ಇದೆಂಥಾ ದೌರ್ಜನ್ಯ: ಗೀಕಳ್ಳಿಯ ಈ ಕುಟುಂಬಕ್ಕೆ ಕಂಟಕವಾಯ್ತು ಬಹಿಷ್ಕಾರ
ಮೈಸೂರು, ಆಗಸ್ಟ್ 1 : ಅಭಿವೃದ್ಧಿಯ ಕನಸು ಕಾಣುತ್ತಿರುವ ಭಾರತ ದೇಶದಲ್ಲಿ ಇನ್ನೂ ಬಹಿಷ್ಕಾರ ಎಂಬ ಸಾಮಾಜಿಕ ಪಿಡುಗು ಮುಂದುವರಿದೇ ಇದೆ. ನಂಜನಗೂಡು ತಾಲೂಕಿನ ಗೀಕಳ್ಳಿಯಲ್ಲಿ ಈ ಪೆಡಂಭೂತ ಕಾಣಿಸಿಕೊಂಡು ಬಡ ಕುಟುಂಬವೊಂದನ್ನು ನರಳಿಸುತ್ತಿದೆ.
ಹೌದು, ನೀವು ನಂಬಲೇಬೇಕು. ಹಲವು ತಿಂಗಳಿಂದ ಗ್ರಾಮದಲ್ಲಿ ಬಹಿಷ್ಕಾರಕ್ಕೊಳಗಾಗಿ ನೊಂದ ಕುಟುಂಬವೊಂದು ಬದುಕು ದುರ್ಬರವೆನಿಸಿದಾಗ ತಾಲೂಕು ಆಡಳಿತಕ್ಕೆ ಕಡೆಗೂ ದೂರು ನೀಡುವ ಧೈರ್ಯ ಮಾಡಿದೆ.
ತನ್ನ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಲಾಗಿದೆ ಎಂದು ಗೀಕಳ್ಳಿ ಗ್ರಾಮದ ಮಹದೇವು, ಪತ್ನಿಯೊಂದಿಗೆ ಪಟ್ಟಣಕ್ಕೆ ಬಂದು ತಹಸೀಲ್ದಾರರಿಗೆ ಲಿಖಿತವಾಗಿ ದೂರು ನೀಡಿದ್ದಾರೆ.

"ಕೂಲಿ ಕೆಲಸ ಮಾಡುವಲ್ಲಿ ಯಜಮಾನರು ಇಲ್ಲಸಲ್ಲದ ಮಾತನಾಡುತ್ತಾರೆ. ಮಾಡಲಾಗದಂತಹ ಕೆಲಸಗಳನ್ನು ಹೇಳುತ್ತಾರೆ. ಅವರ ಸೂಚನೆಗಳನ್ನು ನಾನು ಕೇಳಲಿಲ್ಲ ಎಂಬ ಏಕೈಕ ಕಾರಣವನ್ನೇ ಮುಂದಿಟ್ಟುಕೊಂಡು ದ್ವೇಷ ಸಾಧಿಸಿದ್ದಾರೆ. ಗ್ರಾಮದ ಮುಖಂಡರನ್ನು ಒಟ್ಟಾಗಿಸಿಕೊಂಡು ನಮ್ಮ ಕುಟುಂಬಕ್ಕೆ ಬಹಳ ದಿನಗಳಿಂದ ಬಹಿಷ್ಕಾರ ಹಾಕಿದ್ದಾರೆ" ಎಂದು ಮಹದೇವ ಅವರು ದೂರಿನಲ್ಲಿ ವಿವರಿಸಿದ್ದಾರೆ.
ಮಹದೇವು ಗೀಕಳ್ಳಿಯಲ್ಲೇ ಕೂಲಿ ಕೆಲಸ ಮಾಡಿಕೊಂಡು ಪತ್ನಿ, ಇಬ್ಬರು ಮಕ್ಕಳೊಂದಿಗೆ ಜೀವನ ಸಾಗಿಸುತ್ತಿದ್ದಾರೆ. ಗಂಡ ಹೆಂಡತಿ ಕೂಲಿ ಕೆಲಸ ಮಾಡಿದರಷ್ಟೇ ಕುಟುಂಬದ ನಿರ್ವಹಣೆ ಸಾಧ್ಯ. ಈಗ ಸಾಮಾಜಿಕ ಬಹಿಷ್ಕಾರಕ್ಕೆ ಒಳಗಾಗಿರುವುದರಿಂದ ಯಾರೊಬ್ಬರೂ ಅವರನ್ನು ಕೂಲಿ ಕೆಲಸಕ್ಕೆ ಕರೆಯುತ್ತಿಲ್ಲ.
ಅಲ್ಲದೇ, ಗ್ರಾಮದಲ್ಲಿನ ಉತ್ಸವ ಮತ್ತಿತರ ಸಮಾರಂಭಗಳಿಗೂ ಅವರ ಕುಟುಂಬದವರನ್ನು ಸೇರಿಸುತ್ತಿಲ್ಲ. ಗ್ರಾಮದ ಯಾರೊಬ್ಬರೂ ಹಬ್ಬ-ಹರಿದಿನಗಳಿಗೆ ನಮ್ಮ ಮನೆಗೆ ಬರುತ್ತಿಲ್ಲ, ಅವರ ಮನೆಗೂ ನಮ್ಮನ್ನು ಸೇರಿಸಿಕೊಳ್ಳುತ್ತಿಲ್ಲ ಎಂದು ಮಹದೇವು ಮತ್ತು ಪತ್ನಿ ಅಲವತ್ತುಕೊಂಡಿದ್ದಾರೆ.
ಮಹದೇವು ಕಳೆದ 5 ವರ್ಷಗಳಿಂದ ತಮ್ಮದೇ ಸಮುದಾಯದ ಜನರಿಂದ 25 ಸಾವಿರ ಹಣ ನೀಡಿ ನಿವೇಶನವೊಂದನ್ನು ಪಡೆದಿದ್ದರು. ಆದರೆ ಗ್ರಾಮದ ಕೆಲವು ಮುಖಂಡರು ನಿವೇಶನವನ್ನು ರಿಜಿಸ್ಟರ್ ಮಾಡಲು ಇನ್ನೂ ಹೆಚ್ಚಿನ ಹಣವನ್ನು ನೀಡಬೇಕು. ಸ್ವಲ್ಪ ಹಣವನ್ನು ಪಂಚಾಯತಿಗೂ ನೀಡಬೇಕು ಎಂದು ಕುಟುಂಬದ ಮೇಲೆ ಒತ್ತಡ ಹೇರಿದ್ದರು.
ಆದರೆ ಮಹದೇವ ಕುಟುಂಬ ಇದಕ್ಕೆ ಒಪ್ಪದಿದ್ದಾಗ ಸಾಮಾಜಿಕ ಬಹಿಷ್ಕಾರವನ್ನು ಕಳೆದ 2 ವರ್ಷಗಳಿಂದ ಹಾಕಿದ್ದಾರಂತೆ. ಸ್ವಜಾತಿಯವರೇ ನಮ್ಮ ಕುಟುಂಬಕ್ಕೆ ಬಹಿಷ್ಕಾರ ಹಾಕಿ ಶಿಕ್ಷೆ ನೀಡುತ್ತಿದ್ದಾರೆ. ಅದನ್ನು ತಪ್ಪಿಸಿ ನ್ಯಾಯ ಕೊಡಿಸಿಕೊಡಬೇಕೆಂದು ಮಹದೇವು ಮತ್ತು ಪತ್ನಿ ತಹಸೀಲ್ದಾರ್ ಅವರಿಗೆ ಮನವಿ ಮಾಡಿದ್ದಾರೆ.
ಪ್ರಜಾಪ್ರಭುತ್ವ ದೇಶದಲ್ಲಿ ಹೀಗೆ ಬಹಿಷ್ಕಾರ ಹಾಕುವುದು ಎಷ್ಟು ಸರಿ? ಗಾಮದಲ್ಲಿ ಸುರಕ್ಷಿತವಾಗಿ ಬದುಕಬೇಕಾದ ನಮ್ಮ ಕುಟುಂಬ ಬಹಿಷ್ಕಾರ ಕಾರಣ ಮಾನಸಿಕ ಹಿಂಸೆ ಅನುಭವಿಸುವಂತಾಗಿದೆ.
ಗ್ರಾಮದಲ್ಲಿ ದೈನಂದಿನ ಬದುಕಿನಲ್ಲಿ ನೆರೆಹೊರೆಯವರ ಜತೆ ಸೇರಲಾಗದೇ ಕುಗ್ಗಿ ಹೋಗಿದ್ದೇವೆ ಎಂದು ಅಳಲು ತೋಡಿಕೊಂಡಿದ್ದಾರೆ. ಬಹಿಷ್ಕಾರವೆಂಬ ಅಮಾನವೀಯ ಶಿಕ್ಷೆಯಿಂದ ತಮ್ಮ ಕುಟುಂಬವನ್ನು ಪಾರು ಮಾಡಿ ಎಂದು ತಾಲೂಕು ದಂಡಾಧಿಕಾರಿಯೂ ಆದ ತಹಸಿಲ್ದಾರ್ ದಯಾನಂದ ಅವರಲ್ಲಿ ಮಹದೇವ ಮನವಿ ಮಾಡಿದ್ದಾರೆ.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications