ಮೈಸೂರಿನಲ್ಲಿ ಕಸ ಹಾಕುವ ಸ್ಥಳದಲ್ಲಿ ಶಾಂತಿ ಸಮರ
ಮೈಸೂರು, ಜನವರಿ 18 : ಕಸ ಹಾಕಬೇಡಿ ಎಂದು ಹೇಳಿದರೂ ಅದೇ ಜಾಗದಲ್ಲಿ ಕಸ ಹಾಕುವವರ ಮುಂದೆ ಶಾಂತಿ ಸಮರ ಸಾರಿದ ನಗರ ಪಾಲಿಕೆ ಸದಸ್ಯ ಬೋರ್ಡ್ ಹಿಡಿದು ಕಸಹಾಕುವ ಸ್ಥಳದಲ್ಲಿ ಕುಳಿತಿದ್ದಾರೆ.
ಮೈಸೂರಿನ ವಿದ್ಯಾರಣ್ಯಪುರಂನ ೯ನೇ ಮುಖ್ಯರಸ್ತೆಯ ಸಾರ್ವಜನಿಕ ಹಾಸ್ಟೆಲ್ ರೋಡ್ ನಲ್ಲಿ ಪಾಲಿಕೆಯವರು ಕಸ ಹಾಕಬೇಡಿ' ಇಲ್ಲಿ ಮೂತ್ರ ವಿಸರ್ಜನೆ ಮಾಡಬೇಡಿ ಅಂತ ಪಾಲಿಕೆಯವ್ರು ಗೋಡೆಗಳ ಮೇಲೆ ಬರೆಸಿದ್ದಾರೆ. ಅದರೆ ಜನ ಮಾಡಿದ್ದನೇ ಮಾಡುತ್ತಾರೆ ಹೀಗಾಗಿ ಯೋಚಿಸಿದ ಮೈಸೂರಿನ ನಗರ ಪಾಲಿಕೆ ವಾರ್ಡ್ ನಂಬರ್ ೧೦ರ ಸದಸ್ಯ ಸುನೀಲ್ ಕಸ ಹಾಕುವ ಜಾಗದಲ್ಲಿಯೇ ಕುಳಿತು ಯಾರು ಕಸ ಹಾಕಬಾರದೆಂದು ಜಾಗೃತಿ ಮೂಡಿಸುತ್ತಾ, ಗಾಂಧಿ ತತ್ವದ ಮೂಲಕ ಗಾಂಧಿಗಿರಿ ಶುರು ಮಾಡಿದ್ದಾರೆ.[ಸ್ವೀಡನ್ ನಲ್ಲಿ ಕಸಕ್ಕೆ ಬೇಡಿಕೆ, ಬೇರೆ ದೇಶದಿಂದಲೂ ಆಗತ್ತೆ ಆಮದು]

ಕಸ ಹಾಕುವ ಸ್ಥಳದಲ್ಲೇ ಬೋರ್ಡ್ ಹಿಡಿದು ಕುಳಿತ ಸುನೀಲ್..
ಪಾಲಿಕೆ ಸದಸ್ಯ ಸುನೀಲ್ ಆ ಸ್ಥಳದಲ್ಲಿ ಕಸವನ್ನ ತೆಗೆಸಿ, ಆ ಸ್ಥಳವನ್ನ ಶುಚಿಗೊಳಿಸಿ ಅದೇ ಸ್ಥಳದಲ್ಲಿ ಕಸ ಹಾಕಬೇಡಿ ಎಂದು ಬೋರ್ಡ್ ಹಿಡಿದು ಕುಳಿತ್ತಿದ್ದಾರೆ. ಅದು ಬೆಳಗ್ಗೆ, ಮಧ್ಯಾಹ್ನ, ಸಂಜೆ ಹಾಗೂ ರಾತ್ರಿ ಅಂತ ನಾಲ್ಕೋತ್ತು ಕುಳಿತಿರುತ್ತಾರೆ. ಆದರೆ ಈ ವೇಳೆ ಯಾರು ಕಸ ಹಾಕಲು ಬಂದಿಲ್ಲ.

ಇಷ್ಟೇಲ್ಲ ಕಟ್ಟುನಿಟ್ಟಾಗಿ ಸುನೀಲ್ ಮಾಡಿದ್ರು ಕೆಲ ಅವಿವೇಕಿಗಳು ಸುನೀಲ್ ಇಲ್ಲದ ವೇಳೆ ಕಸ ಸುರಿದು ಏಸ್ಕೇಪ್ ಆಗಿದ್ದಾರೆ. ಕೊನೆಗೆ ಇದನ್ನು ಕಂಡ ಸುನೀಲ್ ಕಸವನ್ನು ಮತ್ತೆ ತೆಗಿಸಿದ್ದಾರೆ. ಆದರೆ ನಾನೂ ಮಧ್ಯರಾತ್ರಿ 12 ಗಂಟೆಯವರೆಗೂ ಇಲ್ಲಿಯೇ ಇರುತ್ತೇನೆ. ಪುನ: ಬೆಳಗ್ಗೆ 6 ಗಂಟೆಗೆ ಬಂದು ಅದೇ ಜಾಗದಲ್ಲಿ ಕೂರುತ್ತೇನೆ. ಕಂಡಕಂಡಲ್ಲಿ ಕಸ ಸುರಿಯುವ ಜನರಿಗೆ ಬುದ್ದಿ ಬರುವವರೆಗೂ ಈ ಗಾಂಧಿಗಿರಿ ಮುಂದುವರೆಯಲಿದೆ ಅಂತಾರೆ ಸುನೀಲ್..

ಸುನೀಲ್ ಅವರು ಇತ್ತ ಬೋರ್ಡ್ ಹಿಡಿದು ಜಾಗೃತಿ ಮೂಡಿಸುತ್ತಿದ್ದರೆ, ಹಿಂಬದಿಯಿಂದ ಬಂದ ವ್ಯಕ್ತಿಯೊಬ್ಬರು ಕಸ ಸುರಿದು ಏಸ್ಕೇಪ್ ಆಗಲು ಮುಂದಾದ ವೇಳೆ ಆ ಕಸವನ್ನ ಎತ್ತಿ ಸುನೀಲ್ ಆ ವ್ಯಕ್ತಿಗೆ ಹೀಗೆಲ್ಲ ಮಾಡದಂತೆ ಮನವಿ ಮಾಡಿದ್ರು. ಅಲ್ಲದೆ ಅವರಿಗೆ ತಿಳಿವಳಿಕೆ ಮೂಡಿಸಿದರು.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್












Click it and Unblock the Notifications