'ಕುಕ್ಕರಹಳ್ಳಿ ಕೆರೆಯಲ್ಲಿ ಬದುಕು' ಛಾಯಾ ಚಿತ್ರಕ್ಕೆ ಆಹ್ವಾನ, ಮೇ 5 ಕೊನೇ ದಿನ
ಮೈಸೂರು, ಮೇ 2: ಮೈಸೂರಿನವರಿಗೆ ಕುಕ್ಕರಹಳ್ಳಿ ಕೆರೆಯ ಬಗ್ಗೆ ಹೇಳಬೇಕಿಲ್ಲ. ಅದು ನಿರಂತರವಾಗಿ ಜನರನ್ನು ತನ್ನತ್ತ ಸೆಳೆಯುತ್ತನೇ ಇರುವ ಸುಂದರ ತಾಣ. ನಿತ್ಯ ನೂರಾರು ನಾಗರಿಕರು ಮೈಸೂರಿನ ಎಲ್ಲಾ ಮೂಲೆಗಳಿಂದ ವಾಯುವಿಹಾರಕ್ಕೆಂದು ಇಲ್ಲಿಗೆ ಬರುತ್ತಾರೆ. ಅಲ್ಲಿನ ನಿಸರ್ಗ ಸೌಂದರ್ಯ ಅಷ್ಟು ಅದ್ಭುತ. ವಿವಿಧ ಜಾತಿಯ ಪಕ್ಷಿ, ಪ್ರಾಣಿ, ಚಿಟ್ಟೆ, ಕೀಟ, ಮೀನು ,ಮೊಸಳೆ, ನರಿ, ನವಿಲುಗಳಿಗೆ ನೆಲೆ ನೀಡಿದ ಕುಕ್ಕರಹಳ್ಳಿ ಕೆರೆಯ ಸೌಂದರ್ಯ ವರ್ಣನಾತೀತ.
ಈ ಪ್ರಶಾಂತ ವಾತಾವರಣದಲ್ಲಿ ಬಂದು ಅದೆಷ್ಟು ಛಾಯಾಗ್ರಾಹಕರು ತಮ್ಮ ಪ್ರತಿಭೆಗೆ ಸಾಣೆ ಹಿಡಿದಿದ್ದಾರೋ ಲೆಕ್ಕವಿಲ್ಲ. ಅಂಥವರಲ್ಲಿ ನೀವೂ ಒಬ್ಬರಾಗಿದ್ದರೆ ನೀವು ತೆಗೆದೆ ಹೈ ರೆಸೊಲ್ಯುಶನ್ ಚಿತ್ರವನ್ನು ಮೇ 5 ರ ಒಳಗಾಗಿ ಈ ಕೆಳಕಂಡ ಇ ಮೇಲ್ ಗೆ ಕಳಿಸಿಕೊಡಿ. ನಿಸರ್ಗದ ಬಗ್ಗೆ ಅರಿವು, ಕಾಳಜಿ, ಪ್ರೀತಿ ಮೂಡಿಸುವ ಸಲುವಾಗಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಛಾಯಾ ಚಿತ್ರ ಪ್ರದರ್ಶನ ಮೇ 12 ರಂದು ಭಾನುವಾರ ಕುಕ್ಕರಹಳ್ಳಿ ಕೆರೆಯ ಮುಖ್ಯ ಪ್ರವೇಶ ದ್ವಾರದ ಬಳಿ ನಡೆಯಲಿದೆ.

* ಒಬ್ಬ ಛಾಯಾಗ್ರಾಹಕ 3 ಚಿತ್ರಗಳನ್ನು ಕಳಿಸಲು ಅವಕಾಶವಿದೆ.
* ಛಾಯಾ ಚಿತ್ರಗಳು ಹೈ ರೆಸುಲ್ಯೂಶನ್ ಹೊಂದಿದ್ದು,ಪ್ರಿಂಟ್ ಔಟ್ ತೆಗೆದರೂ ಉತ್ತಮವಾಗಿ ಬರುವಂತಿರಬೇಕು
* ಛಾಯಾಚಿತ್ರ ತಲುಪಿದ ನಂತರ ಛಾಯಾಚಿತ್ರಕಾರರಿಗೆ ಚಿತ್ರ ತಲುಪಿದ ಕುರಿತು ಖಚಿತ ಪಡಿಸಿದ ಇ ಮೇಲ್ ಕಳಿಸಲಾಗುತ್ತದೆ.
* ಆಯ್ಕೆಯಾದ ಚಿತ್ರಗಳ ಮುದ್ರಣದ ರೂ.20 ನ್ನು ಛಾಯಾಚಿತ್ರಕಾರರೇ ಭರಿಸಬೇಕು.
* ಚಿತ್ರವನ್ನು [email protected] ಗೆ ಕಳುಹಿಸಲು ಕೋರಲಾಗಿದೆ.
* ಛಾಯಾ ಚಿತ್ರಗಳನ್ನು ಕಳಿಸಲು ಕೊನೆಯ ದಿನಾಂಕ ಮೇ 05
* ಛಾಯಾಚಿತ್ರಕಾರರ ಪೂರ್ಣ ಹೆಸರು ಮತ್ತು ಫೋನ್ ನಂಬರ್ ಅನ್ನು ಮೇಲ್ ನೊಂದಿಗೆ ಕಳುಹಿಸಲೇಬೇಕು.
* ಪ್ರದರ್ಶನಕ್ಕಿಟ್ಟ ಚಿತ್ರಗಳನ್ನು, ಪ್ರದರ್ಶನದ ನಂತರ ಛಾಯಾಚಿತ್ರಕಾರರೇ ತೆಗೆದುಕೊಳ್ಳಬಹುದು.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications