ಗುಂಡ್ಲುಪೇಟೆ: ಕಾರಿನಲ್ಲಿ ಸಿಕ್ತು 20 ಲಕ್ಷ ರೂ.ನಗದು
ಗುಂಡ್ಲುಪೇಟೆಯ ಖಾಸಗಿ ಹೊಟೇಲ್ ಮುಂದೆ ನಿಂತಿದ್ದ ಸಾರಿಗೆ ಸಂಸ್ಥೆಯ ನಿರ್ದೇಶಕರೊಬ್ಬರ ಕಾರಿನಲ್ಲಿ ಎರಡುಸಾವಿರ ಮುಖಬೆಲೆಯ ಹತ್ತು ಕಂತೆ ಪತ್ತೆಯಾಗಿದೆ.
ಮೈಸೂರು, ಏಪ್ರಿಲ್ 7 : ಗುಂಡ್ಲುಪೇಟೆ ಖಾಸಗಿ ಹೊಟೇಲ್ ಬಳಿಯಲ್ಲಿ ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ನಿರ್ದೇಶಕರೊಬ್ಬರ ಕಾರಿನಲ್ಲಿ ಲಕ್ಷಾಂತರ ರೂ.ನಗದು ಪತ್ತೆಯಾಗಿದ್ದು, ಈ ಹಣ ಕಾಂಗ್ರೆಸ್ ಪಕ್ಷಕ್ಕೆ ಸಂಬಂಧಿಸಿದ್ದಿರಬಹುದೆಂದು ಅನುಮಾನಿಸಲಾಗಿದೆ..
ಗುಂಡ್ಲುಪೇಟೆಯ ಖಾಸಗಿ ಹೊಟೇಲ್ ಮುಂದೆ ನಿಂತಿದ್ದ ಈ ಕಾರಿನಲ್ಲಿ ಎರಡುಸಾವಿರ ಮುಖಬೆಲೆಯ ಹತ್ತು ಕಂತೆ ಪತ್ತೆಯಾಗಿದೆ.
ಇದರಲ್ಲಿ ಸುಮಾರು 20 ಲಕ್ಷರೂ ಹಣ ಇರಬಹುದೆಂದು ಅಂದಾಜಿಸಲಾಗಿದ್ದು, ಬಿಜೆಪಿ ಕಾರ್ಯಕರ್ತರು ಕಾರ್ಯಚಾರಣೆ ನಡೆಸಿ ಹಣ ಪತ್ತೆ ಹಚ್ಚಿದ್ದಾರೆ ಎನ್ನಲಾಗಿದೆ. ಗುಂಡ್ಲುಪೇಟೆ ಪಟ್ಟಣ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು ಪರಿಶೀಲನೆ ನಡೆಸಿದ್ದಾರೆ.[ಕಾಂಗ್ರೆಸ್-ಬಿಜೆಪಿ ಉಪಚುನಾವಣೆ ಅಬ್ಬರ ಪ್ರಚಾರದ ಅಸಲಿಯತ್ತು ಏನು?]
ಉಪಚುನಾವಣೆ:
ಬಿಜೆಪಿಯಿಂದ
13
ಪ್ರಕರಣ
ದಾಖಲು
ಏಪ್ರಿಲ್
9
ರಂದು
ರಾಜ್ಯದ
ಗುಂಡ್ಲುಪೇಟೆ
ಮತ್ತು
ನಂಜನಗೂಡು
ಎರಡು
ವಿಧಾನಸಭಾ
ಕ್ಷೇತ್ರಗಳಲ್ಲಿ
ಉಪಚುನಾವಣೆ
ನಡೆಯಲಿದ್ದು,
ಚುನಾವಣಾ
ನೀತಿ
ಸಂಹಿತೆ
ಉಲ್ಲಂಘನೆಗೆ
ಸಂಬಂಧಿಸಿದಂತೆ
ಬಿಜೆಪಿಯಿಂದ
ಇಲ್ಲಿಯವರೆಗೆ
ಒಟ್ಟು
13
ದೂರುಗಳು
ದಾಖಲಾಗಿವೆ.[ಗೆಲುವು
ನಮ್ಮದೇ
:
ನಿರಂಜನ್
ಕುಮಾರ್
ಮನದ
ಮಾತು]
ಗುಂಡ್ಲುಪೇಟೆ ಹಾಗೂ ನಂಜನಗೂಡಿನಲ್ಲಿ ಕಾಂಗ್ರೆಸ್ ನೀತಿ ಸಂಹಿತೆ ಉಲ್ಲಂಘನೆ ಮಾಡಿದೆ ಎಂಬ ವಿವರವನ್ನೊಳಗೊಂಡ ಈ ದೂರುಗಳು ನಂಜನಗೂಡು, ಗುಂಡ್ಲುಪೇಟೆ ಹಾಗೂ ಬೆಂಗಳೂರಿನ ಆಯೋಗದ ಕಚೇರಿಗಳಲ್ಲಿ ದಾಖಲಾಗಿವೆ. ಕಾಂಗ್ರೆಸ್ ನ ಸಾಮಾನ್ಯ ಕಾರ್ಯಕರ್ತರಿಂದ ಹಿಡಿದು, ಮುಖ್ಯಮಂತ್ರಿ, ಸಚಿವರು ಹಾಗೂ ಶಾಸಕರ ವಿರುದ್ಧವೂ ದೂರು ದಾಖಲಾಗಿದೆ.