ಗಣೇಶ ಹಬ್ಬ ಆಚರಣೆಗೆ ಕೈಜೋಡಿಸಿದ ಮುಸ್ಲಿಂ ಭಾಂದವರು
ಮೈಸೂರು, ಸೆಪ್ಟೆಂಬರ್ 13 : ದೇವರು, ಹಬ್ಬ, ಆಚರಣೆಗಳೆಲ್ಲವನ್ನೂ ಧರ್ಮ-ಧರ್ಮಗಳ ನಡುವೆ ದಳ್ಳುರಿ ಹಚ್ಚಲು ಬಳಸುತ್ತಿರುವ ಈ ದಿನಮಾನಗಳಲ್ಲಿ ಮೈಸೂರಿನಲ್ಲಿ ಇದಕ್ಕೆ ವ್ಯತಿರಿಕ್ತವಾದ ಧರ್ಮಾತೀತವಾದ ಘಟನೆ ನಡೆದಿದೆ.
ನಗರದ ಕೃಷ್ಣರಾಜ ಮೊಹಲ್ಲಾದ ಸುಣ್ಣದಕೇರಿ ಬಳಿ ಇರುವ ಕಾಕರವಾಡಿಯ 8ನೇ ಕ್ರಾಸ್ನಲ್ಲಿ ಹಿಂದೂ ಮತ್ತು ಮುಸ್ಲಿಂ ಯುವಕರು ಒಟ್ಟಾಗಿ ಗಣೇಶ ಚತುರ್ಥಿ ಆಚರಿಸಿದ್ದಾರೆ.
ಶ್ರೀ ವಿನಾಯಕ ಯುವಕರ ಭಕ್ತ ಮಂಡಳಿ 15 ವರ್ಷಗಳಿಂದ ಗಣೇಶ ಮೂರ್ತಿಯನ್ನು ಪತ್ರಿಷ್ಠಾಪಿಸಿ ಭ್ರಾತೃತ್ವ ಭಾವದಲ್ಲಿ ಹಬ್ಬ ಆಚರಿಸುತ್ತಿದೆ. ಭರತ್ ಕುಮಾರ್ , ನಾಸಿರ್, ಪುನೀತ್, ರಾಜು, ವಿನುತ್, ಸಚಿನ್, ನಯಾಜ್ ಪಾಷ, ಅಜ್ಮಲ್, ರಿಜ್ವಾನ್, ತೌಹಿದ್ ಪಾಷ ಈ ತಂಡದ ಸದಸ್ಯರಾಗಿದ್ದಾರೆ. ಗಂಗಾಮತಸ್ಥರ ಸಂಘ, ಚಾಮುಂಡೇಶ್ವರಿ ಯುವಕರ ನಾಗರಿಕ ಸಮಿತಿ, ಈಗಲ್ ಟೀಮ್ ಇವರಿಗೆ ಸಾಥ್ ನೀಡುತ್ತಿವೆ.

28 ರಿಂದ 37 ವರ್ಷ ಆಸುಪಾಸಿನ ಇವರು ಕ್ಯಾಬ್, ಆಟೋ ಚಾಲನೆ, ಎಲೆಕ್ಟ್ರಿಕಲ್ ವೈರಿಂಗ್, ತರಕಾರಿ ಮಾರಾಟ ಮತ್ತಿತರ ಸಣ್ಣಪುಟ್ಟ ಕೆಲಸ ಮಾಡುತ್ತಾ ಜೀವನ ಸಾಗಿಸುತ್ತಿದ್ದಾರೆ. ತಮ್ಮ ಧರ್ಮ, ನಂಬಿಕೆ, ವೃತ್ತಿ, ಜೀವನರೀತಿ, ಸಂಪಾದನೆ ಯಾವುದೇ ಅಂಶಗಳು ಸಾರ್ವಜನಿಕವಾಗಿ ಗೌರಿ ಗಣೇಶ ಹಬ್ಬ ಆಚರಣೆಗೆ ಎಂದಿಗೂ ತೊಡಕಾಗಿಲ್ಲ ಎನ್ನುತ್ತಾರೆ ಈ ಯುವಕರು.
ಹಬ್ಬದ ದಿನ ಮಂಡಳಿ ಸದಸ್ಯರೆಲ್ಲಾ ಸೇರಿ ಸಾಂಪ್ರದಾಯಿಕವಾಗಿ ಗೌರಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಪೂಜೆ ಮಾಡಿ ಪ್ರಸಾದ ವಿತರಿಸುತ್ತಾರೆ. ಹಿಂದಿನ ವರ್ಷಗಳಲ್ಲಿ 7 ದಿನಗಳ ಕಾಲ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ನಾಟಕ, ರಸಮಂಜರಿ ಕಾರ್ಯಕಮಗಳನ್ನು ಏರ್ಪಡಿಸುತ್ತಿದ್ದೆವು. ಆದರೆ, ಈ ವರ್ಷ ಜಿಲ್ಲಾಡಳಿತದ ನಿಯಮಗಳಿಗೆ ಅನುಸಾರ 3 ದಿನಗಳ ಕಾಲ ಆಚರಣೆ ನಡೆಯಲಿದೆ. ಈ ಸಂದರ್ಭದಲ್ಲಿ ಮಹಿಳೆಯರಿಗೆ ರಂಗೋಲಿ ಸ್ಪರ್ಧೆ, ಮಕ್ಕಳಿಗೆ ವಿವಿಧ ಸ್ಪರ್ಧೆ ಏರ್ಪಡಿಸಿ ಬಹುಮಾನ ವಿತರಿಸಲಾಗುತ್ತದೆ, ಅನ್ನಸಂತರ್ಪಣೆ ಹಮ್ಮಿಕೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.
ಕೊನೆ ದಿನ ವಿಜೃಂಭಣೆಯಿಂದ ವಿಸರ್ಜನಾ ಉತ್ಸವ ನೆರವೇರಿಸಲಾಗುವುದು. ಬಲವಂತ ಚಂದಾ ವಸೂಲಿ ಇಲ್ಲ. ನಾವೇ ಹಣ ಹಾಕಿ ಆಚರಣೆ ಮಾಡುತ್ತೇವೆ. ಯಾರಾದರೂ ಸ್ವಇಚ್ಛೆಯಿಂದ ಅಕ್ಕಿ ಮತ್ತಿತರೆ ಪದಾರ್ಥಗಳನ್ನು ನೀಡಿದರೆ ಸ್ವೀಕರಿಸುತ್ತೇವೆ ಎಂದು ಸದಸ್ಯರು ವಿವರಿಸಿದರು.
ಆಷಾಢ ಶುಕ್ರವಾರ ಚಾಮುಂಡೇಶ್ವರಿ ದೇವಿ ಪೂಜೆ, ಗಂಗಾಮಾತೆ, ಮಾರಿಹಬ್ಬ, ಶನೀಶ್ವರ ಉತ್ಸವ, ರಂಜಾನ್, ಬಕ್ರಿದ್ ಹಬ್ಬಗಳನ್ನೂ ಸೌಹಾರ್ದಯುತವಾಗಿ ಆಚರಿಸುವುದಾಗಿ ಹೇಳಿರುವ ಮಂಡಳಿ ಸದಸ್ಯರು, ಸರಳ ರೀತಿಯಲ್ಲಿಯೇ ಭಾವೈಕ್ಯತೆಯ ಸಂದೇಶ ಸಾರುತ್ತಿದ್ದಾರೆ.
-
"ನಾನು ಭಾರತವನ್ನು ಪ್ರೀತಿಸುತ್ತೇನೆ... ಆದರೆ ನನ್ನನ್ನು ಬೆಳೆಸಿದ್ದು UAE": ಭಾರತ ಮೂಲದ ಮಹಿಳಾ ಉದ್ಯಮಿ ರೂಪಾ ಝಾ ಪೋಸ್ಟ್ Viral -
Karnataka Weather: ಧಾರವಾಡದಲ್ಲಿ 101 ಮಿಮೀ ಮಳೆ ದಾಖಲು, ಒಳನಾಡಿಗೆ ಅಲಿಕಲ್ಲು ಸಹಿತ ಮಳೆ ಮುನ್ಸೂಚನೆ -
Teachers Recruiment: ಪ್ರಾಥಮಿಕ, ಪ್ರೌಢ ಶಾಲೆಗಳ ದೈಹಿಕ ಶಿಕ್ಷಕರ ನೇರ ನೇಮಕಾತಿ: ಮಧು ಬಂಗಾರಪ್ಪ -
ದೆಹಲಿ ಮೆಟ್ರೋ ಸಂಸ್ಕೃತಿ ಬೆಂಗಳೂರಿಗೂ ಬಂತಾ? ಮೆಟ್ರೋದಲ್ಲಿ ಯುವತಿಯರಿಂದ ನಿಯಮ ಉಲ್ಲಂಘನೆ Video Viral -
Byadgi Red Chilli: ಬ್ಯಾಡಗಿ ಮಾರುಕಟ್ಟೆಗೆ 2.43 ಲಕ್ಷ ಮೆಣಸಿನಕಾಯಿ ಚೀಲ ಆವಕ, ಕ್ವಿಂಟಾಲ್ ದರವೆಷ್ಟಿದೆ? -
CBSE 10ನೇ ತರಗತಿ ಬೋರ್ಡ್ ಪರೀಕ್ಷೆ 2026: ಫಲಿತಾಂಶ ಯಾವಾಗ ಪ್ರಕಟ?, ಕಳೆದ ವರ್ಷಗಳ ಟ್ರೆಂಡ್ ಹೀಗಿದೆ -
Nora Fatehi: ಕನ್ನಡ ಹಾಡಿನಿಂದ ವಿವಾದಕ್ಕೆ ಸಿಲುಕಿರುವ ಬಾಲಿವುಡ್ನ ಡ್ಯಾನ್ಸ್ ಕ್ವೀನ್ ನೋರಾ ಫತೇಹಿ ಅಸಲಿ ಕಥೆ ಇದು -
March 18 Horoscope: ಧನ, ಆರೋಗ್ಯ, ಉದ್ಯೋಗದ ಭವಿಷ್ಯ -
Ugadi Wishes 2026: ಯುಗಾದಿ ಹಬ್ಬದ ಶುಭಾಶಯಗಳು, 35+ ಮೆಸೇಜ್, ಶುಭಾಶಯ ಮತ್ತು ಸ್ಟೇಟಸ್ ಸಾಲುಗಳು ಇಲ್ಲಿವೆ -
Bengaluru Rent: ಬೆಂಗಳೂರಲ್ಲಿ ನಾನ್ವೆಜ್ ಪ್ರಿಯರಿಗೆ ಶಾಕ್: ಮಾಂಸಾಹಾರಿಗಳಿಗೆ ಸಿಗ್ತಿಲ್ಲ ನಗರದಲ್ಲಿ ಬಾಡಿಗೆ ಮನೆ -
Anganwadi Workers: ಅಂಗನವಾಡಿ ಕಾರ್ಯಕರ್ತೆಯರ ವೇತನ ಪರಿಷ್ಕರಣೆ: ಲಕ್ಷ್ಮಿ ಹೆಬ್ಬಾಳ್ಕರ್ ಅಪ್ಡೇಟ್ಸ್ -
Karnataka Rain Alert: ರಾಜ್ಯದ ಹಲವೆಡೆ ಆಲಿಕಲ್ಲು ಮಳೆ, ಮಿನಿ ಕಾಶ್ಮೀರದಂತಾದ ರಸ್ತೆಗಳು; ಇನ್ನೆಷ್ಟು ದಿನ ವರುಣನ ಆರ್ಭಣ?












Click it and Unblock the Notifications