ನಂಜನಗೂಡಿನ ಹಾರೋಪುರದಲ್ಲಿ ರೈಲ್ವೆ ಬೋಗಿಯಂಥೊಂದು ಸರಕಾರಿ ಶಾಲೆ!
ಮೈಸೂರು, ಜುಲೈ 10 : ದೂರದಿಂದ ನೋಡಿದಾಗ ಅಲ್ಲೊಂದೆರಡು ಹೊಚ್ಚ ಹೊಸ ರೈಲು ಬೋಗಿಗಳು ನಿಂತಿರುವಂತೆ ಕಂಡಿತು. ಹಿಂದೆ- ಮುಂದೆ ಕಣ್ಣಾಡಿಸಿದರೆ ಹಳಿಗಳೇನೂ ಕಾಣಲಿಲ್ಲ! ಅರೆ, ಇದೇನಿದು ಹಳಿಯೇ ಇಲ್ಲದೇ ಈ ಕಡು ನೀಲಿ ಬಣ್ಣದ ರೈಲು ಬೋಗಿಗಳು ಇಲ್ಲಿಗೆ ಬಂದು ನಿಂತಿದ್ದಾದರೂ ಹೇಗೆ?
ಅದ್ಯಾರದು, ಬೋಗಿಗಳ ಬಾಗಿಲಂಚಲ್ಲಿ ಇಣುಕಿ ನೋಡುತ್ತಿರುವವರು? ಕುತೂಹಲ ತಡೆಯಲಾರದೆ ಆ ರೈಲು ಬೋಗಿಗಳ ಸಮೀಪಕ್ಕೆ ತೆರಳಿ ನೋಡಿದಾಗ ಅಚ್ಚರಿಯೋ ಅಚ್ಚರಿ!
ವಾಸ್ತವಕ್ಕೆ ಅವು ರೈಲ್ವೆ ಬೋಗಿಗಳೇ ಅಲ್ಲ; ರೈಲ್ವೆ ಬೋಗಿಯಂತೆ ಕಾಣುವ ಸರಕಾರಿ ಶಾಲೆಗಳ ಕೊಠಡಿಗಳು! ಬಾಗಿಲಲ್ಲಿ ಇಣುಕಿ ನೋಡುತ್ತಿದ್ದವರು ಪ್ರಯಾಣಿಕರಲ್ಲ. ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಮತ್ತು ಶಿಕ್ಷಕರು. ಸರಕಾರಿ ಶಾಲೆಯನ್ನು ಹೀಗೂ ನಿರ್ಮಿಸಿ ಹಳ್ಳಿಗಾಡಿನ ವಿದ್ಯಾರ್ಥಿಗಳನ್ನು ಸಂತಸಪಡಿಸಬಹುದು, ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಶಾಲೆ ಸೇರುವಂತೆ ಆಕರ್ಷಿಸಬಹುದು.
ಇಂಥದೊಂದು ಪರಿಕಲ್ಪನೆ ವಿನ್ಯಾಸಗೊಳಿಸಿದವರನ್ನು ಅಭಿನಂದಿಸಲೇಬೇಕು. ಹೌದು, ನಂಜನಗೂಡು ತಾಲೂಕಿನ ಹಾರೋಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಕಟ್ಟಡ ಹೀಗೆ ಭಿನ್ನ ರೀತಿಯಲ್ಲಿ ನಿರ್ಮಾಣಗೊಂಡು ಆಕರ್ಷಕ ಎನಿಸಿದೆ.

ಥೇಟ್ ರೈಲು ಬೋಗಿಯಂತಿದೆ
ಸಾಮಾನ್ಯವಾಗಿ ಗ್ರಾಮೀಣ ಭಾಗದಲ್ಲಿ ನಿರ್ಮಾಣಗೊಳ್ಳುವ ಸರಕಾರಿ ಶಾಲೆಗಳ ಕಟ್ಟಡಗಳು ಯಾವುದೇ ವಿಶೇಷ ವಿನ್ಯಾಸವಿಲ್ಲದೆ, ಗೋದಾಮು ರೀತಿಯಲ್ಲಿಯೇ ಗೋಚರಿಸುತ್ತವೆ. ಆದರೆ ಹಾರೋಪುರದ ಸರಕಾರಿ ಶಾಲೆಯ ಈ ವಿಭಿನ್ನ ಕಟ್ಟಡ, ನಗರದ ಖಾಸಗಿ ಶಾಲೆಗಳಿಗೇ ಸಡ್ಡು ಹೊಡೆಯವಂತಿದೆ. ದೂರದಿಂದಷ್ಟೇ ಅಲ್ಲ, ಹತ್ತಿರ ಹೋದ ಬಳಿಕವೂ ಶಾಲಾ ಕೊಠಡಿಗಳ ನೋಟ ಥೇಟ್ ರೈಲು ಬೋಗಿಯೇ ಎನಿಸುವಂತಿದೆ.

ಶಾಲೆ ಶಿಕ್ಷಕ ದೊರೆಸ್ವಾಮಿ ಅವರ ಆಲೋಚನೆ
ಶಾಲೆಗೆ ಇಂಥ ಸುಂದರ ರೂಪ ನೀಡಿದವರು ವಾಸ್ತುಶಿಲ್ಪಿಯೂ ಅಲ್ಲ, ನುರಿತ ಸಿವಿಲ್ ಇಂಜಿನಿಯರ್ ಸಹ ಅಲ್ಲ. ಅವರು ಇದೇ ಶಾಲೆಯ ಶಿಕ್ಷಕ ದೊರೆಸ್ವಾಮಿ. ಅವರಿಗೆ ಸಹಕಾರ ನೀಡಿದವರು ಮುಖ್ಯ ಶಿಕ್ಷಕ ಬಸವನಾಯಕ. ತಮ್ಮ ಶಾಲೆ ಬೇರೆಲ್ಲ ಶಾಲೆಗಿಂತ ಸುಂದರವಾಗಿರಬೇಕು. ಅದರೊಂದಿಗೆ ಹೊಸತನವೂ ಇರಬೇಕು. ಆಕರ್ಷಣೀಯವಾಗಿಯೂ ಇರಬೇಕು ಎಂದು ಈ ರೀತಿಯ ರೂಪ ನೀಡಿದ್ದೇವೆ ಎನ್ನುತ್ತಾರೆ ಅವರು.

ಶಿಕ್ಷಕರು, ಮುಖ್ಯೋಪಾಧ್ಯಾಯರು ಹಣ ಹಾಕಿದ್ದಾರೆ
ಇದಕ್ಕಾಗಿ ನಾವೇನೂ ಹೆಚ್ಚು ಖರ್ಚು ಮಾಡಿಲ್ಲ ಎನ್ನುವ ಬಸವನಾಯಕ, ಶಾಲಾ ಅನುದಾನದ ಜೊತೆ ಈ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನಾಲ್ವರು ಶಿಕ್ಷಕರಾದ ನಾನು, ದೊರೆಸ್ವಾಮಿ, ತರನಂ ಖಾನ ಹಾಗೂ ನೇತ್ರಾವತಿ ಇನ್ನಷ್ಟು ಹಣ ಹಾಕಿ ಇರುವ ಕೊಠಡಿಗಳನ್ನು ರೈಲು ಬೋಗಿಯಂತಾಗಿಸಿ ಶಾಲೆಗೊಂದು ನೂತನ ವಿಶೇಷ ವಿನ್ಯಾಸ ನೀಡಿದ್ದೇವೆ ಎಂದರು.

ಶಿಕ್ಷಕರು ಹಾಗೂ ಮುಖ್ಯೋಪಾಧ್ಯಾಯರಿಗೆ ಹ್ಯಾಟ್ಸ್ ಆಫ್
ಸರಕಾರಿ ಶಾಲೆಗಳನ್ನೇ ಮುಚ್ಚಬೇಕೆಂಬ ಸರಕಾರದ ನಿರ್ಧಾರದ ಮಧ್ಯೆ ಶಾಲೆಗೆ ಮಕ್ಕಳನ್ನು ಸೆಳೆಯುವ ಪ್ರಯತ್ನದಲ್ಲಿ ಶಾಲಾ ಶಿಕ್ಷಕರ ಇಂತಹ ನಿರ್ಧಾರ ಮೆಚ್ಚುವಂತಹದ್ದೇ ಸರಿ. ತುತ್ತೋಚಾನ್ ಎಂಬ ಪುಸ್ತಕದಲ್ಲಿ ಜಪಾನ್ ನಲ್ಲಿ ಶಿಕ್ಷಣ ಪದ್ಧತಿ ಹೇಗಿತ್ತು ಎಂದು ತಿಳಿಸುವಾಗ ಇಂಥದ್ದೇ ರೈಲು ಬೋಗಿಯ ಪ್ರಸ್ತಾವ ಬರುತ್ತದೆ. ಈ ಸರಕಾರಿ ಶಾಲೆ ಶಿಕ್ಷಕರು ಹಾಗೂ ಮುಖ್ಯೋಪಾಧ್ಯಾಯರಿಗೆ ಹ್ಯಾಟ್ಸ್ ಆಫ್.
-
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ -
Horoscope March 11: ಈ ರಾಶಿಯವರಿಗೆ ಸಿಗಲಿವೆ ಹೊಸ ಅವಕಾಶಗಳು, ಬುದಕಿನಲ್ಲಿ ಯಶಸ್ಸು; ಇಂದಿನ ದಿನ ಭವಿಷ್ಯ -
KEA PGNEET: ಕೆಇಎಯಿಂದ ಮತ್ತೊಂದು ಸುತ್ತಿನ ಸೀಟು ಹಂಚಿಕೆ; 783 ವೈದ್ಯಕೀಯ ಸೀಟುಗಳು ಬಾಕಿ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅಸ್ತು: 13 ವರ್ಷಗಳಿಂದ ಹಾಸಿಗೆ ಹಿಡಿದಿದ್ದ ಮಗನಿಗೆ ಮುಕ್ತಿ ನೀಡಲು ಕೋರಿದ್ದ ಪೋಷಕರು -
ಮತ್ತೆ ಶುರುವಾಗುತ್ತಾ ವರ್ಕ್ ಫ್ರಂ ಹೋಮ್? ಇಂಧನ ಕೊರತೆ ಬೆನ್ನಲ್ಲೇ ಹಲವು ದೇಶಗಳಲ್ಲಿ ಕಚೇರಿಗಳಿಗೆ ನಿರ್ಬಂಧ -
ಬೇಸಿಗೆಯಲ್ಲಿ ನೀವು ಚಿಲ್ಡ್ ಬಿಯರ್ ಕುಡಿಯುತ್ತೀರಾ, ಬಾಟಲ್ ಕೆಳಗಿಟ್ಟು ಇದನ್ನು ಓದಿ -
ಅರಬ್ ದೇಶಗಳ ಬ್ಯಾಕಿಂಗ್ ಸೇವೆ ಮೇಲೆ ಇರಾನ್ ಸೇನೆ ದಾಳಿ ಸಾಧ್ಯತೆ ಹಿನ್ನೆಲೆ ಕಟ್ಟೆಚ್ಚರ | Operation Roaring Lion












Click it and Unblock the Notifications