Get Updates
Get notified of breaking news, exclusive insights, and must-see stories!

ಆಶ್ರಯ ಮನೆ ಯೋಜನೆಗಳಿಗೆ ತಡೆ ಹಾಕುತ್ತಿದ್ದಾರಾ ಶಾಸಕ ರಾಮದಾಸ್

ಮೈಸೂರು, ಫೆಬ್ರವರಿ 06: ನಾನು ಶಾಸಕನಾಗಿದ್ದ ನಾಲ್ಕು ವರ್ಷಗಳ ಅವಧಿಯಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ವಸತಿ ಸಚಿವರಾಗಿದ್ದ ಅಂಬರೀಷ್, ಕೃಷ್ಣಪ್ಪ ಇವರುಗಳಿಗೆ ಒತ್ತಡ ಹಾಕಿ ಮನೆಗಳನ್ನು ಕಟ್ಟಿಸಲು ಬೇಕಾದ ಜಮೀನುಗಳನ್ನು ಮೂಡಾದಿಂದ ಸತತ ಹೋರಾಟ ಮಾಡಿ ತಂದಿದ್ದೆ, ಆದರೆ ಆಶ್ರಯ ಮನೆ ಯೋಜನೆ ಹಾಗೂ ಕೊಳಚೆ ನಿರ್ಮೂಲನಾ ಮಂಡಳಿ ಯೋಜನೆಗಳಿಗೆ ತಡೆಯೊಡ್ಡಿರುವ ಕೃಷ್ಣರಾಜ ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್ ಅವರು ಬಡವರ ಮೇಲೆ ಗದಾ ಪ್ರಹಾರ ಮಾಡುತ್ತಿದ್ದಾರೆಂದು ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಆರೋಪಿಸಿದರು.

ಮೈಸೂರು ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಶಾಸಕ ಸೋಮಶೇಖರ್, ಓರ್ವ ಶಾಸಕನಾಗಿ ಅನಾಗರೀಕರಾಗಿ ವರ್ತಿಸಿ, ಸ್ವಲ್ಪವೂ ಮಾನವೀಯತೆ ಇಲ್ಲದೆ ಬದುಕಿಗಾಗಿ ಕಷ್ಟಪಡುತ್ತಿರುವ ಬಡವರ ತಲೆ ಮೇಲೆ ಚಪ್ಪಡಿ ಎಳೆಯುವ ಕೆಲಸ ಮಾಡಬಾರದು ಎಂದು ವಾಗ್ದಾಳಿ ನಡೆಸಿದರು.

ನಾನು ಶ್ರಮವಹಿಸಿ ಕೊಳಚೆ ನಿರ್ಮೂಲನಾ ಮಂಡಳಿ ವತಿಯಿಂದ ಈ ಮನೆಗಳಿಗೆ ಬೇಕಾದ ಜಮೀನನ್ನು ಮೂಡಾ ಪ್ರಾಧಿಕಾರದಿಂದ ಎಲ್ಲ ಸದಸ್ಯರ ಮನವೊಲಿಸಿ ಮಳಲವಾಡಿಯಲ್ಲಿ 3.5 ಎಕರೆ ಜಮೀನು, ವಿಶ್ವೇಶ್ವರ ನಗರದಲ್ಲಿ 1.5 ಎಕರೆ ಜಮೀನು ಪಡೆದು ಮಳಲವಾಡಿಯಲ್ಲಿ 1344, ವಿಶ್ವೇಶ್ವರ ನಗರದಲ್ಲಿ 868, ಒಟ್ಟು 2212ಮನೆಗಳು, ಕೊಳಚೆ ನಿರ್ಮೂಲನಾ ಮಂಡಳಿಯಿಂದ ಈ ಎರಡು ಯೋಜನೆಗಳಿಗೆ ಹಣ ಬಿಡುಗಡೆಯಾಗಿ ಕೆಲಸದ ಟೆಂಡರ್ ಮುಗಿದು, ಗುತ್ತಿಗೆದಾರರು ಮನೆ ಕಟ್ಟಲು ಬಂದಿರುವಾಗ ಅವರಿಗೆ ಬೆದರಿಕೆ ಹಾಕಿ ಕೆಲಸ ಪ್ರಾರಂಭವಾಗದಂತೆ ಶಾಸಕ ರಾಮದಾಸ್ ತಡೆದಿದ್ದಾರೆಂದು ಆರೋಪಿಸಿದರು.

Krishnaraja MLA Ramdas Is Obstructing The Housing Scheme

ನಾನು ಮೂರು ವರ್ಷಗಳ ಕಾಲ ಸತತ ಹೋರಾಟ ನಡೆಸಿ 13.8 ಎಕರೆ ಜಮೀನಿಗೆ ಮೂಡಾ ಪ್ರಾಧಿಕಾರಕ್ಕೆ 7 ಕೋಟಿ ರುಪಾಯಿ ಹಣವನ್ನು ಸರ್ಕಾರದಿಂದ ಕಟ್ಟಿಸಿ ಲಲಿತಾದ್ರಿಪುರದ ಜಮೀನನ್ನು ಮಹಾನಗರ ಪಾಲಿಕೆಗೆ ಹಸ್ತಾಂತರಿಸಿ ಆಗಿದೆ. ರಾಜೀವ್ ಗಾಂಧಿ ವಸತಿ ಯೋಜನೆಯಿಂದ ಅನುಮತಿಯಾಗಿರುವ 3084 ಮನೆಗಳಲ್ಲಿ ಲಲಿತಾದ್ರಿಪುರದಲ್ಲಿ 1440 ಮನೆಗಳು, ಗೊರೂರಿನಲ್ಲಿ 1644ಮನೆಗಳು, ಒಟ್ಟು 3084 ಆಶ್ರಯ ಮನೆಗಳಿವೆ.

ನಾನು ಮಾಡಿದ ಹಲವಾರು ಯೋಜನೆಯ ಎಲ್ಲಾ ಕೆಲಸಗಳು ಇಂದಿಗೂ ಮುಂದುವರಿಯುತ್ತಿದೆ. ಉದಾಹರಣೆಗೆ ವಿದ್ಯಾರಣ್ಯರಂ 16ನೇ ಮುಖ್ಯ ರಸ್ತೆ ಮತ್ತು ಎಲ್ಲಾ ರಸ್ತೆಯ ಮರು ನವೀಕರಣದ ಕೆಲಸ ಹಾಗೂ 4.5 ಕೋಟಿ ವೆಚ್ಚದಲ್ಲಿ ದೊಡ್ಡ ಮೋರಿಯಲ್ಲಿ ಹರಿಯುತ್ತಿದ್ದ ಒಳಚರಂಡಿ ನೀರನ್ನು ತಪ್ಪಿಸಿಹೊಸ ದೊಡ್ಡ ಪೈಪ್ ಅಳವಡಿಸಿ ಮಾಡುತ್ತಿರುವ ಕೆಲಸ, ಇನ್ನೂ ಹಲವಾರು ನಾನು ಮಾಡಿದ ಕೆಲಸವನ್ನೇ ಇವರು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.

ಆದರೆ ಈ ಬಡವರ ಒಂದು ಸೂರು ಕಟ್ಟಿಕೊಳ್ಳುವ ವಿಚಾರದಲ್ಲಿ ರಾಜಕೀಯ ಮಾಡಿ ಅವರನ್ನು ಬೀದಿಗೆ ಬೀಳುವಂತೆ ಮಾಡುವ ಈ ಕ್ರೂರತ್ವ ಏಕೆ? ಇನ್ನು ಹದಿನೈದು ದಿನಗಳಲ್ಲಿ ಕೆಲಸ ಪ್ರಾರಂಭವಾಗಲಿಲ್ಲವೆಂದರೆ ಮುಂದಿನ ಹೋರಾಟ ಉಗ್ರರೂಪ ತಾಳುತ್ತದೆ ಎಂದು ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಎಚ್ಚರಿಸಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+