇದಕ್ಕೆ ಆತ ಇಟ್ಟ ಹೆಸರು 'ಚಂದ್ರಮಂಡಲ'ವೆಂದು. ಹೀಗೆ ಈ ಪ್ರಯೋಗವನ್ನು ಮುಂದುವರಿಸಿ ಮಸಾಲೆ ದೋಸೆಯನ್ನು ಪರಿಚಯಿಸಿದ ಎನ್ನುತ್ತಾರೆ ಇತಿಹಾಸಜ್ಞರು.
ಮೈಸೂರಿನ ಅಗ್ರಹಾರದಲ್ಲಿದ್ದ ನೆಹರು ಲಂಚ್ ಹೋಂ ಸಾದಾ ದೋಸೆಯನ್ನು ತಯಾರಿಸುತ್ತಿತ್ತು. ಇವರೇ ಮುಂದೆ ಮಸಾಲೆ ದೋಸೆಯನ್ನು ಪರಿಚಯಿಸಿದರು ಎಂಬ ಮಾತಿದೆ. ಒಟ್ಟಿನಲ್ಲಿ ಈ ಎರಡೂ ವಾದಗಳು ಮೈಸೂರಿನ ಕಡೆಯದ್ದೇ ಆಗಿರುವುದರಿಂದ ಮಸಾಲೆ ದೋಸೆಯ ಹುಟ್ಟು ಸಾಂಸ್ಕೃತಿಕ ನಗರಿಯೇ ಎನ್ನುವುದಂತೂ ನಿಜ. (ಚಿತ್ರಕೃಪೆ: ಪಿಟಿಐ)

ಮೈಸೂರು ಕಾಫಿ
ಕೊಡಗಿನ ಕಾಫಿ ಹೇಗೆ ಪ್ರಸಿದ್ಧಿಯೋ ಹಾಗೆಯೇ ಮೈಸೂರು ಕಾಫಿಯೂ ಪ್ರಸಿದ್ಧಿ. ಪ್ರತಿಷ್ಠಿತ ಮೈಸೂರು ಕಾಫಿ ವರ್ಕ್ಸ್ ತವರೂರು ಮೈಸೂರು. ಹಾಗೆಯೇ ಗಾಯಿತ್ರಿ ಕಾಫಿವರ್ಕ್ಸ್ ಸೇರಿದಂತೆ ಹತ್ತು ಹಲವು ಕಾಫಿ ಕಂಪೆನಿಗಳ ಉತ್ತಮ ಕಾಫಿ ಪುಡಿಗೆ ಮನಸೋಲದ ಮಂದಿ ಇಲ್ಲವೇ ಇಲ್ಲ.
ಪ್ರತಿಷ್ಠಿತ ಹೊಟೇಲ್ ಗಳಾದ ದಾಸ್ ಪ್ರಕಾಶ್, ಮೈಲಾರಿ, ಲಲಿತ ಮಹಲ್ ಸೇರಿದಂತೆ ಇನ್ನು ಅನೇಕ ಕಡೆಗಳಲ್ಲಿ ಒಂದು ಲೋಟ ಕಾಫಿ ಹೀರಿದರೆ ಸಾಕು, ಅದರ ಆಸ್ವಾದವನ್ನು ಬಲ್ಲವನೇ ಬಲ್ಲನೇನೋ..!

ಮೈಸೂರು ರಸಂ
ಕರ್ನಾಟಕದ ಅಡುಗೆಯಲ್ಲಿ ಸಾಕಷ್ಟು ಪ್ರಾಂತೀಯ ವೈವಿಧ್ಯಗಳಿವೆ. 1980ರ ದಶಕದ ನಂತರ ಉತ್ತರ ಭಾರತದ ಅಡುಗೆಗಳೂ ಕರ್ನಾಟಕದಲ್ಲಿ ಜನಪ್ರಿಯವಾದವು. ಇಲ್ಲಿನ ತಿನಿಸು ಪಕ್ಕದ ಮೂರು ದಕ್ಷಿಣ ಭಾರತದ ರಾಜ್ಯಗಳ ಮತ್ತು ರಾಜ್ಯದ ಉತ್ತರಕ್ಕೆ ಇರುವ ಮಹಾರಾಷ್ಟ್ರ ರಾಜ್ಯದ ಅನೇಕ ಪ್ರದೇಶಗಳಲ್ಲಿ ಮತ್ತು ಸಮುದಾಯಗಳ ಆಹಾರ, ಹಾಗೂ ಪ್ರಭಾವವನ್ನು ಪ್ರತಿಫಲಿಸುತ್ತದೆ. ಇದರಲ್ಲಿ ಪ್ರಮುಖವಾದದ್ದು ಮೈಸೂರು ರಸಂ.
ಬೆಸ್ಟ್ ರೆಸಿಪಿ ಎಂದೇ ಹೆಸರಾಗಿರುವ ರಸಂ ಕಾಂಬಿನೇಷನ್ ಸೂಪರೋ ಸೂಪರ್. ಕೆಂಪು ಮೆಣಸಿನ ಕಾಯಿ , ಮೆಂತ್ಯೆ, ಜೀರಿಗೆ, ಅರಿಶಿನದ ಪುಡಿ ಸೇರಿದಂತೆ ಹತ್ತು ಹಲವು ಮಸಾಲೆ ಪದಾರ್ಥಗಳ ಮಿಶ್ರಣ ಸೇರಿಸಿ, ಘಮ್ಮೆನ್ನುವ ಇಂಗಿನ ಒಗ್ಗರಣೆಯನ್ನು ನೀಡಿದರೆ ರಸಂ ಪುಡಿ ಸಿದ್ಧಗೊಳ್ಳುತ್ತದೆ. ಇದರ ಸಾರು ತಯಾರಿಸಿ ಬಿಸಿ ಅನ್ನದೊಂದಿಗೆ ಸವಿದರೆ... ಆಹಾ..!

ಮೈಸೂರು ಬೋಂಡಾ
ಮೈಸೂರು ದಸರಾ ಸಂಭ್ರಮ. ಮೈಸೂರು ಅಡುಗೆಗಳನ್ನು ನಾಲಿಗೆ ಬಯಸುತ್ತದೆ. ಅದನ್ನು ತಣಿಸಲೆಂದೆ ಮೈಸೂರಿನವರು ತಿನ್ನಲು ಬಳಸುವ ಬೋಂಡಾ ಇದಾಗಿದೆ. ಮಾಡೋದು ತುಂಬಾ ಅಂದ್ರೆ ತುಂಬಾನೇ ಸಿಂಪಲ್. ಒಂದು ಬಟ್ಟಲು ಮೈದಾ, ಒಂದು ಬಟ್ಟಲು ಅಕ್ಕಿ ಹಿಟ್ಟು, ಸ್ವಲ್ಪ ಅಡುಗೆ ಸೋಡಾ, ಮೊಸರು, ಉಪ್ಪು ಸಣ್ಣಕ್ಕೆ ಕತ್ತರಿಸಿದ ಹಸಿಮೆಣಸಿನಕಾಯಿ, ಶುಂಠಿ, ಮತ್ತು ಕೊತ್ತಂಬರಿ ಸೊಪ್ಪು. ಎಲ್ಲವನ್ನೂ ನೀರು ಬೆರಸಿ ಚೆನ್ನಾಗಿ ಮಿಕ್ಸ್ ಮಾಡಿ. ದೋಸೆ ಹಿಟ್ಟಿ ಗಿಂತ ದಪ್ಪ ವಾಗಿರಲಿ ಮಿಶ್ರಣ. ಹತ್ತು ನಿಮಿಷ ಬಿಟ್ಟು ಬಿಸಿ ಎಣ್ಣೆಯಲ್ಲಿ ಕರಿದು ತೆಗೆಯಿರಿ. ಇದರ ಹೊರ ಕವಚ ಗರಿಗರಿಯಾಗಿದ್ದು, ಒಳಗಡೆ ಬ್ರೆಡ್ ತರಹ ಸಾಫ್ಟ್ ಆಗಿರುತ್ತೆ. ತಿನ್ನೋಕೂ ರುಚಿಯೇ ಸರಿ.

ಸಂಭ್ರಮದ ದಸರಾಕ್ಕೆ ಮುನ್ನುಡಿ
ಒಟ್ಟಾರೆ ಸಾಂಸ್ಕೃತಿಕ ರಾಜಧಾನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಮೈಸೂರು, ಭಾರತೀಯ ಆಹಾರ ಪದ್ಧತಿಗೆ ಮತ್ತಷ್ಟು ಕೊಡುಗೆ ನೀಡುತ್ತಿರುವುದಂತೂ ಸುಳ್ಳಲ್ಲ. ಜಗತ್ಪ್ರಸಿದ್ಧ ಮೈಸೂರು ದಸರಾ ಹೊತ್ತಲ್ಲಿ ಅರಮನೆ ನಗರಿಯ ಗತ ವೈಭವವನ್ನೂ, ಇಲ್ಲಿನ ಸಂಸ್ಕೃತಿಯನ್ನು ನೆನಪಿಸಿಕೊಳ್ಳುವ ಮೂಲಕ ಸಂಭ್ರಮದ ದಸರಾಕ್ಕೆ ಮುನ್ನುಡಿ ಬರೆಯೋಣ.
-
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
1ನೇ ತರಗತಿ ದಾಖಲಾತಿ: 6 ವರ್ಷ ತುಂಬಿರಬೇಕು ಎಂಬ ನಿಯಮವನ್ನು ಕೊಂಚ ಸಡಿಲಿಕೆ ಮಾಡಿದ ಸರ್ಕಾರ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು












Click it and Unblock the Notifications