ಸುಂದರ ಮೈಸೂರು ದಸರಾ ಮಾವುತರ ಕರಾಳ ಬದುಕಾ ಕಂಡೀರಾ?
ಬಿಸಿಲಾದರೆ ಮೈಸುಡುವ..ಮಳೆಬಂದರೆ ಸೋರುವ ಮುರುಕಲು ಗುಡಿಸಲುಗಳು..ವಿದ್ಯುತ್, ರಸ್ತೆ, ನೀರನ್ನು ಕಾಣದ ಆದಿಮಾನವರ ಬದುಕು..ಇದು ಕುಶಾಲನಗರ ಬಳಿಯ ಆನೆಕಾಡು ಆನೆ ಶಿಬಿರದಲ್ಲಿ ವಾಸ ಮಾಡುತ್ತಿರುವ ಮಾವುತರ ದಯನೀಯ ಸ್ಥಿತಿ.
ಆಧುನಿಕತೆಯಿಂದ ದೂರವಾಗಿ ಆದಿಮಾನವರಂತೆ ಯಾವುದೇ ಮೂಲಭೂತ ಸೌಲಭ್ಯವಿಲ್ಲದೆ ಬದುಕುತ್ತಿದ್ದಾರೆ. ಪ್ರತಿವರ್ಷ ಮೈಸೂರು ದಸರಾಕ್ಕೆ ಹೋಗುತ್ತಾರೆ. ಸುಮಾರು ಒಂದೂವರೆ ತಿಂಗಳ ಕಾಲ ಆನೆಗಳೊಂದಿಗೆ ಅರಮನೆಯಲ್ಲಿ ವಾಸ್ತವ್ಯ ಹೂಡುವ ಈ ಕುಟುಂಬಗಳಿಗೆ ಆಧುನಿಕ ಬದುಕಿನ ಚಹರೆಗಳೆಲ್ಲವೂ ತಿಳಿದಿದೆ. ಪ್ರತಿದಿನ ಉತ್ತಮ ಬೋಜನವೂ ಸಿಗುತ್ತದೆ. ಆದರೆ ಅಲ್ಲಿಂದ ಹಿಂತಿರುಗಿದ ಬಳಿಕ ಮತ್ತೆ ಮುರುಕಲು ಗುಡಿಸಲು, ಅದೇ ಗಂಜಿ ಅನ್ನ ಅಷ್ಟೇ..[ಮೈಸೂರಿನಲ್ಲಿ ಗಜಪಡೆಯ ತಾಲೀಮು ಹೇಗಿರುತ್ತೆ ಗೊತ್ತಾ?]
ಸರ್ಕಾರವು ಆನೆಶಿಬಿರದಲ್ಲಿರುವ ಅರಣ್ಯ ಸಿಬ್ಬಂದಿಗಳಿಗೆ ವಸತಿ ಗೃಹ, ವಿದ್ಯುತ್, ನೀರಿನ ಸೌಲಭ್ಯ ನೀಡಿದೆ. ಅಲ್ಲಿಯೇ ಆನೆಗಳನ್ನು ಸಲಹುವ ಮಾವುತರು, ಕಾವಾಡಿಗಳ ಎಂಟು ಕುಟುಂಬಗಳಿವೆ. ಇವರಿಗೆ ಗುಡಿಸಲೇ ಅರಮನೆ. ವಿದ್ಯುತ್ ಅಂತೂ ಇಲ್ಲವೇ ಇಲ್ಲ. ನೀರಿಗಾಗಿ ಒಂದು ಬೋರ್ವೆಲ್ ಇದೆ. ಆದರೆ ಬೇಸಿಗೆ ಬಂದರೆ ಅದರಲ್ಲೂ ನೀರು ಬರುವುದಿಲ್ಲ. ಹಾಗಾಗಿ ನೀರು ಹುಡುಕಿಕೊಂಡು ಕಿ.ಮೀ.ಗಟ್ಟಲೆ ಸಾಗಬೇಕು.
ಅಭಿವೃದ್ಧಿ ಮಂತ್ರ ಜಪಿಸುವ ನಮ್ಮ ಜನಪ್ರತಿನಿಧಿಗಳು ಆಧುನಿಕ ನಾಗಾಲೋಟದಲ್ಲಿ ಸಾಗುತ್ತಿರುವ ಪಟ್ಟಣದ ಮಂದಿಯನ್ನಷ್ಟೆ ನೋಡುತ್ತಿದ್ದಾರೆ. ಆದರೆ ಕಾಡಿನ ನಡುವೆ ಆಧುನಿಕ ಯುಗದಲ್ಲೂ ಆದಿ ಮಾನವರಂತೆ ಬದುಕುವ ಮಾವುತರು, ಕಾವಾಡಿಗಳು ಕಾಣಿಸುತ್ತಲೇ ಇಲ್ಲ. ಸರ್ಕಾರ ತಾರತಮ್ಯತೆ ಎಷ್ಟರ ಮಟ್ಟಿಗೆ ಇದೆ ಎಂಬುದು ಇಲ್ಲಿಗೆ ಭೇಟಿ ನೀಡಿದವರಿಗೆ ಮಾತ್ರ ತಿಳಿಯುತ್ತದೆ.

ಆನೆ ಮಾವುತರ ವಾಸವೆಲ್ಲಿ?
ಕುಶಾಲನಗರದಿಂದ ಮಡಿಕೇರಿ ಕಡೆಗೆ ತೆರಳುವಾಗ ಬಸವನಹಳ್ಳಿ ದಾಟಿ ಮುಂದೆ ಸಾಗಿದಾಗ ಆನೆಕಾಡು ಅರಣ್ಯಪ್ರದೇಶ ಎದುರಾಗುತ್ತದೆ. ಇಲ್ಲಿ ಮೇವು ತಿನ್ನುತ್ತಾ ನಿಂತ ಆನೆಗಳು, ಅರಣ್ಯ ಸಿಬ್ಬಂದಿಗಳ ವಸತಿ ಗೃಹಗಳು ಕಾಣಸಿಗುತ್ತವೆ. ಇದನ್ನು ನೋಡಿದ ತಕ್ಷಣವೇ ನಾವು ಆನೆಶಿಬಿರ, ಇಲ್ಲಿ ಆನೆ ಮಾವುತರು ನೆಲೆ ನಿಂತಿದ್ದಾರೆ ಎಂದು ನಿಸ್ಸಂಕೋಚವಾಗಿ ಹೇಳಿಬಿಡಬಹುದು.

ಮಕ್ಕಳು ಶಾಲೆಗೆ ಎಷ್ಟು ದೂರ ಸಾಗಬೇಕು?
ಅಕ್ಷರ ಕಲಿಯಲು ಮಕ್ಕಳು ಕಿ.ಮೀ.ಗಟ್ಟಲೆ ನಡೆದು ಶಾಲೆಗೆ ಹೋಗುತ್ತಾರೆ. ಆದರೆ ಈ ಮಕ್ಕಳು ಸೂರ್ಯ ಮುಳುಗುವುದರೊಳಗೆ ಓದುಬರಹ ಮುಗಿಸಬೇಕು. ವಿದ್ಯುತ್ ಇಲ್ಲದ ಕಾರಣ ಕತ್ತಲೆಯಾದ ಬಳಿಕ ಯಾವುದೂ ಸಾಧ್ಯವಿಲ್ಲ.

ಗುಡಿಸಲೇ ಇವರ ಅರಮನೆ
ಅರಣ್ಯದ ನಡುವೆ ಅಲ್ಲಲ್ಲಿ ಹರಕು, ಮುರುಕಿನ ಹೊಗೆಯಾಡುವ ಗುಡಿಸಲು, ಅದರ ಎದುರು ಕೆಲಸದಲ್ಲಿ ನಿರತರಾದ ಮಹಿಳೆಯರು, ಮಣ್ಣಿನಲ್ಲಿ ಆಟವಾಡುವ ಮಕ್ಕಳು ಕಂಡುಬರುತ್ತಾರೆ

ಆಧುನಿಕತೆ ಬದುಕು ನೋಡಿದವರಿಗೆ ಆಧುನಿಕ ಬದುಕಿಲ್ಲ
ದಸರಾ ಹಬ್ಬದಂದು ಆನೆಗಳಿಗೆ ಭರ್ಜರಿ ತಯಾರಿ ನೀಡಲು ಮೈಸೂರು ಅರಮನೆಗೆ ತೆರಳುವ ಇವರು ಆಧುನಿಕ ಬದುಕನ್ನು ಬಹಳ ಹತ್ತಿರದಿಂದ ಕಂಡವರು. ಆದರೆ ಇವರ ಬದುಕೇ ಶೋಚನೀಯ. ಕುಡಿಯಲು ನೀರಿಲ್ಲ. ಉಳಿಯಲು ಸರಿಯಾದ ನೆಲೆಯಿಲ್ಲ.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications