Get Updates
Get notified of breaking news, exclusive insights, and must-see stories!

ವೀಕೆಂಡ್ ವಿಥ್ ರಮೇಶ್ ಕಾರ್ಯಕ್ರಮಕ್ಕೆ ಭೈರಪ್ಪ ಬರಲಿ: ಪ್ರತಾಪ್ ಸಿಂಹ

ಜನಪ್ರಿಯ ಟಿವಿ ಶೋ ವೀಕೆಂಡ್ ವಿಥ್ ರಮೇಶ್ ಕಾರ್ಯಕ್ರಮಕ್ಕೆ ನಮ್ಮ ಹೆಮ್ಮೆಯ ಲೇಖಕರಾದ ಎಸ್ಎಲ್ ಭೈರಪ್ಪನವರನ್ನು ಕರೆಸಿ ಎಂದು ಒತ್ತಾಯಮಾಡೋಣವೇ? ಒಪ್ಪಿಸುವ ದುಸ್ಸಾಹಸಕ್ಕೆ ನಾನೇ ಕೈ ಹಾಕುತ್ತೇನೆ ಎಂದ ಸಂಸದ ಪ್ರತಾಪ್ ಸಿಂಹ.

ಮೈಸೂರು, ಮೇ 03: ಜನಪ್ರಿಯ ಟಿವಿ ಶೋ ವೀಕೆಂಡ್ ವಿಥ್ ರಮೇಶ್ ಕಾರ್ಯಕ್ರಮಕ್ಕೆ ನಮ್ಮ ಹೆಮ್ಮೆಯ ಲೇಖಕರಾದ ಎಸ್ಎಲ್ ಭೈರಪ್ಪನವರನ್ನು ಕರೆಸಿ ಎಂದು ಒತ್ತಾಯಮಾಡೋಣವೇ? ಒಪ್ಪಿಸುವ ದುಸ್ಸಾಹಸಕ್ಕೆ ನಾನೇ ಕೈ ಹಾಕುತ್ತೇನೆ ಎಂದು ಮೈಸೂರು ಹಾಗೂ ಕೊಡಗು ಸಂಸದ ಪ್ರತಾಪ್ ಸಿಂಹ ಅವರು ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.

ಪ್ರತಾಪ್ ಸಿಂಹ ಅವರು ಈ ಸಲಹೆಯನ್ನು ಬೆಳಗಾವಿಯ ವಿವೇಕ್ ಎಂಬುವರು ನೀಡಿದ್ದು, ನಾನು ಈ ಅಭಿಯಾನವನ್ನು ಆರಂಭಿಸುತ್ತೇನೆ ಎಂದು ಹೇಳಿಕೊಂಡಿದ್ದಾರೆ.

Mysuru-Kodagu MP Pratap Simha bats for SL Bhyrappa should appear as guest in WWR show

ಪ್ರತಾಪ್ ಅವರ ಪೋಸ್ಟ್ ಗೆ ಭಾರಿ ಪ್ರತಿಕ್ರಿಯೆಗಳು ಹರಿದು ಬರುತ್ತಿದ್ದು, ಬಹುತೇಕರು ಸರಸ್ವತಿ ಸಮ್ಮಾನ್ ಪುರಸ್ಕೃತ ಭೈರಪ್ಪ ಅವರ ಜೀವನಗಾಥೆಯನ್ನು ನಟ ರಮೇಶ್ ನಿರೂಪಣೆಯಲ್ಲಿ ಜೀ ಟಿವಿಯ 'ವೀಕೆಂಡ್ ವಿಥ್ ರಮೇಶ್' ಶೋ ನಲ್ಲಿ ನೋಡಲು ಬಯಸಿದ್ದಾರೆ. ಇದಕ್ಕೆ ಓದುಗರು ನೀಡಿರುವ ಪ್ರತಿಕ್ರಿಯೆಗಳು ಇಲ್ಲಿವೆ:

Sharanu Bandi : ಇಂತಹ ಮಹಾನ್ ವ್ಯಕ್ತಿಯನ್ನು ಅಲ್ಲಿಗೆ ಕರೆಸಿದರೆ ಅ program ನ ಸಾರ್ಥಕತೆ ಇನ್ನೂ ಜಾಸ್ತಿ ಆಗುತ್ತದೆ ಅವರ ಜೀವಾನದ ಬಗ್ಗೆ ತಿಳಿಯಲು ನಾವು ತುಂಬ ಉತ್ಸುಕರಾಗಿದ್ದೇವೆ.

Raveen Gulipura : Yes.. ದಯವಿಟ್ಟು ಒತ್ತಾಯ ಮಾಡಿ.. ನಾವು ಅವರ ಜೀವನದ ಬಗ್ಗೆ ಹಾಗೂ ಅವರ ವಿಚಾರಗಳನ್ನ ತಿಳಿದು ಕೊಳ್ಳಲು ತುಂಬಾ ಆಸಕ್ತರಾಗಿದ್ದೇವೆ..

Ganesh Prasad Preetham : ಸಾರ್ ದಯವಿಟ್ಟು ಆ ಕೆಲ್ಸ ಮಾಡಿ. ನಮ್ಮ ಭೈರಪ್ಪನವರು ಕೂತರೆ ಆ ಕುರ್ಚಿಗೂ ಒಂದು ತೂಕ ಬರತ್ತೆ..

Raki Raghu : Yes everything was right with weekend with ramesh when jayanth kaykini came ,but he also made comments bout people's anger against intellectuals,only in that part he sounded like pseudo ,writing poems ,stories n,novels is right but to tell that they are beyond criticism for their absurd views is wrong.

Kumar Gowda : ನಾನು ಗಮನಿಸಿದ ವಿಷಯ ಏನೆಂದರೆ ಭೈರಪ್ಪನವರನ್ನ ಕೆಲವರು "ಮಹಾನ್ ವೆಕ್ತಿ ಎಂದು ಹೇಳುತಿದ್ದಾರೆ ಆದರೆ ಒಂದಂತಗತು ನಿಜ ಭೈರಪ್ಪ ರವರು ಅವರನ್ನ ಅವರು ಎಂದಿಗೂ ಮಹಾನ್ ಎಂದೋ ಅಥವ ಮೇರು ವೆಕ್ತಿ ಎಂದೋ ಅಂದುಕೊಂಡಿಲ್ಲ ನಿಜಕ್ಕು ಅವರು ಸರಳ ಸಜ್ಜನಿಕೆಯ ವೆಕ್ತಿತ್ವ ಮತ್ತು ಅವರು ಬೇರವರಿಗಿಂತ ದೊಡ್ಡವನು ಎಂದು ಕೊಳದ ಹಾಲಿನಂತಹ ಮನಸ್ಸು

Lohith BN: ಎಸ್ ಎಲ್ ಬಿ ಅವರ ಅಭಿಪ್ರಾಯ ಎಷ್ಟೂ ಬಾರಿ ತಿಳಿಸಿದ್ದಾರೆ... ಎಲ್ಲರಿಗೂ ಗೊತ್ತಿರುವ ಸಂಗತಿಗಳು... ಬೇಡ ಅನ್ಸುತ್ತೆ...

Dharani Basavarajappa : ಯವಾಧೋ ಒಂಧು ಚಾನಲ್ ಮುಂದೇ ಬೈರಪ್ಪ ಅಂಥ ಸಾಹಿತಿ ಕೈ ಕಟ್ಟಿ ನಿಲ್ಬೇಕ ಸ್ವಾಮಿ ?, ಮರ್ಯಾಧೆ ತರೋ ಕೆಲ್ಸ ಅಲ್ಲ ಇದು

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+