ಚೌಕ ಸಿನಿಮಾದ ಅಪ್ಪ ಐ ಲವ್ ಯೂ ಹಾಡಿಗೆ ಕಣ್ಣೀರಾಗಿಸಿದ ಅರ್ಜುನ್ ಜನ್ಯ
ಮೈಸೂರು ಸೆಪ್ಟೆಂಬರ್ 26 : "ನಾನು ನೋಡಿದ ಮೊದಲ ವೀರ, ಬಾಳು ಕಲಿಸಿದ ಸಲಹೆಗಾರ, ಬೆರಗು ಮೂಡಿಸೊ ಜಾದುಗಾರ, ಹಗಲು ಬೆವರಿನ ಕೂಲಿಕಾರ, ರಾತ್ರಿ ಮನೆಯಲಿ ಚೌಕಿದಾರ, ಎಲ್ಲ ಕೊಡಿಸುವ ಜಾದುಗಾರ ಅಪ್ಪಾ... ಅಪ್ಪಾ ಐ ಲವ್ ಯು ಪಾ...'
ದಸರಾ ವೈಭವ 2017: ಸರಳ ದಸರಾದ ಅಪರೂಪದ ಚಿತ್ರಗಳು
-ಮಳೆಯ ನಡುವೆಯೇ ಯುವ ದಸರಾ ಸಂಗೀತ ರಸ ಮಂಜರಿ ಕಾರ್ಯಕ್ರಮದಲ್ಲಿ ಕೇಳಿಬಂದ ಈ ಹಾಡು ನೆರೆದಿದ್ದವರ ಕಣ್ಣಾಲಿಗಳನ್ನು ತೇವಗೊಳಿಸಿತು.

ಸಂಗೀತ ನಿರ್ದೇಶಕ ಅರ್ಜುನ್ ಜನ್ಯ (ಎಜೆ) ತಮ್ಮ ತಂದೆಯನ್ನು ನೆನೆಯುತ್ತಲೇ 'ಚೌಕ' ಚಿತ್ರದ ಹಾಡು ಹಾಡಿದರು. ಎಲ್ಲ ತಂದೆಯರಿಗೂ ಈ ಹಾಡನ್ನು ಅರ್ಪಿಸಿದಾಗ ಸಂಗೀತ ಪ್ರೇಮಿಗಳು ಭಾವುಕರಾದರು. ಹಾಡಿಗೆ ಅನುರಾಧ ಭಟ್ ದನಿಗೂಡಿಸಿದ್ದರು. ಸುರಿದ ಭಾರೀ ಮಳೆಯಲ್ಲಿಯೂ ಅದೆಲ್ಲಿಂದ ಬಂದರೋ ಜನ, ಯುವ ದಸರಾ ವೇದಿಕೆಯ ಮುಂಭಾಗ ಜಮಾಯಿಸಿದ್ದರು.
ಮಲ್ಲಿಗೆ ನಗರಿಯ ಮನಸ್ಸುಗಳನ್ನು ರಂಜಿಸಲು ಬಂದಿದ್ದ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರ ಸಂಗೀತ ರಸ ಸಂಜೆಯಲ್ಲಿ ತೇಲಾಡಿದರು. ವಿಶಿಷ್ಟ ಹಾಡುಗಳ ಮೂಲಕ ಎಲ್ಲರ ಮನ ಸೂರೆಗೊಂಡ ಕನ್ನಡದ ಸಂಗೀತ ಮಾಂತ್ರಿಕ ಜನ್ಯ, ಬೆನ್ನಿನಿಂದ ಹೂ ಕುಂಡ ಸಿಡಿದು ಬರುವಂತಹ ಜಾಕೆಟ್ ಧರಿಸಿ ವೇದಿಕೆ ಪ್ರವೇಶಿಸಿದ್ದು ವಿಶೇಷವಾಗಿತ್ತು.

'ಭಜರಂಗಿ' ಚಿತ್ರದ 'ಜೈ ಜೈ ಭಜರಂಗಿ...' ಗೀತೆ ಮೂಲಕ ಯುವಜನರನ್ನು ಹುಚ್ಚೆಬ್ಬಿಸಿದರು. ನಂತರ ಚಿತ್ರರಂಗದ ತಮ್ಮ ಗಾಡ್ ಫಾದರ್ ಕಿಚ್ಚ ಸುದೀಪ್ ಅವರ ಹೆಬ್ಬುಲಿ ಚಿತ್ರದ ಹುಲಿ ಹುಲಿ ಹೆಬ್ಬುಲಿ...', ಅಧ್ಯಕ್ಷ ಚಿತ್ರದ 'ಕೈನಾಗೆ ಮೈಕ್ ಇದ್ರೆ ಬಾಯ್ ತುಂಬ ಭಾಷಣ..' ಹಾಡುಗಳಿಗೆ ತಾವೂ ಕುಣಿದು, ಪ್ರೇಕ್ಷಕರನ್ನೂ ಕುಣಿಸಿದರು.
'ಜೈ ಜೈ ಜೈ ಮೈಸೂರು...' ಎಂಬ ಪದ ಸೇರಿಸಿಕೊಂಡು ಜನ್ಯ ಜೊತೆ ಹಾಡಿದರು. ಅಬ್ಬರದ ಸಂಗೀತಕ್ಕೆ ಹಿರಿಯರು, ಯುವಕ, ಯುವತಿಯರು ಹಾಗೂ ಮಕ್ಕಳು ಹೆಜ್ಜೆ ಹಾಕಿದರು. ಯಾವ ಮಳೆ-ಚಳಿ ಸಂಗೀತ ರಸಿಕರನ್ನು ತಡೆಯಲು ಸಾಧ್ಯವಾಗಲೇ ಇಲ್ಲ.

ಸಂಚಿತ್ ಹೆಗಡೆ 'ತರತರ ಎನಿಸಿದೆ ಮನಸ್ಸಿಗೆ ನೀನು..' ಹಾಗೂ 'ಸರಿಯಾಗಿ ನೆನಪಿದೆ ನನಗೆ..' ನಂತರ ಮುಕುಂದ ಮುರಾರಿ...ಹಾಡುಗಳನ್ನು ಹಾಡಿದರು. ಹಾಡುಗಳ ನಡುವೆ ವಂದೇ ಮಾತರಂ ಹಾಗೂ ರಾಷ್ಟ್ರಗೀತೆಯನ್ನು ಸೇರಿಸಿ ಹಾಡಿದ ಫ್ಯೂಜನ್ ಹಾಡು ದೇಶಪ್ರೇಮವನ್ನು ಉಕ್ಕಿಸಿತು. ಅರ್ಜುನ್ ಜನ್ಯರ ಸಂಗೀತ ಸಂಜೆ ಮೈಸೂರಿನ ಜನರ ಮನದಲ್ಲಿ ಉಳಿಯುವಂತಿತ್ತು.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್












Click it and Unblock the Notifications