ಮೈಸೂರಿಗೆ 'ಓದಿನ ಮನೆ'ಗೆ ನೀವೂ ಒಮ್ಮೆ ಹೋಗಿಬನ್ನಿ...
ತನು ಕನ್ನಡ, ಮನ ಕನ್ನಡ, ಧನ ಕನ್ನಡ...ಕವಿತೆಯೊಂದರ ಸಾಲುಗಳಿವು. ಅವನ್ನು ಜೀವನದಲ್ಲಿ ಅಕ್ಷರಶಃ ಪಾಲಿಸಿಕೊಂಡು ಬರುತ್ತಿರುವ ಹಿರಿಯ ನಾಗರೀಕರೊಬ್ಬರು ಮೈಸೂರು ನಗರದಲ್ಲಿದ್ದಾರೆ. ಆನಂದಮಯ ಈ ಜಗ ಹೃದಯ ಎಂಬ ಕುವೆಂಪು ವಾಣಿಯನ್ನು ಅವರು ಓದುಗರಲ್ಲಿ ಕ
ಮೈಸೂರು, ನವೆಂಬರ್ 2 : ತನು ಕನ್ನಡ, ಮನ ಕನ್ನಡ, ಧನ ಕನ್ನಡ... ಕವಿತೆಯೊಂದರ ಸಾಲುಗಳಿವು. ಅವನ್ನು ಜೀವನದಲ್ಲಿ ಅಕ್ಷರಶಃ ಪಾಲಿಸಿಕೊಂಡು ಬರುತ್ತಿರುವ ಹಿರಿಯ ನಾಗರಿಕರೊಬ್ಬರು ಮೈಸೂರು ನಗರದಲ್ಲಿದ್ದಾರೆ. 'ಆನಂದಮಯ ಈ ಜಗ ಹೃದಯ' ಎಂಬ ಕುವೆಂಪು ವಾಣಿಯನ್ನು ಅವರು ಓದುಗರಲ್ಲಿ ಕನ್ನಡ ವಾಚನಾಭಿರುಚಿ ಬೆಳೆಸುವ ಮೂಲಕ ಕಂಡುಕೊಂಡಿದ್ದಾರೆ.
ಮೈಸೂರು ನಿವಾಸಿ ಬಿ.ಪ್ರಭಾಕರ ಅವರೇ ಸುಮಾರು ಮೂವತ್ತು ವರ್ಷಗಳಿಂದ ಈ ಕನ್ನಡ ಸೇವೆಯಲ್ಲಿ ನಿರತವಾಗಿರುವವರು. ಅವರಿಗಿದ್ದ ಪುಸ್ತಕ ಓದುವ ಗೀಳು ಅವರ ಈ ಸೇವೆಗೆ ನಾಂದಿಯಾಯಿತು. ನಗರದ ತ್ಯಾಗರಾಜ ರಸ್ತೆಯ 6ನೇ ತಿರುವಿನಲ್ಲಿ ಬಾಡಿಗೆ ಮಳಿಗೆಯೊಂದರಲ್ಲಿ 'ಓದಿನ ಮನೆ' ಹೆಸರಿನಲ್ಲಿ ವಾಚನಾಲಯವೊಂದನ್ನು ಸ್ಥಾಪಿಸಿದ್ದಾರೆ. ಈಗ ಅವರಿಗೆ 75 ವರ್ಷ ವಯಸ್ಸು. ಈ ಇಳಿವಯಸ್ಸಿನಲ್ಲಿ ಕೂಡ ಅವರ ಉತ್ಸಾಹಕ್ಕೆ ಕನ್ನಡದ ಶಕ್ತಿಯೇ ಕಾರಣ ಎನ್ನಬಹುದು.

ಹೌದು, ಪ್ರಸ್ತುತ ಮಳಿಗೆಯ ಬಾಡಿಗೆ ಮಾಸಿಕ 3000 ರೂ. ಇದ್ದು, 10 ಮಂದಿ ಕನ್ನಡ ಸಾಹಿತ್ಯ ಪ್ರಿಯರು ಒಂದೊಂದು ತಿಂಗಳ ಬಾಡಿಗೆ ನೀಡುತ್ತಿದ್ದಾರೆ. ಅದರಲ್ಲಿಯೂ ಇಬ್ಬರು ಹೆಚ್ಚುವರಿಯಾಗಿ ಒಂದೊಂದು ತಿಂಗಳ ಬಾಡಿಗೆ ಕೊಡುತ್ತಿದ್ದಾರೆ. ಶಿವಕುಮಾರ್, ಬಾಲಸುಬ್ರಹ್ಮಣ್ಯ, ಡಾ.ಚಂದ್ರಶೇಖರ್, ಎಸ್.ರಾಮಪ್ರಸಾದ್, ಶ್ರೀಧರಚಂದ್ರ, ಗಣೇಶ್ ಅಧಿಕಾರಿ, ಮುರಳೀಧರರಾವ್, ಎಂ.ಎಲ್. ಲೋಹಿತ್, ಲಕ್ಷ್ಮಿ ಕೌಶಿಕ್ ಮತ್ತು ಮಂಜುನಾಥ(ಶೆಟ್ರು) ಬಾಡಿಗೆ ಹಣ ತುಂಬುತ್ತಿರುವವರು. ಅವರಲ್ಲಿ ಮುರಳೀಧರರಾವ್ ಮತ್ತು ಲಕ್ಷ್ಮಿ ಕೌಶಿಕ್ ಅವರು ಹೆಚ್ಚುವರಿ ಒಂದೊಂದು ತಿಂಗಳ ಬಾಡಿಗೆ ನೀಡುತ್ತಿರುವವರು. ಎಂ.ಎಲ್.ಲೋಹಿತ್ ಅಮೆರಿಕ ನಿವಾಸಿಯಾಗಿದ್ದು, ಅಲ್ಲಿಂದ ಹಣ ಕಳುಹಿಸಿಕೊಡುತ್ತಿರುವುದು ವಿಶೇಷ.
ಪ್ರಭಾಕರ ಅವರು ಹಿಂದೆ ನಗರದ ತ್ಯಾಗರಾಜ ರಸ್ತೆಯಲ್ಲಿ ಮಳಿಗೆಯೊಂದರಲ್ಲಿ ಸಕ್ರ್ಯುಲೇಟಿಂಗ್ ಲೈಬ್ರರಿವನ್ನು ಕೇವಲ 100 ಪುಸ್ತಕಗಳೊಂದಿಗೆ ಆರಂಭಿಸಿದ್ದರು. ತಿಂಗಳ ಶುಲ್ಕ 10 ರೂ., ಪುಸ್ತಕಕ್ಕೆ ದಿನದ ಬಾಡಿಗೆ 10 ಪೈಸೆ ನಿಗದಿಯಾಗಿತ್ತು. ಅದನ್ನು ಕೊಡುವುದಕ್ಕೂ ಓದುಗರು ಕಷ್ಟಪಡುತ್ತಿದ್ದುದು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ವರ್ಷಕ್ಕೆ 50 ರೂ. ಸದಸ್ಯತ್ವ ಶುಲ್ಕ ನಿಗದಿಪಡಿಸಿ, ಹೊತ್ತಗೆಗಳನ್ನು ಬಾಡಿಗೆ ಇಲ್ಲದೆ ಎರವಲುಕೊಡಲು ಮುಂದಾದರು. ಆಗ ಗ್ರಂಥಾಲಯದ ಹೆಸರನ್ನು 'ನಮ್ಮ ಕನ್ನಡ ವಾಚನ ಭಾರತಿ' ಎಂದು ಪರಿವರ್ತಿಸಿದರು.

ಪುಸ್ತಕಗಳ ಜೊತೆಗೆ ಕನ್ನಡ ದಿನಪತ್ರಿಕೆಗಳನ್ನು ತಂದು ಓದುವ ಅಭಿರುಚಿಯನ್ನು ಪ್ರೋತ್ಸಾಹಿಸಿದರು. ಕಾರಣಾಂತರಗಳಿಂದ ಮಳಿಗೆ ಮುಚ್ಚಿದಾಗ ರಸ್ತೆಬದಿಯಲ್ಲಿ ಕುರ್ಚಿ, ಬೆಂಚುಗಳನ್ನು ಇಟ್ಟು ದಿನಪತ್ರಿಕೆ ಓದುಗರಿಗೆ ಅನುಕೂಲ ಕಲ್ಪಿಸಿದ್ದರು. ನಂತರ 'ಓದಿನ ಮನೆ' ಸ್ಥಾಪಿಸಿದರು. ಸುಮಾರು 2000 ಪುಸ್ತಕಗಳು ವಾಚನಾಲಯದಲ್ಲಿ ಇವೆ. ಕೆಲ ಪ್ರಕಾಶಕರು, ದಾನಿಗಳು ಪುಸ್ತಕಗಳನ್ನು ಒದಗಿಸಿದ್ದಾರೆ.
ಪ್ರಭಾಕರ್ ಅವರು ಕೂಡ ತಮ್ಮಿಂದ ಸಾಧ್ಯವಾದಷ್ಟು ಪುಸ್ತಕಗಳನ್ನು ಖರೀದಿಸುತ್ತಾರೆ. ಬಾಡಿಗೆ ಮಳಿಗೆಯಲ್ಲಿ ವಾಚನಾಲಯ ತೆರೆದಾಗ ಅವರಿಗೆ ಸ್ನೇಹಿತರು, ಬಂಧುಗಳು ಆರ್ಥಿಕ ನೆರವು ನೀಡಿದ್ದಾರೆ. ಇವರ ಕನ್ನಡ ಸೇವೆ ಬಗ್ಗೆ ಕೆಲ ಪತ್ರಿಕೆಗಳು, ಮಾಧ್ಯಮಗಳಲ್ಲಿ ಪ್ರಕಟವಾದ ಲೇಖನಗಳನ್ನು ಗಮನಿಸಿದವರು ಕೂಡ ಸಹಾಯ ಹಸ್ತ ಚಾಚಿದ್ದಾರೆ.
ಹೀಗೆ ಪೋತ್ಸಾಹ ದೊರೆತರೆ ಇನ್ನೂ ಅದೆಷ್ಟೋ ಕನ್ನಡ ಮನಸ್ಸುಗಳು ನಾಡು, ನುಡಿ, ಸಾಹಿತ್ಯ, ಕಲಾಸೇವೆಗೆ ಮುನ್ನುಗ್ಗುವುದಕ್ಕೆ ತವಕಿಸುತ್ತಿರಬಹುದು ಅಲ್ಲವೇ?
-
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Shivam Dube: ಶಿವಂ ದುಬೆ ಸಾಧನೆಗೆ ಮನಸಾರೆ ಮೆಚ್ಚುಗೆ ಸೂಚಿಸಿದ ಪತ್ನಿ ಅಂಜುಮ್ ಖಾನ್: ಇನ್ಸ್ಟಾ ಪೋಸ್ಟರ್ ಭಾರೀ ವೈರಲ್ -
Fact Check: ಟಿ20 ವಿಶ್ವಕಪ್ ಫೈನಲ್ ಪಂದ್ಯಕ್ಕೂ ಮುನ್ನ ರಾಷ್ಟ್ರಗೀತೆ ವೇಳೆ ಕಣ್ಣೀರಿಟ್ಟ ಕಿವೀಸ್ ಆಟಗಾರ ಇಶ್ ಸೋಧಿ -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ












Click it and Unblock the Notifications