ಕರಾವಳಿ ರಂಗಾಯಣ ನಿರ್ದೇಶಕರಾಗ್ತಾರಾ ಮೈಸೂರಿನ ಮೈಮ್ ರಮೇಶ್ ?
ಮೈಸೂರು, ಜನವರಿ 17: ಕರಾವಳಿ ರಂಗಾಯಣದ ನಿರ್ದೇಶಕರಾಗಿ ರಂಗಭೀಷ್ಮ ಬಿ.ವಿ. ಕಾರಂತರ ನೇರ ಶಿಷ್ಯರೂ ಆದ ಮೈಸೂರು ರಂಗಾಯಣದ ಹಿರಿಯ ಕಲಾವಿದ ಮೈಮ್ ರಮೇಶ್ ಅವರ ಹೆಸರು ಮುಂಚೂಣಿಯಲ್ಲಿದೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಜಯಮಾಲಾ ಅವರು ಉಡುಪಿಯಲ್ಲಿ ಕರಾವಳಿ ರಂಗಾಯಣ ಆರಂಭಕ್ಕೆ ವಿಶೇಷ ಒತ್ತು ನೀಡಿರುವ ಸಂದರ್ಭದಲ್ಲಿ ರಂಗ ಸಮಾಜ ಕರಾವಳಿ ರಂಗಾಯಣದ ನಿರ್ದೇಶಕರಾಗಿ ಮೈಮ್ ರಮೇಶ್ ಮತ್ತು ಎನ್ಎಸ್ಡಿಯ ಸುರೇಶ್ ಆನಗಳ್ಳಿ ಹೆಸರನ್ನು ಅಂತಿಮಗೊಳಿಸಿದೆ.
ಕರಾವಳಿ ರಂಗಾಯಣದ ನಿರ್ದೇಶಕರನ್ನಾಗಿ ಮೈಮ್ ರಮೇಶ್ ಅವರನ್ನು ನಿಯೋಜಿಸಬೇಕೆಂದು ಮೈಸೂರು ಮತ್ತು ಕರಾವಳಿ ಭಾಗದ ರಂಗಭೂಮಿಯ ಹಿರಿಯ ಕಲಾವಿದರು ರಂಗ ಸಮಾಜವನ್ನು ಒತ್ತಾಯಿಸಿದ್ದಾರೆ. ಮೈಮ್ ರಮೇಶ್ ಅವರು 30 ವರ್ಷಗಳಿಂದ ರಂಗಭೂಮಿಯಲ್ಲಿ ದುಡಿದು ರಂಗಭೂಮಿಯ ಒಳ-ಹೊರಗನ್ನು ಬಲ್ಲವರು.

ಸಾಮುದಾಯಿಕವಾಗಿ ರಂಗಭೂಮಿಯನ್ನು ಕಟ್ಟಬಲ್ಲ ಸಾಮರ್ಥ್ಯವುಳ್ಳವರು. ಅಲ್ಲದೇ, ರಂಗಾಯಣದಲ್ಲಿ ಕರ್ತವ್ಯ ನಿರ್ವಹಿಸುತ್ತಲೇ ಕರಾವಳಿ ಭಾಗದಲ್ಲಿ ರಂಗಭೂಮಿ ಅಭಿವೃದ್ಧಿಗಾಗಿ ಶ್ರಮಿಸಿದವರು. ರಂಗಾಯಣ ಕಟ್ಟುವುದು ಹೇಗೆಂದು ಮೈಮ್ ರಮೇಶ್ ಗೆ ತಿಳಿದಿದೆ. ರಂಗಭೂಮಿಗೆ ಬೇಕಾದ ಸೂಕ್ಷ್ಮತೆಯೂ ಅವರಲ್ಲಿದೆ.
ಬರೀ ಡಿಗ್ರಿ ಪಡೆದಿರುವುದನ್ನು ಮಾನದಂಡವಾಗಿಸಿಕೊಂಡು ನಿರ್ದೇಶಕ ಸ್ಥಾನಕ್ಕೆ ಆಯ್ಕೆ ಮಾಡುವುದು ಸರಿಯಲ್ಲ. ಕರಾವಳಿ ರಂಗಾಯಣಕ್ಕೆ ಮೈಮ್ ರಮೇಶ್ ನಿರ್ದೇಶಕರಾದರೆ ಖಂಡಿತ ಸಂತೋಷವಿದೆ ಎಂದು ಹಿರಿಯ ರಂಗಕರ್ಮಿ ತಿಳಿಸಿದ್ದಾರೆ.
ನಾಲ್ಕು ರೆಪರ್ಟರಿ
ಬಿ.ವಿ.ಕಾರಂತರು 1989 ರಲ್ಲಿ ಮೈಸೂರಿನಲ್ಲಿ ರಂಗಾಯಣ ಸ್ಥಾಪಿಸಿದಾಗ ನಾಲ್ಕು ರೆಪರ್ಟರಿಗಳನ್ನು ಸ್ಥಾಪಿಸುವ ಉದ್ದೇಶ ಹೊಂದಿದ್ದರು. ಕರಾವಳಿ, ಮಲೆನಾಡು, ಹೈದರಾ ಬಾದ್ ಭಾಗಗಳಲ್ಲಿ ರಂಗಾಯಣ ಸ್ಥಾಪಿಸಿ ಪ್ರಾದೇಶಿಕ ಭಾಷೆ, ಸಂಸ್ಕೃತಿ ಸೊಗಡನ್ನು ಜೀವಂತವಾಗಿಸುವ ಆಶಯ ಹೊಂದಿದ್ದರು. ಈಗ ಕರಾವಳಿ ಭಾಗದ ರಂಗಾಯಣವನ್ನು ಉಡುಪಿಯಲ್ಲಿ ಸ್ಥಾಪಿಸಲು ರಂಗಾಯಣ ನಿರ್ಧರಿಸಿದೆ.
-
Train Delay: ರೈಲು ಪ್ರಯಾಣಿಕರೇ ಎಚ್ಚರ! ನಾಳೆ ಬೆಂಗಳೂರು-ಚೆನ್ನೈ ನಡುವಿನ ಸಂಚಾರದಲ್ಲಿ ಭಾರಿ ವ್ಯತ್ಯಯ -
ಕಾಂತಾರ ವಿವಾದ: ಮೈಸೂರು ಚಾಮುಂಡಿ ಬೆಟ್ಟಕ್ಕೆ ಬರ್ತೀನಿ, ಕ್ಷಮೆಯೂ ಕೇಳ್ತೀನಿ ಎಂದ ನಟ ರಣವೀರ್ ಸಿಂಗ್ -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
LPG: ಗೃಹಬಳಕೆ ಸಿಲಿಂಡರ್ ಬಳಕೆದಾರರಿಗೆ ಬಿಗ್ ಅಪ್ಡೇಟ್: ಎಲ್ಪಿಜಿ ಅಭಾವ ನೀಗಿಸಲು ಕೇಂದ್ರದಿಂದ ಹೊಸ ಪ್ಲಾನ್ -
Rain: ಮುಂದಿನ 3 ಗಂಟೆಗಳಲ್ಲಿ ಕರ್ನಾಟಕದ 13 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ












Click it and Unblock the Notifications