ವಿಷಪ್ರಸಾದಕ್ಕೆ ಮತ್ತೆರೆಡು ಬಲಿ: ಸಾವಿನ ಸಂಖ್ಯೆ 13ಕ್ಕೆ ಏರಿಕೆ

ಮೈಸೂರು, ಡಿಸೆಂಬರ್ 16 : ಕಿಚುಕತ್ತಿ ಮಾರಮ್ಮನ ದೇವಾಲಯದಲ್ಲಿ ವಿಷಪ್ರಸಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಿಬ್ಬರು ಮೃತಪಟ್ಟಿದ್ದಾರೆ. ಸದ್ಯ ಮೃತಪಟ್ಟವರ ಸಂಖ್ಯೆ 13ಕ್ಕೆ
ಏರಿಕೆಯಾಗಿದೆ.

ಕಳೆದ ರಾತ್ರಿ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅಸ್ವಸ್ಥ ಮಹಿಳೆ ನಿಧನರಾಗುವ ಮೂಲಕ ಸಾವಿನ ಸರಣಿ ಹೆಚ್ಚಿದಂತಾಗಿದೆ. ಚಾಮರಾಜನಗರದ ಬಿದರವಳ್ಳಿ ಗ್ರಾಮದ ನಿವಾಸಿ ನಲಮ್ಮ (35 ) ಮೃತ ಮಹಿಳೆ. ಈಕೆ ತಮ್ಮ ಸಂಬಂಧಿಗಳ ಜೊತೆ ದೇವಸ್ಥಾನಕ್ಕೆ ಹೋಗಿ ಪ್ರಸಾದ ಸೇವಿಸಿದ್ದರು ಎನ್ನಲಾಗಿದೆ.

ಕಳೆದ ಆರು ತಿಂಗಳ ಹಿಂದೆಯಷ್ಟೆ ನಲ್ಲಮ್ಮರ ಪತಿ ಹೃದಾಯಘಾತದಿಂದ ಮೃತಪಟ್ಟಿದ್ದರು. ಇಂದು ನಲ್ಲಮ್ಮ ಮೃತಪಟ್ಟಿದ್ದು ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ.

 Number of deaths due to poisoning has risen to 13

ವಿಷಪ್ರಸಾದ ಸೇವಿಸಿದ ಪರಿಣಾಮ ಇಂದು ಭಾನುವಾರ ಬೆಳಿಗ್ಗೆ 8: 15 ಸುಮಾರಿಗೆ ಮಗೇಶ್ವರಿ (35) ಎಂಬುವವರು ಸಹ ಮೃತಪಟ್ಟಿದ್ದಾರೆ. ಮಗೇಶ್ವರಿ ಎಂ.ಜಿ ದೊಡ್ಡಿ‌ ನಿವಾಸಿಯಾಗಿದ್ದು, ಇವರನ್ನು ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸದ್ಯ ಮರಣೋತ್ತರ ಪರೀಕ್ಷೆಗೆಂದು ಶವಗಳನ್ನು ಕೆ.ಆರ್. ಆಸ್ಪತ್ರೆಗೆ ರವಾನಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+