ಅನೈತಿಕ ಸಂಬಂಧ: ಮೈಸೂರಿನಲ್ಲಿ ವ್ಯಕ್ತಿ ಬಂಧನ
ವಿವಾಹಿತ ಮಹಿಳೆ ಜೊತೆ ಅನೈತಿಕ ಸಂಬಂಧ ಹೊಂದಿದ್ದ ಆರೋಪದಡಿ ಟಿ ನರಸಿಪುರ ತಾಲೂಕಿನಲ್ಲಿ ಎಪಿಎಂಸಿ ಸದಸ್ಯ ಪ್ರಭಾಕರ್ ಎಂಬುವವರನ್ನು ಮೈಸೂರು ಪೊಲೀಸರು ಬಂಧಿಸಿದ್ದಾರೆ.
ಮೈಸೂರು, ಮೇ 26 : ವಿವಾಹಿತ ಮಹಿಳೆ ಜೊತೆ ಅನೈತಿಕ ಸಂಬಂಧ ಹೊಂದಿದ್ದ ಆರೋಪದಡಿ ಟಿ ನರಸಿಪುರ ತಾಲೂಕಿನಲ್ಲಿ ಎಪಿಎಂಸಿ ಸದಸ್ಯ ಪ್ರಭಾಕರ್ ಎಂಬುವವರನ್ನು ಮೈಸೂರು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿ ಪ್ರಭಾಕರ್, ಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತ ಕೆ ಸಿ ಬಲರಾಮ್ ಅವರ ಪುತ್ರ.
ನಗರದ ಆಲನಹಳ್ಳಿ ಜನತಾ ಕಾಲೋನಿಯ ವಿವಾಹಿತ ಮಹಿಳೆಯೊಂದಿಗಿದ್ದ ಪ್ರಭಾಕರ್ ನನ್ನು ವಿವಾಹಿತ ಮಹಿಳೆಯ ಪತಿ ಶಿವಶಂಕರ್ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.[ಮೈಸೂರಿನ ಮನೆಯಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ದಂಪತಿ ಬಂಧನ]

ನಿನ್ನೆ (ಮೇ 25) ವಿವಾಹಿತ ಮಹಿಳೆಯ ಪತಿ ಇಲ್ಲದ ಸಮಯ ನೋಡಿ ಆಕೆಯ ಮನೆಗೆ ಬಂದಿದ್ದ ಪ್ರಭಾಕರ್, ಮನೆಯೊಳಗೆ ಹೋಗುತ್ತಿದ್ದಂತೆಯೇ ಕಾದುಕುಳಿತಿದ್ದ ಪತಿ ಶಿವಶಂಕರ್ ಹೊರಗಿನಿಂದ ಮನೆಯ ಬೀಗ ಹಾಕಿದ್ದಾರೆ.
ನಂತರ ಮಾಧ್ಯಮದವರು ಬರುವವರೆಗೂ ಬಾಗಿಲು ತೆರೆಯುವುದಿಲ್ಲ ಎಂದಿದ್ದಾರೆ. ವಿಷಯ ತಿಳಿದ ಆಲನಹಳ್ಳಿ ಪೊಲೀಸರು, ಸ್ಥಳಕ್ಕೆ ಆಗಮಿಸಿ, ದೂರು ದಾಖಲಿಸಿಕೊಂಡಿದ್ದಾರೆ. ಮನೆಯ ಬೀಗ ಮುರಿದು ಆರೋಪಿಯನ್ನು ಬಂಧಿಸಿದ್ದಾರೆ.












Click it and Unblock the Notifications