ಅಗತ್ಯವಿಲ್ಲದಿದ್ದರೇ ಇಲ್ಲಿ ಬಿಡಿ, ಅಗತ್ಯವಿದ್ದರೆ ತೆಗೆದುಕೊಳ್ಳಿ!
ಜೀವನವೆಂಬುದು ಎಷ್ಟು ವಿಚಿತ್ರ ನೋಡಿ. ಕೆಲವರಿಗೆ ಶ್ರೀಮಂತಿಕೆ ತುಳುಕಾಡುತ್ತಿರುತ್ತದೆ, ಹಲವರಿಗೆ ಬಡತನವೆಂಬುದು ಕಿತ್ತು ತಿನ್ನುತ್ತಿರುತ್ತದೆ. ಹರಿದ ಬಟ್ಟೆಯನ್ನು ತೊಟ್ಟು, ಕಿತ್ತುಹೋಗಿರುವ ಚಪ್ಪಲಿಯನ್ನೇ ಮೆಟ್ಟಿಕೊಂಡು ಜೀವನವೆಂಬ ಬಂಡಿಯನ್ನು ಸಾಗಿಸುತ್ತಿರುವವರು ಎಷ್ಟೋ?
ಅವರು ಆಕಾಶಕ್ಕೆ ಏಣಿ ಹಾಕುವುದನ್ನು ಬಿಟ್ಟಿರುತ್ತಾರೆ, ಕನಸು ಕಾಣುವುದನ್ನೂ ನಿಲ್ಲಿಸಿರುತ್ತಾರೆ. ಇದ್ದರೆ ಮೃಷ್ಟಾನ್ನ, ಇಲ್ಲದಿದ್ದರೆ ತಣ್ಣೀರೇ ಗತಿ. ನಮಗೇಕೆ ಅವೆಲ್ಲಾ? ಅವರವರ ಹಣೆಬರಹ ಎಂದು ಸುಮ್ಮನಿರುವವರೇ ಹೆಚ್ಚು. ಆದರೆ ಇಲ್ಲೊಂದು ತಂಡ ಇಂತಹ ಬಡವರಿಗೆ ವಂಚಿತವಾಗಿರುವ ಈ ಎಲ್ಲಾ ಸೌಲಭ್ಯವನ್ನು ಒದಗಿಸಲು ಮುಂದಾಗಿದೆ.
ಮೈಸೂರಿನಲ್ಲಿ ಖಾಸಗಿ ಎನ್ಜಿಒವೊಂದು 'ಕರುಣೆಯ ಗೋಡೆ' ಎಂಬ ಮಳಿಗೆಯನ್ನು ನಗರದ ಕೆ.ಆರ್ ಎಸ್ ರಸ್ತೆಯ ದಾಸಪ್ಪ ವೃತ್ತದ ಬಳಿ ಪ್ರಾರಂಭಿಸಿದೆ. ಈ ಮಳಿಗೆಯಲ್ಲಿ ನಮಗೆ ಬೇಡವಾದ ವಸ್ತುಗಳಾದ ಬ್ಯಾಗ್, ಪುಸ್ತಕ, ಶೂಗಳನ್ನು ಬಿಟ್ಟು ಹೋಗಬಹುದು. ಇಲ್ಲೊಂದು ವಿಶೇಷವಿದೆ.
ಇಲ್ಲಿ ನಮಗೆ ಬೇಡದ ಪುಸ್ತಕಗಳು, ಬ್ಯಾಗ್ಸ್, ಶೂ, ಬಟ್ಟೆಗಳು, ಏನೇ ಇದ್ದರೂ ಇಲ್ಲಿ ನೀಡಿದಲ್ಲಿ ದುಬಾರಿ ಬೆಲೆ ಕೊಟ್ಟು ಖರೀದಿಸಲಾಗದವರು ಕೊಂಡೊಯ್ಯಬಹುದು. ಅಗತ್ಯವಿಲ್ಲದಿದ್ದರೆ ಇಲ್ಲಿ ಬಿಡಿ, ಅಗತ್ಯವಿದ್ದರೆ ತೆಗೆದುಕೊಳ್ಳಿ ಎಂಬ ಬರಹದಡಿ ಕರುಣೆಯ ಗೋಡೆ ತಲೆಯೆತ್ತಿ ನಿಂತಿದೆ.
ಯಂಗ್ ಇಂಡಿಯನ್ ನ ಮೈಸೂರು ವಿಭಾಗದ ಮುಖ್ಯಸ್ಥೆ ಅಕ್ಷರ ಕುಮಾರ್ ಅವರು ಈ ಸಂಸ್ಥೆ ಬೆಳೆದುಬಂದ ಬಗ್ಗೆ, ನಡೆಸುತ್ತಿರುವ ಚಟುವಟಿಕೆಗಳ ಬಗ್ಗೆ ಒನ್ಇಂಡಿಯಾ ಕನ್ನಡದೊಡನೆ ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಾರೆ.

ಯಂಗ್ ಇಂಡಿಯನ್ ತಂಡದ ಉದ್ದೇಶವೇನು?
'ಯಂಗ್ ಇಂಡಿಯನ್' ಎಂಬ ಹೆಸರಿನ ಈ ಎನ್ ಜಿ ಓ, ಮೈಸೂರಿನಲ್ಲಿ ಸುಮಾರು 60ಕ್ಕೂ ಹೆಚ್ಚು ಯುವ ತರುಣರ ಪಡೆಯನ್ನು ಕಟ್ಟಿದೆ. ಇವರ ಕಾಯಕವೇ ಬಡವರ ಸೇವೆ. ವೃತ್ತಿಯಲ್ಲಿ ಇವರೆಲ್ಲರು ಉನ್ನತ ಹುದ್ದೆಯಲ್ಲಿದ್ದಾರೆ. ಆದರೆ ತಮ್ಮ ಸಮಾಜಮುಖಿ ಕಾಯಕಗಳಿಂದಲೇ ಬಡವರ ಸೇವೆಗೆ ಮುಂದಾಗಿದ್ದಾರೆ. ಇಂಥವರ ಸಂಖ್ಯೆ ಇನ್ನಷ್ಟು ಹೆಚ್ಚಾಗಲಿ.

ಯೋಜನೆ ರೂಪುಗೊಂಡಿದ್ದು ಹೇಗೆ?
ಇದೇ ತೆರನಾದ ಯೋಜನೆ ಸದ್ಯ ಹೈದರಾಬಾದ್ ಸೇರಿದಂತೆ ಹಲವು ರಾಜ್ಯಗಳಲ್ಲಿದೆ. ನಮ್ಮ ರಾಜ್ಯದಲ್ಲಿ ಎಂದಿಗೂ ಕೂಡ ಈ ರೀತಿಯ ಯೋಜನೆ ಜಾರಿಗೆ ತರುವಲ್ಲಿ ಯಾರೂ ಮುಂದೆ ಬಂದಿರಲಿಲ್ಲ. ಹಾಗಾಗಿ ಒಮ್ಮೆ ಹಾಗೆಯೇ ಮಾತಿಗೆ ಕುಳಿತಾಗ ಮೈಸೂರಿನಲ್ಲಿ ಈ ಯೋಜನೆಯನ್ನು ಆರಂಭಿಸದರೆ ಹೇಗೇ ಎಂಬ ಕಲ್ಪನೆ ಮೂಡಿತು. ಅದಕ್ಕೆ ಎಲ್ಲರ ಸಹಕಾರವೂ ದೊರೆಯಿತು. ನಮ್ಮ ತಂಡದ ಸದಸ್ಯರಾದ ನಿಧಿ ಶಾ, ಪ್ರತಿಭಾ ನಾಯ್ಕ್, ವಿನಯ್ ಶಂಕರ್, ಚೈತ್ರ ನಾರಾಯಣ್, ರಾಧ ಎಲ್ಲರೂ ಈ ಯೋಜನೆಗಾಗಿ ಶ್ರಮಿಸಿದೆವು.

ಯಾರೂ ಇದನ್ನು ದುರುಪಯೋಗಪಡಿಸಿಕೊಂಡಿಲ್ಲ
ಯೋಜನೆಯನ್ನು ಜಾರಿಗೆ ತಂದಿದ್ದು, ಜನರು ಇದರ ಸದುಪಯೋಗಪಡಿಸಿಕೊಳ್ಳಬೇಕೇ ಹೊರತು, ಇದರ ದುರುಪಯೋಗವಲ್ಲ. ಜನರ ಪ್ರತಿಕ್ರಿಯೆ ನೋಡಿ ನಮಗೆ ಸಂತಸವಾಗುತ್ತಿದೆ. ಇನ್ನು ಮೇಯರ್ ನಮ್ಮ ಯೋಜನೆಗೆ ಸಹಾಯವಾಗಲೆಂದು ಸಿಸಿಟಿವಿ ಕೊಡುವುದಾಗಿ ಭರವಸೆ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ನಮ್ಮ ತಂಡದಿಂದ ಮತ್ತಷ್ಟು ಯೋಜನೆ ಜಾರಿಗೆ ತರುತ್ತೇವೆ ಎನ್ನುತ್ತಾರೆ ಅಕ್ಷರ.

ಈ ಮಳಿಗೆ ಹೇಗೆ ಕಾರ್ಯನಿರ್ವಹಿಸುತ್ತದೆ?
ಈ ಮಳಿಗೆಯಲ್ಲಿ ನಮಗೆ ಬೇಡವಾದ ವಸ್ತುಗಳಾದ ಬ್ಯಾಗ್, ಪುಸ್ತಕ, ಶೂಗಳನ್ನು ಬಿಟ್ಟು ಹೋಗಬಹುದು. ನಿಮಗೆ ಬೇಕಾದ ವಸ್ತುಗಳು ಈ ಮಳಿಗೆಯಲ್ಲಿದರೆ ಉಚಿತವಾಗಿ ಕೊಂಡೊಯ್ಯಬಹುದು ಎಂಬ ಪರಿಕಲ್ಪನೆಯಿಂದ ಈ ಮಳಿಗೆಯನ್ನ ಪ್ರಾರಂಭಿಸಲಾಗಿದೆ. ದುಬಾರಿ ಹಣಕೊಟ್ಟು ಖರೀದಿಸಲಾಗದವರು ಇಲ್ಲಿಂದ ವಸ್ತುಗಳನ್ನು ಕೊಂಡೊಯ್ಯಬಹುದು. ಆದರಿಂದಲೇ ಈ ಮಳಿಗೆಯ ಮೇಲೆ ನಿಮಗೆ 'ಅಗತ್ಯವಿಲ್ಲದಿದ್ದರೇ ಇಲ್ಲಿ ಬಿಡಿ, ಅಗತ್ಯವಿದ್ದರೆ ತೆಗೆದುಕೊಳ್ಳಿ' ಎಂಬ ಪರಿಕಲ್ಪನೆಯಿಂದ ಈ ಅಂಗಡಿಗೆ 'ಕರುಣೆಯ ಗೋಡೆ' ಎಂದು ಹೆಸರಿಡಲಾಗಿದೆ.

ಇಂದಿನ ಪೀಳಿಗೆಯ ಯುವಕರಿಗೆ ಮಾದರಿ
ನಮ್ಮ ಯುವಜನರು ಎಂದರೇ ಸಾಕು ಮೊಬೈಲ್, ಚಾಟಿಂಗ್, ನೆಟ್, ಬ್ರೌಸಿಂಗ್ ಎಂದು ಬಡಬಡಾಯಿಸುವವರೇ ಹೆಚ್ಚು. ಅಂಥವರಿಗೆ ಈ ತಂಡ ಮಾಡುತ್ತಿರುವ ಸಮಾಜಮುಖಿ ಕಾಯಕ ಮಾದರಿ ಎನ್ನಬಹುದು. ಮಾನವೀಯತೆಯೊಂದಿದ್ದರೆ ಎಂಥ ಕೆಲಸ ಕೂಡ ಸಾಧ್ಯ ಎನ್ನುವುದನ್ನು ಇವರು ತೋರಿಸಿಕೊಟ್ಟಿದ್ದಾರೆ. ಹ್ಯಾಟ್ಸ್ ಆಫ್ ಟು ಯಂಗ್ ಇಂಡಿಯನ್ ಟೀಂ.
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications