Get Updates
Get notified of breaking news, exclusive insights, and must-see stories!

ಇಡೀ ದೇಶದಲ್ಲಿ ಸಮ್ಮಿಶ್ರ ಹೋರಾಟ ಮಾಡುತ್ತೇವೆ: ಕೃಷ್ಣ ಭೈರೇಗೌಡ

ಮೈಸೂರು, ನವೆಂಬರ್ 17: ರಾಜ್ಯದಲ್ಲಿ ಕಾಂಗ್ರೆಸ್, ಜೆಡಿಎಸ್ ಮೈತ್ರಿ ಸರ್ಕಾರ ಅಧಿಕಾರದಲ್ಲಿದೆ. ಹಾಗಾಗಿ ಕಾಂಗ್ರೆಸ್ - ಜೆಡಿಎಸ್ ಎರಡೂ ಪಕ್ಷಗಳು ಒಂದುಗೂಡಿ ಮುಂದಿನ ಐದು ವರ್ಷ ಮೈಸೂರು ಪಾಲಿಕೆ ಆಡಳಿತ ನಡೆಸಲಿದ್ದಾರೆ ಎಂದು ಸಚಿವ ಕೃಷ್ಣ ಭೈರೇಗೌಡ ತಿಳಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಎರಡು ವರ್ಷದ ಅವಧಿಗೆ ಕಾಂಗ್ರೆಸ್ ಪಕ್ಷದಿಂದ ಮೇಯರ್, ಜೆಡಿಎಸ್ ನಿಂದ ಉಪಮೇಯರ್ ನೇಮಕವಾಗಲಿದೆ. ಇದಾದ ಬಳಿಕ ಮೂರು ವರ್ಷಗಳ ಕಾಲ ಜೆಡಿಎಸ್ ನಿಂದ ಮೇಯರ್ , ಕಾಂಗ್ರೆಸ್ಸಿನಿಂದ ಉಪಮೇಯರ್ ಒಪ್ಪಂದ ನಡೆದಿದೆ. ಈ ಮೈತ್ರಿ ಮುಂದಿನ ಲೋಕಸಭೆ ಚುನಾವಣೆವರೆಗೂ ಇರಲಿದೆ.

ಇಡೀ ದೇಶದಲ್ಲಿ ಸಮ್ಮಿಶ್ರ ಹೋರಾಟ ಮಾಡುತ್ತೇವೆ . ಈಗಾಗಲೇ ಉಪ ಚುನಾವಣೆಯನ್ನು ಗಮನಿಸುವುದಾದರೆ ಜನರು ಸಮ್ಮಿಶ್ರ ಸರ್ಕಾರದ ಪರವಾಗಿದ್ದಾರೆ. ಬಿಜೆಪಿಯನ್ನು ಕಿತ್ತೊಗೆಯುವ ಸಲುವಾಗಿ ನಾವು ಮುಂದಿನ ದಿನಗಳಲ್ಲಿಯೂ ಮೈತ್ರಿಯನ್ನು ಮುಂದುವರೆಸುತ್ತೇವೆ. ಮೈಸೂರಿನ ಈ ಹೊಂದಾಣಿಕೆ ಆಡಳಿತ ಮುಂದಿನ ನಮ್ಮ ನಡೆಗೆ ಸಾಕ್ಷಿಯಾಗಿದೆ.

Krishna Byregowda said Congress and JDS will administer Mysore mahanagara palike

ಮುಂದಿನ ದಿನಗಳಲ್ಲಿ ಯಾವುದೇ ಕಚ್ಚಾಟ ಮಾಡಿಕೊಳ್ಳದೆ ಹೊಂದಾಣಿಕೆಯಿಂದ ಸಾಗುವ ಭರವಸೆ ಇದೆ ಎಂದರು.

ಇನ್ನು ಮೈಸೂರು ಮೇಯರ್ ವಿಚಾರದಲ್ಲಿ ನಮ್ಮ ವರಿಷ್ಠರ ತೀರ್ಮಾನಕ್ಕೆ ಬದ್ಧರಾಗಿದ್ದೇವೆ ಎಂದು ಮೈಸೂರಿನಲ್ಲಿ ಸಾರಾ ಮಹೇಶ್ ಹೇಳಿದ್ದಾರೆ. ಸಿದ್ದರಾಮಯ್ಯ ನಮ್ಮೆಲ್ಲರಿಗಿಂತ ದೊಡ್ಡವರು. ಮಾಜಿ ಮುಖ್ಯಮಂತ್ರಿ ಆಗಿದ್ದವರು . ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷರೂ ಆಗಿದ್ದಾರೆ. ಅವರ ತೀರ್ಮಾನದಂತೆಯೇ ನಾವು ಸಚಿವರಾಗಿದ್ದೇವೆ.

ಮೇಯರ್ ಆಯ್ಕೆ ಸಂಬಂಧ ಕಾಂಗ್ರೆಸ್ ತಮ್ಮ ವರಿಷ್ಠರಿಗೆ ಮನವಿ ಮಾಡಿದ್ದರು. ಅದರಂತೆ ನಮ್ಮ ವರಿಷ್ಠರು ಮೇಯರ್ ಸ್ಥಾನವನ್ನು ಬಿಟ್ಟುಕೊಟ್ಟಿದ್ದಾರೆ. ಮೊದಲ ಹಾಗೂ ಮೂರನೇ ಅವಧಿಗೆ ಕಾಂಗ್ರೆಸ್ , ಎರಡನೇ ನಾಲ್ಕನೇ ಹಾಗೂ ಐದನೇ ಅವಧಿಗೆ ಜೆಡಿಎಸ್ ಪಕ್ಷದಿಂದ ಮೇಯರ್ ಆಗಲಿದ್ದಾರೆ ಎಂದು ತಿಳಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+