ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಾಂಗ್ರೆಸ್ ವಿರುದ್ಧ ಮತ್ತೆ ಗರಂ ಆದ ಸಿಎಂ ಎಚ್.ಡಿ. ಕುಮಾರಸ್ವಾಮಿ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಫೆಬ್ರವರಿ 19: ಕಾಂಗ್ರೆಸ್ ವಿರುದ್ಧ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತೆ ಗರಂ ಆಗಿದ್ದಾರೆ.

ಲೋಕಸಭಾ ಚುನಾವಣೆ ಸೀಟು ಹಂಚಿಕೆ ವಿಚಾರದಲ್ಲಿ ಕಾಂಗ್ರೆಸ್ ಗೆ ಟಾಂಗ್ ಕೊಟ್ಟ ಸಿಎಂ, "ನಾವು ಬೆಗ್ಗರ್ಸ್ ಅಲ್ಲ. ನಮಗೆ ಏಳೋ, ಐದೋ, ಮೂರೋ ಸೀಟು ಬಿಟ್ಟು ಕೊಡ್ತಾರೋ ಗೊತ್ತಿಲ್ಲ. ವೀ ಆರ್ ನಾಟ್ ಬೆಗ್ಗರ್ಸ್" ಎಂದು ಸಿಟ್ಟಾದರು.

ಲೋಕಸಭಾ ಚುನಾವಣೆಯ ಮೈತ್ರಿ : ಜೆಡಿಎಸ್‌ಗೆ ಸಿಗುವುದು 7 ಸೀಟು ಮಾತ್ರ!ಲೋಕಸಭಾ ಚುನಾವಣೆಯ ಮೈತ್ರಿ : ಜೆಡಿಎಸ್‌ಗೆ ಸಿಗುವುದು 7 ಸೀಟು ಮಾತ್ರ!

ರಾಷ್ಟ್ರಕ್ಕೆ ಒಂದು ಸಂದೇಶ ರವಾನೆ ಆಗಬೇಕಾದರೆ ಎಲ್ಲರೂ ಕೂತು ಸೀಟು ಹಂಚಿಕೆ ಬಗ್ಗೆ ಚರ್ಚೆ ಮಾಡಬೇಕು.ಆಡಳಿತದ ಕಡೆಗೆ ನಾನು ಗಮನಹರಿಸಿದ್ದೇನೆ. ನಮ್ಮ ರಾಷ್ಟ್ರಧ್ಯಕ್ಷರು ಕಾಂಗ್ರೆಸ್ ಜೊತೆ ಕೂತು ಮಾತಾಡಿ ಸೀಟು ಹಂಚಿಕೆ ಮಾಡಿಕೊಳ್ತಾರೆ.ನಾನು ಈ ಸ್ಥಾನ ಹಂಚಿಕೆ ಬಗ್ಗೆ ಯೋಚನೆ ಮಾಡಿಲ್ಲ ಎಂದು ಮೈಸೂರಿನಲ್ಲಿ ಎಚ್.ಡಿ.ಕೆ. ಹೇಳಿಕೆ ನೀಡಿದ್ದಾರೆ.

HD Kumaraswamy has again angered about Congress

ಲ್ಯಾನ್ಸ್ ಡೌನ್ ಕಟ್ಟಡ, ದೇವರಾಜ ಮಾರುಕಟ್ಟೆ ನೆಲಸಮ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಇದೊಂದು ಭಾವನಾತ್ಮಕ ಸಂಬಂಧದ ವಿಚಾರ.ಇಂದು ಕಟ್ಟಡ ವೀಕ್ಷಣೆ ಮಾಡಿದ್ದೇನೆ.ಕಟ್ಟಡ ನೆಲಸಮ ಮಾಡೋ ವಿಚಾರ ಸಂಬಂಧ ಯಾವುದೇ ವರದಿ ನನ್ನ ಕೈ ಸೇರಿಲ್ಲ.

 ಕಾಂಗ್ರೆಸ್ ಶಾಸಕ ಉಮೇಶ್ ಜಾಧವ್ ಮಾರ್ಚ್ 1ಕ್ಕೆ ಬಿಜೆಪಿ ಸೇರ್ತಾರಾ? ಕಾಂಗ್ರೆಸ್ ಶಾಸಕ ಉಮೇಶ್ ಜಾಧವ್ ಮಾರ್ಚ್ 1ಕ್ಕೆ ಬಿಜೆಪಿ ಸೇರ್ತಾರಾ?

ನಾನು ಖುದ್ದು ಕಟ್ಟಡ ವೀಕ್ಷಣೆ ಮಾಡಿದ್ದೇನೆ, ಅಲ್ಲಲ್ಲಿ ಕಟ್ಟಡ ಶಿಥಿಲವಾಗಿದೆ.ಪಾರಂಪರಿಕತೆ, ಭಾವನಾತ್ಮಕ ವಿಚಾರಕ್ಕೆ ಧಕ್ಕೆ ಬಾರದಂತೆ ಅಂತಿಮ ಕ್ರಮ ಕೈಗೊಳ್ಳಲಾಗುತ್ತದೆ. ಅಧಿಕಾರಿಗಳು, ತಜ್ಞರು, ಇತಿಹಾಸ ತಜ್ಞರ ಜೊತೆ ಸಭೆ ಮಾಡಿ ಅಂತಿಮ ನಿರ್ಣಯ ಕೈಗೊಳ್ಳಲಾಗುವುದು ಎಂದರು.

English summary
Chief Minister HD Kumaraswamy has again angered about Congress behaviour.He spoke with media persons and reacted about Lok Sabha Election seat sharing.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X