ಮೈಸೂರಿನ ಇನ್ಫೋಸಿಸ್ ಬಿಲ್ಡಿಂಗ್ ಗೆ ಪಾರಂಪರಿಕ ಕಟ್ಟಡದ ಗರಿ
ಮೈಸೂರು, ಮೇ 21 : ಮೈಸೂರು ಪಾರಂಪರಿಕ ನಗರ ಎಂದೇ ಹೆಸರು ಪಡೆದಿದೆ. ಈ ಹೆಸರಿಗೆ ಮತ್ತೊಂದು ಪಾರಂಪರಿಕ ಗರಿ ಸಿಗಲಿದೆ. ಹೌದು, ನಗರದ ಪ್ರತಿಷ್ಠಿತ ಸಂಸ್ಥೆಯಲ್ಲೊಂದಾದ ಇನ್ಫೋಸಿಸ್ ಕಟ್ಟಡವನ್ನು ಮಾಡರ್ನ್ ಹೆರಿಟೇಜ್ ಎಂದು ಗುರುತಿಸಲು ಈಗಾಗಲೇ ಪುರಾತತ್ವ ಹಾಗೂ ಸಂಗ್ರಹಾಲಯ ಇಲಾಖೆ ಮುಂದಾಗಿದೆ. ಕಟ್ಟಡದ ವಾಸ್ತು ಶಿಲ್ಪದ ಶೈಲಿ, ಭಾರತದ ಪಾರ್ಲಿಮೆಂಟ್ ಮಾದರಿಯಲ್ಲಿದ್ದು ಈ ಮಾನದಂಡವನ್ನಿಟ್ಟುಕೊಂಡು ಪುರಾತತ್ವ ಮತ್ತು ಸಂಗ್ರಹಾಲಯ ಇಲಾಖೆ ಆಧುನಿಕ ಪಾರಂಪರಿಕ ಕಟ್ಟಡ ಎಂಬ ಸ್ಥಾನ ನೀಡಿ ಗೌರವಿಸಲು ಸಜ್ಜಾಗಿದೆ.
ಈ ಕುರಿತಾಗಿ ಏಪ್ರಿಲ್ ಮೊದಲ ವಾರದಲ್ಲಿ ತಂಡವು ಸಮೀಕ್ಷೆ ನಡೆಸಿದ್ದು, ತಾಂತ್ರಿಕ ತಜ್ಞರು ಈ ಕುರಿತಾಗಿ ಹೆಚ್ಚುವರಿ ಪರಿಶೀಲನೆ ನಡೆಸುತ್ತಿದ್ದಾರೆ. ನಂತರ ಮೈಸೂರು ಜಿಲ್ಲಾಧಿಕಾರಿ ಅಭಿರಾಂ ಜಿ ಶಂಕರ್ ನೇತೃತ್ವದ ಸಮಿತಿ ಇದನ್ನು ಪುನರ್ ಪರಿಶೀಲಿಸಿ ಆಯ್ಕೆ ಮಾಡಲಿದೆ. ಇನ್ಫೋಸಿಸ್ ಕಟ್ಟಡವನ್ನು ಪಾರಂಪರಿಕ ಕಟ್ಟಡವೆಂದು ಘೋಷಣೆ ಮಾಡಿದಲ್ಲಿ ಪುರಾತತ್ವ ಮತ್ತು ಸಂಗ್ರಹಾಲಯ ಇಲಾಖೆಯ ವತಿಯಿಂದ ನಡೆಯುವ ಅನೇಕ ಕಾರ್ಯಕ್ರಮಗಳು ಈ ವ್ಯಾಪ್ತಿಗೆ ಬರಲಿದೆ.
ಪಾರಂಪರಿಕ ನಡಿಗೆ ಹಾಗೂ ದಸರೆಯ ಕೆಲವು ಕಾರ್ಯಕ್ರಮಗಳನ್ನು ಕೂಡ ಇಲ್ಲಿ ಮುಂದಿನ ದಿನಗಳಲ್ಲಿ ನಡೆಸಬಹುದಾಗಿದೆ. ಅಲ್ಲದೆ ನಗರದ ಎಲ್ಲ ವಾರ್ಡ್ ಗಳಲ್ಲಿ ಸಹ ಪಾರಂಪರಿಕ ಕಟ್ಟಡ ಗುರುತಿಸುವ ಸಮೀಕ್ಷೆಯನ್ನು ಇಲಾಖೆ ಕೈಗೊಂಡಿದ್ದು, 450 ಕಟ್ಟಡಗಳನ್ನು ಈಗಾಗಲೇ ಗುರುತಿಸಿದೆ .ಪುರಾತತ್ತ್ವ ಮತ್ತು ಸಂಗ್ರಹಾಲಯ, ಪಾರಂಪರಿಕ ಇಲಾಖೆ ಉಪ ನಿರ್ದೇಶಕಿ ನಿರ್ಮಲಾ ಮಠಪತಿ, ಜಿಲ್ಲಾ ಪಾರಂಪರಿಕ ಸಮಿತಿ ಸದಸ್ಯ ಈಚನೂರು ಕುಮಾರ್ ಸೇರಿದಂತೆ ತಜ್ಞರ ಸಮಿತಿಯು ಸಮೀಕ್ಷೆ ನಡೆಸುತ್ತಿದೆ.

ಮೈಸೂರಿನ 45 ವಾರ್ಡ್ ಗಳಲ್ಲಿ ಸಮೀಕ್ಷೆ ನಡೆಸಲಾಗುತ್ತಿದ್ದು, 450 ಕಟ್ಟಡಗಳನ್ನು ಗುರುತಿಸಿದೆ. ಅದರಲ್ಲೂ 500 ವರ್ಷ ಪೂರೈಸಿರುವ ಅರಳಿಕಟ್ಟೆ, ಕೊಳಗಳನ್ನು, ವಸ್ತುಗಳನ್ನು ಗುರುತಿಸಿ ಅವುಗಳಿಗೆ ವಿಶೇಷ ಸ್ಥಾನಮಾನ ನೀಡಲು ಮುಂದಾಗಿದೆ.
-
Sachin Tendulkar: ಅಭಿಷೇಕ್ ಶರ್ಮಾಗೆ ಕ್ರಿಕೆಟ್ ದೇವರು ಸಚಿನ್ ತೆಂಡ್ಯೂಲ್ಕರ್ ವಿಶೇಷ ಸಂದೇಶ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂಬ ಮಾತಿನಂತೆ ನಡೆದುಕೊಂಡ ಯುವರಾಜ್ ಸಿಂಗ್ ಶಿಶ್ಯ ಅಭಿಷೇಕ್ ಶರ್ಮಾ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Property: ಬೆಂಗಳೂರಿನ 510 ಕೋಟಿ ಮೌಲ್ಯದ 14 ಎಕರೆ ಭೂಮಿ ವಶಕ್ಕೆ ಪಡೆದ ಜಿಬಿಎ, ಕಾರಣವೇನು -
Jaggery: ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್, ಬಣ್ಣ, ಸಕ್ಕರೆ ಮಿಶ್ರಣ: ಪರಿಶೀಲನೆ ಮಾಡುವ ಸರಳ ವಿಧಾನಗಳು -
ಟಿ20 ವಿಶ್ವಕಪ್ 2026 ಭಾರತದ ಮುಡಿಗೆ: ಬಾಲ ಮುದುರಿಕೊಂಡ 'ಸೈಲೆಂಟ್' ಸ್ಯಾಂಟ್ನರ್












Click it and Unblock the Notifications