ಕೆಎಸ್ಆರ್ಟಿಸಿ ಸಿಹಿ ಸುದ್ದಿ: ಹೊರ ವರ್ತುಲ ರಸ್ತೆಯ ಪ್ರದೇಶಗಳಿಗೂ ಬಸ್ ಸೇವೆ
ಮೈಸೂರು, ಆಗಸ್ಟ್ 05: ಅರಮನೆ ನಗರಿ ಮೈಸೂರಿನಲ್ಲಿ ನಗರ ವ್ಯಾಪ್ತಿಯಲ್ಲಿ ಓಡಾಡಲು ಪ್ರಯಾಣಿಕರಿಗೆ ಸಿಟಿ ಬಸ್ಗಳ ವ್ಯವಸ್ಥೆ ಇದೆ. ಇದರೊಂದಿಗೆ ಹೊರ ವರ್ತುಲ ರಸ್ತೆ (ORR) ವ್ಯಾಪ್ತಿಯಲ್ಲಿ ಸಾರಿಗೆ ಸೇವೆ ಬೇಡಿಕೆ ಹೆಚ್ಚಾಗುತ್ತಿದೆ. ಇದನ್ನು ಗಮನಿಸಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಹೊಸದೊಂದು ಪ್ಲಾನ್ ಮಾಡಿಕೊಂಡಿದೆ.
ಪ್ರಯಾಣಿಕರು ನಗರದ ಹೊರ ವರ್ತುಲ ರಸ್ತೆ ಭಾಗದ ಸ್ಥಳಗಳಿಗೆ ತೆರಳಲು ಸಾರಿಗೆ ಹೆಚ್ಚು ಬೇಡಿಕೆ ಇದೆ. ಈ ಬೇಡಿಕೆಯನ್ನೇ ಖಾಸಗಿ ಸಾರಿಗೆಗಳಾದ ಟ್ಯಾಕ್ಸಿ ಇನ್ನಿತರ ವಾಹನಗಳು ಬಳಸಿಕೊಳ್ಳುತ್ತಿದ್ದಾರೆ. ಇದನ್ನು ಅರಿತ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಸುಮಾರು 15ಕ್ಕೂ ಹೆಚ್ಚು ಬಸ್ಗಳನ್ನು ಹೊರ ವರ್ತುಲ ವರೆಗೆ ವಿಸ್ತರಣೆ ಮಾಡಲು ನಿರ್ಧರಿಸಿದೆ. ಇದು ಸಾಧ್ಯವಾದರೆ ಜನರಿಗೆ ಖಾಸಗಿ ವಾಹನಗಳಿಂಗಿಂತಲೂ ಕಡಿಮೆ ಬೆಲೆಗೆ ಸಂಚಾರ ಸೇವೆ ಲಭ್ಯವಾಗಲಿದೆ.

ಬಸ್ ಸೇವೆ ವಿಸ್ತರಣೆ ಯಾವಾಗ?
ಮೈಸೂರು, ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಗೆ/ನಗರಗಳನ್ನು, ಗ್ರಾಮೀಣ ಪ್ರದೇಶಗಳನ್ನು KSRTC ಬಸ್ಗಳು ಸಂಪರ್ಕಿಸುತ್ತವೆ. ಈ ಸೇವೆಯನ್ನು ಮುಂದಿನ ದಿನಗಳಲ್ಲಿ ಮೈಸೂರು ನಗರದ ಹೊರ ವರ್ತುಲ ರಸ್ತೆಯವರೆಗೆ (ORR) ವಿಸ್ತರಣೆ ಮಾಡಲು ಮೈಸೂರು ಕೆಎಸ್ಆರ್ಟಿಸಿ ಘಟಕ ಉದ್ದೇಶಿಸಿದೆ. ಇನ್ನೇನು ಕಾರ್ಯರೂಪಕ್ಕೆ ಬರಲಿದೆ.
ಇದಕ್ಕೆ ಪೂರಕವಾಗಿ ಪ್ರಯಾಣಿಕರ ಸಹ ರಿಂಗ್ ರಸ್ತೆಗೆ ಬಸ್ ಸಂಚಾರ ಸೇವೆಯ ಲಭ್ಯತೆಯ ಅಗತ್ಯತೆ ಎಷ್ಟಿದೆ ಎಂದು ಒತ್ತಿ ಹೇಳಿದ್ದಾರೆ. ಇಲ್ಲಿನ ಹೆಬ್ಬಾಳದಂತಹ ಪ್ರದೇಶಗಳ ನಿವಾಸಿಗಳು ಬೋಗಾದಿ ಇಲ್ಲವೇ ಹುಣಸೂರು ರಸ್ತೆಯಂತಹ ಸ್ಥಳಗಳಿಗೆ ತೆರಳಲು ಸೂಕ್ತ ಸಾರಿಗೆ ವ್ಯವಸ್ಥೆ ಇಲ್ಲದೇ ಪರದಾಡುವಂತಹ ಸ್ಥಿತಿ ಇದೆ.
ಅಗತ್ಯಕ್ಕಿಂತ ಸಮಯ, ದುಡ್ಡು ಪೋಲು
ಹೊಸ ವಲಯದಿಂದ ನಗರದೊಳಗೆ ವಿವಿಧ ಕಾರ್ಯ ನಿಮಿತ್ತ ಬರುವವರಿಗೆ ನೇರ ಸಾರಿಗೆ ವ್ಯವಸ್ಥೆ ಸಿಗಬೇಕಿದೆ. ಹೊಸ ವರ್ತುಲದಿಂದ ಸಿಟಿ ಅಂಚಿನ ವರೆಗೆ ಬಂದು, ಅಲ್ಲಿಂದ ಸಿಟಿ ಬಸ್ ಹಿಡಿದು ಬರಬೇಕು. ಕೆಲವೊಮ್ಮೆ ಮೂರು ಕಡೆ ಬಸ್, ಇಲ್ಲವೇ ಖಾಸಗಿ ವಾಹನ ಬದಲಿಸಬೇಕಾಗುತ್ತದೆ. ಇದರಿಂದ ಹಣ ಮತ್ತು ಸಮಯ ವ್ಯರ್ಥವಾಗುತ್ತಿದೆ ಎಂದು ಕೆಲವು ಸಾರ್ವಜನಿಕರು ಅಳಲು ತೋಡಿಕೊಂಡಿದ್ದಾರೆ.
ಈ ಪ್ರದೇಶಗಳಲ್ಲಿ ಸಾರಿಗೆಗೆ ಬೇಡಿಕೆ
ಸಾಮಾನ್ಯವಾಗಿ ನಂಜನಗೂಡು ರಸ್ತೆಯ ಬಂಡಿಪಾಳ್ಯ ಎಪಿಎಂಸಿ ಜಂಕ್ಷನ್, ಮಣಿಪಾಲ್ ಆಸ್ಪತ್ರೆ ಜಂಕ್ಷನ್ (ಮೈಸೂರು-ಬೆಂಗಳೂರು ಹೈವೇ) , ಉತ್ತನಹಳ್ಳಿ ಜಂಕ್ಷನ್, ಟಿ.ನರಸೀಪುರ ರಸ್ತೆ, ವಿಟಿಯು ಪ್ರಾದೇಶಿಕ ಕಚೇರಿ, RTO ಕಚೇರಿ ಹಾಗೂ ದೇವೇಗೌಡ ಸರ್ಕಲ್ ಸೇರಿದಂತೆ ಹೊರವಲಯದ ವಿವಿಧ ಭಾಗಗಳಲ್ಲಿ ಪ್ರತಿದಿನ ಉದ್ಯೋಗಿಗಳು, ಕಾರ್ಮಿಕರು, ಕಾರ್ಖಾನೆ ಕೆಲಸಗಾರರು, ಮಹಿಳೆಯರು ಸೇರಿದಂತೆ ಸಾರ್ವಜನಿಕರು ಓಡಾಡುತ್ತಾರೆ. ಹೀಗಾಗಿ ಭಾಗದಲ್ಲಿ ಕೆಎಸ್ಆರ್ಟಿಸಿ ಬಸ್ ವಿಸ್ತರಣೆಗೆ ಬೇಡಿಕೆ ಸೃಷ್ಟಿಯಾಗಿದೆ.
ಸದ್ಯ KSRTC ನಿಗಮದ ಅಧಿಕಾರಿಗಳು ಬಸ್ ಸಂಚಾರಕ್ಕೆ ಹಾಗೂ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಸೂಕ್ತ ರೀತಿಯಲ್ಲಿ ರೂಟ್ ಶೀಟ್ ಅನ್ನು ಸಿದ್ಧಪಡಿಸುತ್ತಿದೆ. ಇದು ಪೂರ್ಣಗೊಳ್ಳುತ್ತಿದ್ದಂತೆ ಪ್ರತಿದಿನ ಬೆಳಗ್ಗೆಯಿಂದ ರಾತ್ರಿವರೆಗೆ ಸಾರ್ವಜನಿಕರನ್ನು ಗಮನದಲ್ಲಿಟ್ಟುಕೊಂಡು ಬಸ್ಗಳನ್ನು ಓಆರ್ಆರ್ ಸುತ್ತಮುತ್ತಲಿನ ಪ್ರದೇಶಗಳಿಗೆ ಕಾರ್ಯಾಚರಣೆ ನಡೆಸಲಿದೆ ಎಂದು 'ಸ್ಟಾರ್ ಆಫ್ ಮೈಸೂರು' ವರದಿ ಮಾಡಿದೆ.
ಕೆಎಸ್ಆರ್ಟಿಸಿ ನಿಗಮವು ರಾಜ್ಯದಲ್ಲಿ ಹೊಸ ಹೊಸ ಮಾದರಿಯ ಬಸ್ಗಳನ್ನು ಪರಿಚಯ ಮಾಡುತ್ತಿದೆ. ಇನ್ನೂ ಹಲವು ಘಟಕಗಳಿಗೆ ಹೊಸ ಬಸ್ ನೀಡುವುದಾಗಿ ಇತ್ತೀಚೆಗೆ ಸಾರಿಗೆ ಸಚಿವರೇ ತಿಳಿಸಿದ್ದಾರೆ. ಪ್ರಯಾಣಿಕರ ದೃಷ್ಟಿಯಿಂದ ಹೊಸ ಹೊಸ ಉಪಕ್ರಮಗಳನ್ನು ಸರ್ಕಾರ ಪರಿಚಯಿಸುತ್ತಿದೆ.
-
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Shivam Dube: ಶಿವಂ ದುಬೆ ಸಾಧನೆಗೆ ಮನಸಾರೆ ಮೆಚ್ಚುಗೆ ಸೂಚಿಸಿದ ಪತ್ನಿ ಅಂಜುಮ್ ಖಾನ್: ಇನ್ಸ್ಟಾ ಪೋಸ್ಟರ್ ಭಾರೀ ವೈರಲ್ -
Fact Check: ಟಿ20 ವಿಶ್ವಕಪ್ ಫೈನಲ್ ಪಂದ್ಯಕ್ಕೂ ಮುನ್ನ ರಾಷ್ಟ್ರಗೀತೆ ವೇಳೆ ಕಣ್ಣೀರಿಟ್ಟ ಕಿವೀಸ್ ಆಟಗಾರ ಇಶ್ ಸೋಧಿ -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ












Click it and Unblock the Notifications